ಅಯೋಧ್ಯೆ, 03 ಜೂನ್ (ಹಿ.ಸ.) :
ಆ್ಯಂಕರ್ : ಶ್ರೀ ರಾಮ ಜನ್ಮಭೂಮಿ ದೇವಾಲಯ ಸಂಕೀರ್ಣದಲ್ಲಿನ ಎಂಟು ದೇವಾಲಯಗಳಲ್ಲಿ ಇಂದು ಬೆಳಿಗ್ಗೆ 6:30 ರಿಂದ ಪ್ರಾಣ ಪ್ರತಿಷ್ಠಾ ವಿಧಿವಿಧಾನಗಳು ಆರಂಭಗೊಂಡವು.
ಮುಖ್ಯ ರಾಮ ಮಂದಿರದೊಂದಿಗೆ ಇತರ ಏಳು ದೇವಾಲಯಗಳಲ್ಲಿ ವಿಗ್ರಹ ಪ್ರತಿಷ್ಠಾಪನೆ ನಡೆಯುತ್ತಿದೆ. ದೇವಾಲಯಗಳು ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿದ್ದು, ಚಿನ್ನದ ಶಿಖರ ಕಲಶ ವಿಶಿಷ್ಟ ಆಕರ್ಷಣೆಯಾಗಿದೆ.
ಪ್ರಮುಖ ಕಾರ್ಯಕ್ರಮ ಜೂನ್ 5ರಂದು ನಡೆಯಲಿದ್ದು, ರಾಜಾ ರಾಮನ ಪ್ರಾಣ ಪ್ರತಿಷ್ಠೆಯೊಂದಿಗೆ ಧಾರ್ಮಿಕ ಉತ್ಸವ ಮುಕ್ತಾಯಗೊಳ್ಳಲಿದೆ. ಆ ದಿನ ಬೆಳಿಗ್ಗೆ 7 ರಿಂದ ಮಧ್ಯಾಹ್ನ 3 ರವರೆಗೆ ಪಾಸ್ಗಳನ್ನು ನೀಡಲಾಗುವುದಿಲ್ಲ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಆಡಳಿತ ಮಂಡಳಿ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa