ಕೋಲಾರ ಜೂನ್ ೨೯ (ಹಿ.ಸ) :
ಆ್ಯಂಕರ್ : ಕೆಜಿಎಫ್ ಪೊಲೀಸ್ ಜಿಲ್ಲೆಯ ಸೈಬರ್ ಪೊಲೀಸ್ ಠಾಣೆಯ ಪೊಲೀಸರು ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬ0ಧಿಸಿದ0ತೆ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ರೂಪಾಯಿ ಒಂದು ಲಕ್ಷದ ಎಪ್ಪತ್ತೆöÊದು ಸಾವಿರ ಮೌಲ್ಯದ ೨ ಕೆಜಿ ೧೫೦ ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬೇತಮಂಗಲ ಪೊಲೀಸ್ ಠಾಣಾ ಸರಹದ್ದು, ತಾಯಲೂರು ಕ್ರಾಸ್ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯನ್ನು ಆಧರಿಸಿ, ಸೈಬರ್ ಕ್ರೆöÊಂ ಅಪರಾಧ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಲಕ್ಷಿö್ಮÃನಾರಾಯಣ ಮತ್ತು ಸಿಬ್ಬಂದಿ ಕೂಡಲೆ ದಾಳಿ ನಡೆಸಿ, ಆಂದ್ರಪ್ರದೇಶದ ಚಿತ್ತೂರು ಜಿಲ್ಲೆಯ ರಾಯಲೂರು ಗ್ರಾಮದ ವಾಸಿ ಗೋವರ್ಧನ್ ಮತ್ತು ಗೌನಿವಾರಪಲ್ಲಿ ಗ್ರಾಮದ ವಾಸಿ ನಾಗೇಶ್ ಎಂಬುವರನ್ನು ಬಂಧಿಸಿ, ಅವರಿಂದ ಸುಮಾರು ರೂ.೧,೭೫,೦೦೦/- ಮೌಲ್ಯದ ೨ ಕೆಜಿ ೧೫೦ ಗ್ರಾಂ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ರೂ.೪೦,೦೦೦/- ಮೌಲ್ಯದ ಒಂದು ಹೀರೋ ಸ್ಲೆ÷್ಪಂಡರ್ ಪ್ರೋ ದ್ವಿಚಕ್ರ ವಾಹನ ಒಟ್ಟು ರೂ.೨,೧೫,೦೦೦/- ಮೌಲ್ಯದ ಮಾಲನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಕೆಜಿಎಫ್ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳನ್ನು ಬಂಧಿಸಿ, ಗಾಂಜಾ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಪಿಐ ಲಕ್ಷಿö್ಮÃನಾರಾಯಣ, ಸಿಬ್ಬಂದಿಯಾದ ಗಜೇಂದ್ರ, ಚೇತನ್ಕುಮಾರ್, ವಿ.ಮಣಿಕಂಠ, ಚೇತನ್ಯಾದವ್, ವಿ.ರಘುನಾಥ್, ಮಂಜುಳಾ ಮತ್ತು ಜೀಪ್ ಚಾಲಕ ಮೋಹನ್ಕುಮಾರ್ ರವರು ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾAತರಾಜು ಶ್ಲಾಘಿಸಿದ್ದಾರೆ.
ಚಿತ್ರ : ಕೋಲಾರ ಜಿಲ್ಲೆಯ ಕೆಜಿಎಫ್ ಸೈಬರ್ ಪೊಲೀಸರು ೨ ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್