ಬೆಂಗಳೂರು, 3 ಜೂನ್ (ಹಿ.ಸ.) :
ಆ್ಯಂಕರ್ : ಮೈಸೂರು ಸ್ಯಾಂಡಲ್ ಸೋಪ್ ತಯಾರಿಕೆಗೆ ಅಗತ್ಯವಿರುವ ಗಂಧದ ಎಣ್ಣೆಯನ್ನು ಸಂರಕ್ಷಿಸುವಲ್ಲಿ ವನರಕ್ಷಕರ ಪಾತ್ರ ಮಹತ್ತರವಾಗಿದೆ. ಈ ಕಾಳಜಿಯಿಂದಲೇ ಕೆಎಸ್ಡಿಎಲ್ ಸಂಸ್ಥೆಯು ರಾಜ್ಯದ 10 ಸಾವಿರ ಅರಣ್ಯ ರಕ್ಷಕರು, ವೀಕ್ಷಕರು, ಮಾವುತರು, ಚಾಲಕರು ಮತ್ತು ಕಾವಾಡಿಗಳಿಗೆ ಜರ್ಕಿನ್, ಶೂ, ಬ್ಯಾಗ್, ನೀರಿನ ಬಾಟಲ್ ಒಳಗೊಂಡ ಸುರಕ್ಷಾ ಕಿಟ್ ಅನ್ನು ವಿತರಣೆ ಮಾಡಲಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa