ಶಿಮ್ಲಾ, 29 ಜೂನ್ (ಹಿ.ಸ.) :
ಆ್ಯಂಕರ್ : ಹಿಮಾಚಲ ಪ್ರದೇಶದಲ್ಲಿ ಮುಂಗಾರು ಭೀಕರ ತೀವ್ರತೆ ಮೆರೆದಿದ್ದು, ಜೂನ್ 20ರಿಂದ 28ರೊಳಗೆ ಮಳೆ ಸಂಬಂಧಿತ ಘಟನೆಗಳಲ್ಲಿ 34 ಜನರು ಮೃತಪಟ್ಟಿದ್ದಾರೆ. 74 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಹಾಗೂ 4 ಜನರು ಕಾಣೆಯಾಗಿದ್ದಾರೆ.
ಹಠಾತ್ ಪ್ರವಾಹ, ರಸ್ತೆ ಅಪಘಾತ, ಬೆಟ್ಟ ಜಾರಿಕೆ, ವಿದ್ಯುತ್ ಆಘಾತ ಸೇರಿ ವಿವಿಧ ಕಾರಣಗಳಿಂದ ಸಾವಿನ ಘಟನೆಗಳು ನಡೆದಿವೆ. ಕಾಂಗ್ರಾ ಜಿಲ್ಲೆಯಲ್ಲಿ ಮಾತ್ರವೇ 6 ಜನರು ಪ್ರವಾಹದಲ್ಲಿ ಮೃತಪಟ್ಟಿದ್ದು. 38 ಜಾನುವಾರುಗಳ ಮೃತಪಟ್ಟಿವೆ, 6 ಮನೆಗಳು ಸಂಪೂರ್ಣ ಹಾಗೂ 17 ಮನೆಗಳು ಭಾಗಶಃ ಹಾನಿಗೊಳಗಾಗಿವೆ.
ರಾಜ್ಯದ ಜಲಶಕ್ತಿ ಮತ್ತು ಲೋಕೋಪಯೋಗಿ ಇಲಾಖೆಗಳು ಸೇರಿ ಸರ್ಕಾರಕ್ಕೂ ₹71.19 ಕೋಟಿ ಮೌಲ್ಯದ ನಷ್ಟವಾಗಿದೆ. ಹವಾಮಾನ ಇಲಾಖೆ ಜುಲೈ 5ರವರೆಗೆ ಭಾರೀ ಮಳೆಯ ಮುನ್ಸೂಚನೆ ನೀಡಿದ್ದು, ಜೂನ್ 29–30ಕ್ಕೆ ಕಿತ್ತಳೆ ಎಚ್ಚರಿಕೆ ಘೋಷಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa