ಗುವಾಹಟಿ, 03 ಜೂನ್ (ಹಿ.ಸ.) :
ಆ್ಯಂಕರ್ : ಅಸ್ಸಾಂನಲ್ಲಿ ಸತತ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಲ್ಬಣಗೊಂಡಿದೆ. ಬ್ರಹ್ಮಪುತ್ರ, ಸುಬಾನ್ಸಿರಿ, ಕಪಿಲಿ, ಬರಾಕ್ ಸೇರಿದಂತೆ 15 ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, 22 ಜಿಲ್ಲೆಗಳ 1254 ಗ್ರಾಮಗಳು ಪ್ರವಾಹದಿಂದ ಬಾಧಿತವಾಗಿವೆ. ಸುಮಾರು 5.15 ಲಕ್ಷಕ್ಕೂ ಅಧಿಕ ಜನರು ಸಂಕಷ್ಟದಲ್ಲಿದ್ದಾರೆ.
ಲಖಿಂಪುರ್, ನಾಗಾಂವ್, ದಿಬ್ರುಗಢ್, ತಿನ್ಸುಕಿಯಾ ಸೇರಿದಂತೆ ಪ್ರಮುಖ ಜಿಲ್ಲೆಗಳು ಬಹುದೊಡ್ಡ ಪ್ರಮಾಣದಲ್ಲಿ ಹಾನಿಗೊಳಗಾಗಿದ್ದು, 12,610 ಹೆಕ್ಟೇರ್ ಕೃಷಿ ಭೂಮಿ ನಾಶವಾಗಿದೆ. ಇದುವರೆಗೆ 84 ಮನೆಗಳು ಸಂಪೂರ್ಣವಾಗಿ ಮತ್ತು 43 ಮನೆಗಳು ಭಾಗಶಃ ಹಾನಿಗೊಂಡಿವೆ.
ಪರಿಹಾರ ಕಾರ್ಯಾಚರಣೆಗೆ 165 ಶಿಬಿರಗಳು ಹಾಗೂ 157 ವಿತರಣಾ ಕೇಂದ್ರಗಳು ತೆರೆದಿದ್ದು, 31,212 ಜನರು ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. 122 ವೈದ್ಯಕೀಯ ತಂಡಗಳು ಹಾಗೂ 50 ದೋಣಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿವೆ. ಇದುವರೆಗೆ 711 ಜನರು ಹಾಗೂ 130 ಪ್ರಾಣಿಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa