ಬಿಹಾರದಲ್ಲಿ ಚಂಡಮಾರುತದಿಂದ ಏಳು ಮಂದಿ ಸಾವು
ಪಾಟ್ನಾ, 03 ಜೂನ್ (ಹಿ.ಸ.) : ಆ್ಯಂಕರ್ : ಬಿಹಾರ ರಾಜ್ಯದ ಸಿವಾನ್ ಜಿಲ್ಲೆಯಲ್ಲಿ ಸಂಭವಿಸಿದ ಬಿರುಗಾಳಿ ಹಾಗೂ ಧಾರಾಕಾರ ಮಳೆಯ ಪರಿಣಾಮ ಏಳು ಮಂದಿ ದುರ್ಮರಣಕ್ಕೆ ಒಳಗಾಗಿದ್ದಾರೆ. ಮೃತರಲ್ಲಿ ಇಬ್ಬರು ಮಹಿಳೆಯರು ಹಾಗೂ ಒಬ್ಬ ವೃದ್ಧ ಸೇರಿದ್ದಾರೆ. ಬಿರುಗಾಳಿ ಕಾರಣದಿಂದ ಮನೆಗಳ ಗೋಡೆಗಳು, ಛಾವಣಿಗಳು ಕುಸಿದಿದ್
Death


ಪಾಟ್ನಾ, 03 ಜೂನ್ (ಹಿ.ಸ.) :

ಆ್ಯಂಕರ್ : ಬಿಹಾರ ರಾಜ್ಯದ ಸಿವಾನ್ ಜಿಲ್ಲೆಯಲ್ಲಿ ಸಂಭವಿಸಿದ ಬಿರುಗಾಳಿ ಹಾಗೂ ಧಾರಾಕಾರ ಮಳೆಯ ಪರಿಣಾಮ ಏಳು ಮಂದಿ ದುರ್ಮರಣಕ್ಕೆ ಒಳಗಾಗಿದ್ದಾರೆ. ಮೃತರಲ್ಲಿ ಇಬ್ಬರು ಮಹಿಳೆಯರು ಹಾಗೂ ಒಬ್ಬ ವೃದ್ಧ ಸೇರಿದ್ದಾರೆ. ಬಿರುಗಾಳಿ ಕಾರಣದಿಂದ ಮನೆಗಳ ಗೋಡೆಗಳು, ಛಾವಣಿಗಳು ಕುಸಿದಿದ್ದು, ಮರಗಳು ಉರುಳಿದ ಪರಿಣಾಮ ಈ ದುರ್ಘಟನೆಗಳು ಸಂಭವಿಸಿದವು.

ಬರ್ಹಾಡಿಯಾ, ಬಸಂತ್‌ಪುರ, ನವಿಗಂಜ್ ಮತ್ತು ಜಿಬಿ ನಗರ ಠಾಣಾ ವ್ಯಾಪ್ತಿಗಳಲ್ಲಿ ಈ ಸಾವಿನ ಘಟನೆಗಳು ವರದಿಯಾಗಿವೆ. ಶಾಹಿದ್ ಅಖ್ತರ್ (30), ನಂದಕಿಶೋರ್ ಸಿಂಗ್ (55), ಅಲಿಮುನ್ ಬೇಗಂ (40), ಯೂಸುಫ್ ಅಲಿ (35), ಕಲ್ಪತಿ ದೇವಿ (52), ಚಂದ್ರವಂತಿ ದೇವಿ ಮತ್ತು ಶ್ರೀರಾಮ್ ಪ್ರಸಾದ್ (75) ಮೃತರು.

ಘಟನೆಯ ನಂತರ ರಾಜ್ಯ ಸರ್ಕಾರವು ತಕ್ಷಣವೇ ಪ್ರತೀ ಸಂತ್ರಸ್ತರ ಕುಟುಂಬಕ್ಕೆ ₹4 ಲಕ್ಷ ಪರಿಹಾರವನ್ನು ಘೋಷಿಸಿದ್ದು, ಮನೆಗಳಿಗೆ ಆಗಿರುವ ಹಾನಿಯ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande