ಗುರುಪೌರ್ಣಮಿ ಗುರು-ಶಿಷ್ಯ ಪರಂಪರೆಯ ಹಬ್ಬ
ಗುರುಪೌರ್ಣಮಿ ಗುರು-ಶಿಷ್ಯ ಪರಂಪರೆಯ ಹಬ್ಬ
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿ ನಡೆಯಲಿರುವ ಗುರುಪೂರ್ಣಿಮಾ ಸಂಗೀತೋತ್ಸವದ ಬಗ್ಗೆ ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ.ಎಂ.ಆರ್.ಜಯರಾಮ್ ತಿಳಿಸಿದರು.


ಕೋಲಾರ, ೨೯ ಜೂನ್ (ಹಿ.ಸ) :

ಆ್ಯಂಕರ್ : ಗುರು-ಶಿಷ್ಯ ಪರಂಪರೆಯನ್ನು ಬೆಳೆಸುವ ನಿಟ್ಟಿನಲ್ಲಿ ಶ್ರೀಕ್ಷೇತ್ರ ಕೈವಾರದಲ್ಲಿ ಗುರುಪೌರ್ಣಮಿಯ ಸಂಗೀತೋತ್ಸವವು ನಡೆಯುತ್ತದೆ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ.ಎಂ.ಆರ್.ಜಯರಾಮ್ ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಕೈವಾರದ ಶ್ರೀ ಯೋಗಿನಾರೇಯಣ ಮಠದಲ್ಲಿ ಗುರುಪೂಜಾ ಸಂಗೀತೋತ್ಸವದ ವಿವಿರಗಳನ್ನು ನೀಡಿದರು.

ಗುರುಪೂಜಾ ಸಂಗೀತೋತ್ಸವವು ಈ ಭಾಗದಲ್ಲಿ ನಡೆಯುವ ಒಂದು ಸಾಂಸ್ಕöÈತಿಕ ಹಬ್ಬ. ಹರಿ-ಹರ ಕ್ಷೇತ್ರವಾಗಿರುವ ಕೈವಾರವು ಭಕ್ತಿಯ ಕೇಂದ್ರವಾಗಿದೆ. ಇಲ್ಲಿ ಪ್ರತಿನಿತ್ಯ ಭಜನೆ, ಹರಿಕಥೆ, ಸಂಗೀತ ಮುಂತಾದ ಭಕ್ತಿಯ ಸಮರ್ಪಣೆ ಮಾಡುವ ಕಾರ್ಯಕ್ರಮಗಳಿಗೆ ಒತ್ತನ್ನು ನೀಡಲಾಗುತ್ತಿದೆ. ಭಕ್ತಿಯ ಮಾರ್ಗದಲ್ಲಿ ಕೈವಾರ ಮಠವು ನಡೆಯುತ್ತಿದೆ. ಗುರುಪೂಜಾ ಸಂಗೀತೋತ್ಸವವು ಇದೇ ಜುಲೈ ೮ ರಿಂದ ೧೦ ರವರೆಗೆ ಶ್ರದ್ಧಾಭಕ್ತಿಗಳಿಂದ ನಡೆಯುತ್ತದೆ. ದೇಶದ ನಾನಾ ಭಾಗಗಳಿಂದ ಸಂಗೀತಗಾರರು, ಭಕ್ತರು ಬಂದು ತಮ್ಮ ಸೇವೆಯನ್ನು ಸದ್ಗುರು ತಾತಯ್ಯನವರಿಗೆ ಸಮರ್ಪಿಸುತ್ತಿದ್ದಾರೆ. ಭಕ್ತಿಯಿಂದ ಗುರುಪೂಜಾ ಸಂಗೀತೋತ್ಸವದಲ್ಲಿ ಭಾಗವಹಿಸಿ ಎಂದು ಮನವಿಯನ್ನು ಮಾಡಿದರು.

ಶ್ರೀಯೋಗಿನಾರೇಯಣ ನಾದಸುಧಾರಸ ಸಂಕೀರ್ತನಾ ಯೋಜನೆಯ ಸಂಚಾಲಕರಾದ ವಾನರಾಶಿ ಬಾಲಕೃಷ್ಣ ಭಾಗವತರ್ ರವರು ಮಾತನಾಡಿ ಕೈವಾರದಲ್ಲಿ ನಡೆಯುವ ಗುರುಪೂಜಾ ಸಂಗೀತೋತ್ಸವದಲ್ಲಿ ಎಲ್ಲಾ ವೈವಿಧ್ಯಮಯ ಕಲೆಗಳನ್ನು ಒಂದೇ ವೇದಿಕೆಯಲ್ಲಿ ಕಾಣಬಹುದಾಗಿದೆ. ಸ್ಥಳೀಯ ಕಲಾವಿದರನ್ನು ಒಳಗೊಂಡAತೆ ಹಲವಾರು ಸಂಗೀತ ಕಲಾವಿದರುಗಳಿಂದ ನಿರಂತರವಾಗಿ ೭೨ ಗಂಟೆಗಳು ಸಂಗೀತದ ರಸದೌತಣವಿರುತ್ತದೆ ಎಂದರು.

ಜುಲೈ ೮ ರಂದು ಬೆಳಿಗ್ಗೆ ೬ ಗಂಟೆಗೆ ಸಾಮೂಹಿಕ ನಾಮ ಸಂಕೀರ್ತನೆಯೊAದಿಗೆ ಸಂಗೀತೋತ್ಸವಕ್ಕೆ ಚಾಲನೆಯನ್ನು ನೀಡಲಾಗುತ್ತದೆ. ಅಂದು ಸಂಜೆ ವಿಶೇಷ ಕಾರ್ಯಕ್ರಮಗಳಲ್ಲಿ ತಿರುಪತಿಯ ಬಿ.ರಘುನಾಥ್, ಬೆಂಗಳೂರಿನ ವಿವೇಕ್ ಸದಾಶಿವಂ, ಬೆಂಗಳೂರು ಸಹೋದರರಾದ ಹರಿಹರನ್ ಮತ್ತು ಅಶೋಕ್, ಅಧಿತಿ ಪ್ರಹ್ಲಾದ್ ರವರುಗಳಿಂದ ಗಾಯನ ಕಾರ್ಯಕ್ರಮ ಹಾಗೂ ನಾಟ್ಯಾಂಜಲಿ ಕಲಾಕೇಂದ್ರ ಕೈವಾರ, ಸಾಯಿಕಲಾನಿಕೇತನ್ ತಂಡ ಚಿಂತಾಮಣಿ ತಂಡದವರಿAದ ಭರತನಾಟ್ಯ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ಜುಲೈ ೯ ರಂದು ಪಿ.ಜೆ.ಬ್ರಹ್ಮಾಚಾರಿ, ಪ್ರಿಯಾಬ್ರಹ್ಮ ರವರಿಂದ ಪಿಟೀಲು ಸೋಲೋ, ಡಾ.ಶ್ರೀಕಾಂತ ನಾಗೇಂದ್ರಶಾಸ್ತಿ, ಕೇರಳದ ಡಾ.ಎನ್.ಜೆ.ನಂದಿನಿರವರಿ0ದ ಗಾಯನ , ಕೋಲಾರದ ಬಿ.ಆರ್.ರಾಜಪ್ಪ ತಂಡದವರಿ0ದ ಗಾಯನ, ಮೈಸೂರು ನಾಗರಾಜ್ ಮತ್ತು ಡಾ.ಮಂಜುನಾಥ್ ರವರಿಂದ ಪಿಟೀಲು ಸೋಲೋ, ನೂಪೂರ ಫೈನ್‌ಆರ್ಟ್ಸ್ನ ರೂಪರಾಜೇಶ್ ರವರಿಂದ ನೃತ್ಯರೂಪಕ ಹಮ್ಮಿಕೊಳ್ಳಲಾಗಿದೆ ಎಂದರು.

ಜುಲೈ ೧೦ ಗುರುಪೂರ್ಣಿಮ ದಿನ ಬೆಳಿಗ್ಗೆ ೧೦.೦೦ಗೆ ನಾಡಿನ ಪ್ರಸಿದ್ಧ ವಿದ್ವಾಂಸರುಗಳಿ0ದ ತಾತಯ್ಯನವರು ರಚಿಸಿರುವ ಪಂಚರತ್ನ ಕೀರ್ತನೆಗಳ ಗೋಷ್ಠಿಗಾಯನ ನಡೆಯಲಿದೆ. ನಂತರ ಸದ್ಗುರು ಯೋಗಿ ನಾರೇಯಣ ತಾತಯ್ಯನವರಿಗೆ ವಿಶೇಷ ಗುರುಪೂಜೆಯನ್ನು ನಡೆಸಲಾಗುವುದು. ಅಂದು ಕೈವಾರ ಕ್ಷೇತ್ರದಿಂದ ಪ್ರಕಟವಾಗುವ ಮಲ್ಲಾರ ಮಾಸ ಪತ್ರಿಕೆಯ ೨೫ನೇ ವರ್ಷದ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಗುವುದು ಎಂದರು.

ಜುಲೈ ೧೦ ರ ವಿಶೇಷ ಕಾರ್ಯಕ್ರಮಗಳಲ್ಲಿ ಆನೂರು ಅನಂತಕೃಷ್ಣಶರ್ಮ ತಂಡದವರಿAದ ಲಯಲಹರಿ ತಾಳವಾದ್ಯ, ಚೆನ್ನೆನ ಅಭಿಷೇಕ್ ರಘುರಾಮ್ ಗಾಯನ ,ರಾಜೇಶ್ ವೈದ್ಯ ಹಾಗೂ ಯು.ರಾಜೇಶ್ ರವರಿಂದ ವೀಣೆ ಮತ್ತು ಮ್ಯಾಂಡೋಲಿನ್ ವಾದನದ ಸೋಲೋ, ನಯನಾ ರಮೇಶ್ ಭರತನಾಟ್ಯ, ಪುತ್ತೂರು ಗಣೇಶ್ ಸ್ಯಾಕ್ಸೋಫೋನ್, ತಿರುಪಂಬೂರು ಟಿ.ಎಸ್.ಎನ್.ಕುಂಜಿತಾ ಬಾಲನ್, ಟಿ.ಎಸ್.ಎನ್.ಶೇಷಗೋಪಾಲನ್, ವಿ.ಸತ್ಯನಾರಾಯಣ್ ತಿರುಪತಿ, ಎಂ.ವಿ.ಸುಬ್ಬರಾಮಯ್ಯ ತಿರುಪತಿ, ವಿ.ರಮೇಶ್ ಬೇತಮಂಗಲ, ವಿ.ಆರ್.ನಟರಾಜ್ ರವರಿಂದ ನಾದಸ್ವರ, ಪಿ.ಎಂ.ರ0ಜಿತ್ ವಿನಾಯಕ್,ಮುತ್ತುಕುಮಾರ್, ಸೆಲ್ವ ಗಣಪತಿ ಚೆನ್ನೆ, ಮನೋಹರ್ ಕಂದಕೂರು, ಶ್ರೀನಿವಾಸ್ ತಿರುಪತಿ, ನಟರಾಜ್ ರವರಿಂದ ತವಿಲ್ ವಾದನದ ಕಾರ್ಯಕ್ರಮವಿರುತ್ತದೆ ಎಂದರು.

ಈ ಸಂದರ್ಭದಲ್ಲಿ ಶ್ರೀಯೋಗಿನಾರೇಯಣ ಮಠದ ಉಪಾಧ್ಯಕ್ಷರಾದ ಜೆ.ವಿಭಾಕರರೆಡ್ಡಿ, ಖಜಾಂಚಿಗಳಾದ ಆರ್.ಪಿ.ಎಂ. ಸತ್ಯನಾರಾಯಣ ಉಪಸ್ಥಿತರಿದ್ದರು.

ಚಿತ್ರ : ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿ ನಡೆಯಲಿರುವ ಗುರುಪೂರ್ಣಿಮಾ ಸಂಗೀತೋತ್ಸವದ ಬಗ್ಗೆ ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ.ಎಂ.ಆರ್.ಜಯರಾಮ್ ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande