ತುಂಗಭದ್ರಾ ನದಿ, ಜಲಾಶಯದಲ್ಲಿ ಮೀನುಗಾರಿಕೆ ನಿಷೇಧ
ಕೊಪ್ಪಳ, 03 ಜೂನ್ (ಹಿ.ಸ.) : ಆ್ಯಂಕರ್ : 2025-26ನೇ ಸಾಲಿನ ಜೂನ್ 01 ರಿಂದ ಜುಲೈ 31 ರವರೆಗೆ ಮೀನುಗಾರಿಕೆ ನಿಷೇಧಿತ ಅವಧಿ ಇರುವುದರಿಂದ ತುಂಗಭದ್ರಾ ನದಿಭಾಗ ಹಾಗೂ ಜಲಾಶಯದಲ್ಲಿ ಯಾವುದೇ ತರಹದ ಮೀನುಗಾರಿಕೆ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಆದ್ದರಿಂದ ಜಿಲ್ಲೆಯ ಕೊಪ್ಪಳ, ಕುಕನೂರು ಹ
ತುಂಗಭದ್ರಾ ನದಿ, ಜಲಾಶಯದಲ್ಲಿ ಮೀನುಗಾರಿಕೆ ನಿಷೇಧ


ಕೊಪ್ಪಳ, 03 ಜೂನ್ (ಹಿ.ಸ.) :

ಆ್ಯಂಕರ್ : 2025-26ನೇ ಸಾಲಿನ ಜೂನ್ 01 ರಿಂದ ಜುಲೈ 31 ರವರೆಗೆ ಮೀನುಗಾರಿಕೆ ನಿಷೇಧಿತ ಅವಧಿ ಇರುವುದರಿಂದ ತುಂಗಭದ್ರಾ ನದಿಭಾಗ ಹಾಗೂ ಜಲಾಶಯದಲ್ಲಿ ಯಾವುದೇ ತರಹದ ಮೀನುಗಾರಿಕೆ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.

ಆದ್ದರಿಂದ ಜಿಲ್ಲೆಯ ಕೊಪ್ಪಳ, ಕುಕನೂರು ಹಾಗೂ ಯಲಬುರ್ಗಾ ತಾಲ್ಲೂಕುಗಳ ಮೀನುಗಾರರು ತುಂಗಭದ್ರಾ ನದಿಭಾಗ ಹಾಗೂ ಜಲಾಶಯದಲ್ಲಿ ಯಾವುದೇ ರೀತಿಯ ಮೀನುಗಾರಿಕೆ ಚಟುವಟಿಕೆಯಲ್ಲಿ ತೊಡಗಬಾರದು ಎಂದು ಕೊಪ್ಪಳ ಮೀನುಗಾರಿಕೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande