ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದೇ ಶಿಕ್ಷಣದ ಮೂಲ ಆಶಯ
ಬಳ್ಳಾರಿ, 29 ಜೂನ್ (ಹಿ.ಸ.) ಆ್ಯಂಕರ್: ಸಮಸ್ಯೆಯ ಆಗರವಾಗಿರುವ ಇಂದಿನ ಜೀವನಕ್ಕೆ ಮೂಲ ಕಾರಣ ಶಿಕ್ಷಣವೇ ಆಗಿದೆ ಎಂದು ಸರ್ಕಾರಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀನಿವಾಸ ಮೂರ್ತಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶ್ರೀ ಗುರು ತಿಪ್ಪೇರುದ್ರ ಪ್ರೌಢಶಾಲೆಯಲ್
ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದೇ ಶಿಕ್ಷಣದ ಮೂಲ ಆಶಯ


ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದೇ ಶಿಕ್ಷಣದ ಮೂಲ ಆಶಯ


ಬಳ್ಳಾರಿ, 29 ಜೂನ್ (ಹಿ.ಸ.)

ಆ್ಯಂಕರ್: ಸಮಸ್ಯೆಯ ಆಗರವಾಗಿರುವ ಇಂದಿನ ಜೀವನಕ್ಕೆ ಮೂಲ ಕಾರಣ ಶಿಕ್ಷಣವೇ ಆಗಿದೆ ಎಂದು ಸರ್ಕಾರಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀನಿವಾಸ ಮೂರ್ತಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶ್ರೀ ಗುರು ತಿಪ್ಪೇರುದ್ರ ಪ್ರೌಢಶಾಲೆಯಲ್ಲಿ ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ 316ನೇ ಮಹಾಮನೆ ಲಿಂ.ಕೆ.ಎಂ.ಗವಿಸಿದ್ದಯ್ಯ ಸರೋಜಮ್ಮ ದತ್ತಿ ಉಪನ್ಯಾಸದಲ್ಲಿ `ಶರಣರ ಶಿಕ್ಷಣ ಕ್ರಾಂತಿ' ಕುರಿತು ಅವರು ಉಪನ್ಯಾಸ ನೀಡಿದರು.

ಅನುಭವ ಮಂಟಪದಲ್ಲಿ ಬಸವಾದಿ ಶರಣರು ಅಂತರಂಗದ ಅರಿವಿನ ಬೆಳಕಲ್ಲಿ ಅಕ್ಷರಸ್ತರಾಗಿ ವಚನಗಳನ್ನು ಬರೆಯುವ ಮೂಲಕ ಬೇರುಮಟ್ಟದಲ್ಲಿ ಶಿಕ್ಷಣದ ಕ್ರಾಂತಿ - ಅಕ್ಷರದ ಕ್ರಾಂತಿ - ವೈಚಾರಿಕ ಕ್ರಾಂತಿಗೆ ನಾಂದಿ ಹಾಡಿದರು. ಆದರೆ, ಪ್ರಸ್ತುತ ಸಮಾಜದಲ್ಲಿ ಶಿಕ್ಷಣವು ಅನೇಕ ಸಮಸ್ಯೆಯ ಆಗರವಾಗಿರುವುದು ವಿಷಾದನೀಯ ಎಂದರು.

ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕಾರಿ ಆಗುವ ಚಿಂತನೆ - ಶಿಕ್ಷಣ ನಮಗೆ ಬೇಕು. ಸಮಸ್ಯೆಗಳನ್ನು - ಆರೋಗ್ಯವನ್ನು ಮತ್ತು ಶಾಂತಿ - ನೆಮ್ಮದಿಯನ್ನು ಹದಗೆಡಿಸುವ ಯಾವುದೇ ಶಿಕ್ಷಣವು ಶಿಕ್ಷಣವೇ ಅಲ್ಲ. ಪ್ರಸ್ತುತ ದಿನಗಳಲ್ಲಿ ಅಲ್ಲಲ್ಲಿ ಅನಕ್ಷರಸ್ತರೇ ಪರಮ ಸುಖಿಗಳಾಗಿರುವುದು ಸಹಜವಾಗಿ ಕಂಡುಬರುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‍ಜಿಟಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಜಿ. ನಾಗರಾಜ ಅವರು, ಮಕ್ಕಳಲ್ಲಿಯ ಸಕಾರಾತ್ಮಕ ಬೆಳವಣಿಗೆಯೇ ನಿಜವಾದ ಶಿಕ್ಷಣ. ಕೇವಲ ಪದವಿ - ಹುದ್ದೆ ಪಡೆಯಲಿಕ್ಕಾಗಿ ಅಕ್ಷರ ಕಲಿಯುವುದು ಶಿಕ್ಷಣವಲ್ಲ. ಹೊಸತನದ ಕುತೂಹಲದ ಜೊತೆಯಲ್ಲಿ ಪ್ರಯತ್ನ ಮಾಡುವುದು ಶಿಕ್ಷಣದ ಆಶಯ ಎಂದರು.

ಎಸ್‍ಜಿಟಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಸ್.ಎನ್. ರುದ್ರಪ್ಪ ಅವರು ಉಪನ್ಯಾಸವನ್ನು ಉದ್ಘಾಟಿಸಿದರು. ಶಾಲೆಯ ಮುಖ್ಯ ಗುರುಗಳಾದ ಜಿ. ಮಂಜುಳ ಮತ್ತು ಇಲಿಯಾಸ್ ಅವರು ವೇದಿಕೆಯಲ್ಲಿದ್ದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಕೆ.ಬಿ. ಸಿದ್ಧಲಿಂಗಪ್ಪ ಅವರು ಪ್ರಾಸ್ತಾವಿಕ ಭಾಷಣ ಮಾಡಿ, ದತ್ತಿ ದಾನಿಗಳನ್ನು ಸಭೆಗೆ ಪರಿಚಯಿಸಿದರು. ಶಿಕ್ಷಕಿ ಸೌಮ್ಯ ಅವರು ಸ್ವಾಗತ ಕೋರಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಶ್ರೀನಿಧಿ, ಲಾವಣ್ಯ, ಶಾರದಾ ವಚನ ಪ್ರಾರ್ಥನೆ ಮಾಡಿದರು. ನಿವೃತ್ತ ಶಿಕ್ಷಕ ಚಂದ್ರಯ್ಯ ಮಠದ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ - ಅಭಿನಂದಿಸಿ - ಗೌರವಿಸಲಾಯಿತು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande