ಸಿ.ಎಸ್.ಸಿ ಮೊಬೈಲ್ ವ್ಯಾನ್ ಗೆ ಸಚಿವ ಸೋಮಣ್ಣ ಚಾಲನೆ
ತುಮಕೂರು, 29 ಜೂನ್ (ಹಿ.ಸ.) : ಆ್ಯಂಕರ್ : ತುಮಕೂರಿನ ಸಂಸದರ ಕಚೇರಿಯಲ್ಲಿ, ಸಾರ್ವಜನಿಕರಿಗೆ ಸಹಕಾರಿಯಾಗುವಂತೆ ಸಿ.ಎಸ್.ಸಿ ಮೊಬೈಲ್ ವ್ಯಾನ್ ಗೆ ಕೇಂದ್ರ ಸಚಿವ ವಿ.ಸೋಮಣ್ಣ ಹಸಿರು ನಿಶಾನೆ ತೋರಿದರು. ಈ ಮೊಬೈಲ್ ವ್ಯಾನ್ ಜಿಲ್ಲೆಯ ಜನರಿಗೆ ಹಣಕಾಸು ಮತ್ತು ಡಿಜಿಟಲ್ ಸಾಕ್ಷರತಾ ಸೇವೆಗಳನ್ನು ಒದಗಿಸುತ್ತದೆ.
Sommana


ತುಮಕೂರು, 29 ಜೂನ್ (ಹಿ.ಸ.) :

ಆ್ಯಂಕರ್ : ತುಮಕೂರಿನ ಸಂಸದರ ಕಚೇರಿಯಲ್ಲಿ, ಸಾರ್ವಜನಿಕರಿಗೆ ಸಹಕಾರಿಯಾಗುವಂತೆ ಸಿ.ಎಸ್.ಸಿ ಮೊಬೈಲ್ ವ್ಯಾನ್ ಗೆ ಕೇಂದ್ರ ಸಚಿವ ವಿ.ಸೋಮಣ್ಣ ಹಸಿರು ನಿಶಾನೆ ತೋರಿದರು.

ಈ ಮೊಬೈಲ್ ವ್ಯಾನ್ ಜಿಲ್ಲೆಯ ಜನರಿಗೆ ಹಣಕಾಸು ಮತ್ತು ಡಿಜಿಟಲ್ ಸಾಕ್ಷರತಾ ಸೇವೆಗಳನ್ನು ಒದಗಿಸುತ್ತದೆ. ವ್ಯವಸ್ಥೆ ಮತ್ತು ಬ್ಯಾಂಕಿಂಗ್, ವಿಮೆ, ಡಿಜಿಪೇ ಮೈಕ್ರೋ ಎಟಿಎಂ, ಆಯುಷ್ಮಾನ್ ಭಾರತ್, ಇ-ಶ್ರಮ್, ಪಿಎಂಕಿಸಾನ್, ಇ-ಕೆವೈಸಿ ಮತ್ತು ಇತರ ಸೇವೆಗಳು ಸೇರಿದಂತೆ ಜನರಿಗೆ ವಿವಿಧ ಆನ್ ಲೈನ್ ಸೇವೆಗಳನ್ನು ಒದಗಿಸುತ್ತದೆ.

ಮೂಲಭೂತ ಡಿಟಿಟಲ್ ಮತ್ತು ಆರ್ಥಿಕ ಸಾಕ್ಷರತಾ ಕೌಶಲ್ಯಗಳ ಕುರಿತು ಜ್ಞಾನ ಮತ್ತು ತರಬೇತಿಯನ್ನು ನೀಡುವ ಮೂಲಕ ವ್ಯಾನ್ ಜಿಲ್ಲೆಯಾದ್ಯಂತ ವಿವಿಧ ಪಂಚಾಯತ್ ಗಳಿಗೆ ಪ್ರಯಾಣಿಸಲಿದೆ. ಸಾರ್ವಜನಿಕರು ಈ ಸೇವೆಯ ಸಂಪೂರ್ಣ ಪ್ರಯೋಜನವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಚಿವರು ಕರೆ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande