ಕೋಲಾರ, ೦೩ ಜೂನ್ (ಹಿ.ಸ) :
ಆ್ಯಂಕರ್ : ಬಂಗಾರಪೇಟೆ ಪೊಲೀಸರು ವಾಹನ ಕಳ್ಳತನ ಪ್ರಕರಣಕ್ಕೆ ಸಂಬ0ಧಿಸಿದ0ತೆ ಆರೋಪಿಯನ್ನು ಬಂಧಿಸಿ, ಆತನಿಂದ ಸುಮಾರು ಹದಿನೆಂಟು ಲಕ್ಷದ ಅರವತ್ತು ಸಾವಿರ ರೂಪಾಯಿ ಬೆಲೆ ಬಾಳುವ ೧೭ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಜೂನ್ ೦೧ ರಂದು ದೂರುದಾರರಾದ ಹರಿಕೃಷ್ಣ ಎಂಬುವರು ಬಂಗಾರಪೇಟೆ ರೈಲ್ವೇ ನಿಲ್ದಾಣದ ಬಳಿ ಇರುವ ದ್ವಿಚಕ್ರ ವಾಹನ ಪಾರ್ಕಿಂಗ್ ಸ್ಟಾö್ಯಂಡ್ನಲ್ಲಿ ನಿಲ್ಲಿಸಿದ್ದ ತನ್ನ ದ್ವಿಚಕ್ರ ವಾಹನವು ಕಳ್ಳತನವಾಗಿರುವ ಬಗ್ಗೆ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ದ್ವಿಚಕ್ರ ವಾಹನ ಕಳವು ಪ್ರಕರಣಗಳಲ್ಲಿ ಆರೋಪಿ ಮತ್ತು ಮಾಲನ್ನು ಪತ್ತೆ ಮಾಡಲು ಡಿವೈಎಸ್ಪಿ ಎಸ್.ಪಾಂಡುರ0ಗ ರವರ ಮಾರ್ಗದರ್ಶನದಲ್ಲಿ ಬಂಗಾರಪೇಟೆ ಪಿಐ ಆರ್.ದಯಾನಂದ್ ರವರ ನೇತೃತ್ವದಲ್ಲಿ ಪಿಎಸ್ಐ ಎಸ್.ವಿ.ರಾಜಣ್ಣ ರವರನ್ನು ಒಳಗೊಂಡAತೆ ಅಪರಾಧ ಪತ್ತೆ ದಳವನ್ನು ರಚಿಸಲಾಗಿತ್ತು.
ಕಾರ್ಯಾಚರಣೆ ನಡೆಸಿದ ಪೊಲೀಸರು ಆಂದ್ರಪ್ರದೇಶ ರಾಜ್ಯ ಜಿತ್ತೂರು ಜಿಲ್ಲೆಯ ವಾಸಿ ಚಂದ್ರಚಾರಿ (೩೮ ವರ್ಷ) ಎಂಬಾತನನ್ನು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಬಂಗಾರಪೇಟೆ, ಬೇತಮಂಗಲ, ಕಮ್ಮಸಂದ್ರ, ಮುಳಬಾಗಿಲು, ಹೊಸಕೋಟೆ ಹಾಗೂ ಆಂದ್ರಪ್ರದೇಶದ ಕುಪ್ಪಂ ಕಡೆಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದನ್ನು ಆರೋಪಿ ಒಪ್ಪಿಕೊಂಡಿದ್ದಾನೆ. ಆರೋಪಿಯಿಂದ ರೂ.೧೮,೬೦,೦೦೦/- ಬೆಲೆ ಬಾಳುವ ೧೭ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಬಂಗಾರಪೇಟೆ ಪಿಐ ಆರ್.ದಯಾನಂದ್, ಪಿ.ಎಸ್.ಐ ಎಸ್.ವಿ.ರಾಜಣ್ಣ ಸಿಬ್ಬಂದಿಗಳಾದ ಮಂಜುನಾಥ್, ಗಜೇಂದ್ರ, ವಿಜಯ್ ಕುಮಾರ್, ಮಧುಕುಮಾರ್, ಸುನೀಲ್, ಸಂತೋಷ್ ಸಿದ್ದಾಪೂರ ರವರುಗಳ ಉತ್ತಮ ಕೆಲಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾ0ತರಾಜು ಪ್ರಶಂಶಿಸಿದ್ದಾರೆ.
ಚಿತ್ರ : ಬಂಗಾರಪೇಟೆ ಪೊಲೀಸರು ಕಳುವಾಗಿದ್ದ ೧೭ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್