ಕೋಲಾರ ಜೂ.೨೯ (ಹಿ.ಸ) :
ಆ್ಯಂಕರ್ : ಜಿಲ್ಲಾಧಿಕಾರಿಗಳ ಆದೇಶದಂತೆ ಗಡಿಭಾಗದ ಚುಕ್ಕನಹಳ್ಳಿ ೧೦ ರೈತರ ಮರಗಿಡಗಳ ೨ನೇ ಪರಿಹಾರ ಬಿಡುಗಡೆ ಮಾಡಲು ಮೀನಾಮೇಷ ಎಣಿಸುತ್ತಿರುವ ಚಿತ್ತೂರು ರಾಷ್ಟಿçÃಯ ಹೆದ್ದಾರಿ ಯೋಜನಾ ನಿರ್ದೇಶಕರ ರೈತ ವಿರೋಧಿ ಧೋರಣೆ ಖಂಡಿಸಿ ಜುಲೈ ೩ರ ಗುರುವಾರದಿಂದ ಪರಿಹಾರ ಬಿಡುಗಡೆಯಾಗುವವರೆಗೂ ಭೂಸ್ವಾಧೀನಾ ಜಮೀನಿನಲ್ಲಿ ಕಾಮಗಾರಿ ನಡೆಸದಂತೆ ನಿರಂತರ ಹೋರಾಟ ನಡೆಸುವುದಾಗಿ ರೈತ ಸಂಘ ಎಚ್ಚರಿಕೆ ನೀಡಿದೆ.
ಕಳೆದ ೧೧ ವರ್ಷದಿಂದ ನಿರಂತರವಾಗಿ ನಮ್ಮ ಪರಿಹಾರ ಕೊಡಿ ಎಂದರೂ ನ್ಯಾಯಯುತ ಬೇಡಿಕೆ ಈಡೇರುತ್ತಿಲ್ಲ. ಅನುಮತಿ ಕೇಳುತ್ತೇವೆ. ಹೋರಾಟ ಮಾಡುತ್ತೇವೆ. ಯಾವುದೇ ಪ್ರಯೋಜನವಾಗುತ್ತಿಲ್ಲ. ಸಂಬAಧಪಟ್ಟ ಹಿರಿಯ ಪೊಲೀಸರು ಬರುತ್ತಾರೆ, ಬಲವಂತದಿAದ ಹೋರಾಟ ಕೈಬಿಡಿ, ನ್ಯಾಯ ಕೊಡಿಸುತ್ತೇವೆಂದು ಹೇಳಿ ನಂತರ ನಮ್ಮ ಸಮಸ್ಯೆ ಕೇಳುವವರಿಲ್ಲ. ಚಿತ್ತೂರು ಯೋಜನಾ ನಿರ್ದೇಶಕರಿಗೆೆ ಕಾನೂನಿನ ಭಯವೂ ಇಲ್ಲವೆಂದು ನೊಂದ ರೈತರೇ ಶಾಂತಿಯುತವಾಗಿ ಕಾಮಗಾರಿ ಸ್ಥಗಿತಗೊಳಿಸಿ ನ್ಯಾಯ ಪಡೆದುಕೊಳ್ಳುತ್ತೇವೆಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದರು.
ನಮ್ಮ ಭೂಮಿ ವಾಪಸ್ ಕೊಡಿ ಇಲ್ಲವೇ ನಮಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಪರಿಹಾರ ಕೊಡಿ ಇಲ್ಲವಾದರೆ ರಾಷ್ಟçಪತಿಗಳೇ ನಮ್ಮ ಜೀವ ಕಳೆದುಕೊಳ್ಳಲು ದಯಾ ಮರಣ ಕೊಟ್ಟು ಪುಣ್ಯ ಕಟ್ಟುಕೊಳ್ಳಿ. ಅದುವರೆಗೂ ೩ ಕಿಮೀ ವ್ಯಾಪ್ತಿಯ ೧೦ ರೈತರ ಜಮೀನಿನಲ್ಲಿ ಯಾವುದೇ ಕಾಮಗಾರಿ ನಡೆಸಬಾರದು, ವಾಹನಗಳು ಚಲಿಸಬಾರದು ಎಂಬ ಎಚ್ಚರಿಕೆಯನ್ನು ಗುತ್ತಿಗೆದಾರರಿಗೆ, ಚಿತ್ತೂರು ಪಿ.ಡಿ. ರವರಿಗೆ ನೀಡಿದರು.
ಮರಗಿಡಗಳ ಪರಿಹಾರ ನೀಡುವವರೆಗೂ ಶಾಂತಿಯುತವಾಗಿ ವಿಭಿನ್ನ ಹೋರಾಟ ಮಾಡುತ್ತೇವೆ. ಆ ಸಮಯದಲ್ಲಿ ಗುತ್ತಿಗೆದಾರರು ಕಾಮಗಾರಿ ಮಾಡಲು ಮುಂದಾಗುವ ಜೊತೆಗೆ ಟಿಪ್ಪರ್ ಮತ್ತಿತರ ವಾಹನಗಳು ಸಂಚರಿಸಿದರೆ ನಮ್ಮ ಜಾನುವಾರುಗಳಿಗೆ ತೊಂದರೆಯಾಗುವುದರಿAದ ಯಾವುದೇ ಕಾರಣಕ್ಕೂ ವಾಹನಗಳನ್ನು ೩ ಕಿಮೀ ವ್ಯಾಪ್ತಿಯಲ್ಲಿ ಸಂಚರಿಸದAತೆ ರೈತರೇ ನಿರ್ಬಂಧ ವಿಧಿಸಿ ಹೊಸ ರೈತ ಕಾನೂನು ಜುಲೈ ೩ ರಿಂದಲೇ ಜಾರಿ ಮಾಡುತ್ತಿದ್ದು, ಕಾನೂನು ಉಲ್ಲಂಘನೆ ಮಾಡಿದರೆ ರೈತರೇ ಕಾನೂನು ಕೈಗೆತ್ತಿಕೊಳ್ಳುತ್ತೇವೆಂದು ಎಚ್ಚರಿಕೆ ನೀಡಿದರು.
ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲವೆಂಬ ಗಾಧೆಯಂತೆ ಮಾನ್ಯ ಜಿಲ್ಲಾಧಿಕಾರಿಗಳು ಚೆನ್ನೆöÊ ಕಾರಿಡಾರ್ ರಸ್ತೆ ಅಭಿವೃದ್ಧಿಗೆ ಭೂಸ್ವಾಧೀನವಾಗಿರುವ ಗಡಿಭಾಗದ ಚುಕ್ಕನಹಳ್ಳಿ ಸರ್ವೇ ನಂ.೩೫ರಲ್ಲಿನ ರೈತರ ೨ನೇ ಕಂತಿನ ಮರಗಿಡಗಳ ೧.೧೭ ಕೋಟಿ ಪರಿಹಾರ ಕೂಡಲೇ ಖಾತೆದಾರರಿಗೆ ಬಿಡುಗಡೆ ಮಾಡುವಂತೆ ೧೭-೦೫-೨೦೨೫ರಂದು ತೆರೆದ ನ್ಯಾಯಾಲಯದಲ್ಲಿ ಆದೇಶ ಮಾಡಿ ೨ ತಿಂಗಳಾದರೂ ಇದುವರೆಗೂ ಹಣ ಬಿಡುಗಡೆ ಮಾಡದೆ ಚಿತ್ತೂರು ಸೈಟ್ ಇಂಜಿನಿಯರ್ ಕಾರ್ತಿಕ್ ಅವರು ಜಿಲ್ಲಾಧಿಕಾರಿಗಳು ಕನ್ನಡದಲ್ಲಿ ಆದೇಶ ಮಾಡಿದ್ದಾರೆ. ನಮಗೆ ಅರ್ಥವಾಗುತ್ತಿಲ್ಲ. ಇಂಗ್ಲೀಷ್ ನಲ್ಲಿ ಆದೇಶ ಬೇಕು ಎಂದು ಯಾವುದೋ ನೆಪ ಹೇಳಿ ಗಡಿಭಾಗದ ರೈತರ ಪರಿಹಾರ ಹಣವನ್ನು ಲಪಟಾಯಿಸಲು ಸಂಚು ನಡೆಸುತ್ತಿದ್ದಾರೆಂದು ಚಿತ್ತೂರು ಪಿ.ಡಿ. ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೂರು ದಿನದೊಳಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಗಡಿಭಾಗದ ರೈತರ ೨ನೇ ಕಂತಿನ ಮರಗಿಡಗಳ ಪರಿಹಾರವನ್ನು ಚಿತ್ತೂರು ಪಿ.ಡಿ. ಖಾತೆಯಿಂದ ಖಾತೆದಾರರಿಗೆ ಬಿಡುಗಡೆಯಾಗಬೇಕು. ಇಲ್ಲವಾದರೆ ಮೇಲ್ಕಂಡ ದಿನಾಂಕದಿAದ ೩ ಕಿಮೀ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ವಾಹನಗಳು ಚಲಿಸದಂತೆ ನಿರ್ಬಂಧದ ಶಾಂತಿಯುತ ಹೋರಾಟವನ್ನು ಕೈಗೆತ್ತಿಕೊಳ್ಳುವ ಎಚ್ಚರಿಕೆಯನ್ನು ಚಿತ್ತೂರು ಪಿ.ಡಿ.ಗೆ ನೀಡುತ್ತಿದ್ದೇವೆ.
ಸಭೆಯಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ವಿಶ್ವ, ಜನಾರ್ಧನ್, ಸುಬ್ರಮಣಿ, ನಾರಾಯಣಸ್ವಾಮಿ, ರಾಜಣ್ಣ, ಮಾರಪ್ಪ, ನಟರಾಜ್, ಪುತ್ತೇರಿ ರಾಜು, ಗಿರೀಶ್, ಕುಮಾರ್, ಮಂಗಸAದ್ರ ತಿಮ್ಮಣ್ಣ, ಯಲುವಳ್ಳಿ ಪ್ರಭಾಕರ್, ಹೆಬ್ಬಣಿ ಆನಂದರೆಡ್ಡಿ ಮುಂತಾದವರಿದ್ದರು.
ಚಿತ್ರ : ರಾಷ್ಟಿಯ ಹೆದ್ದಾರಿ ನಿರ್ಮಾಣಕ್ಕಾಗಿ ಭೂ ಸ್ವಾದೀನ ಪಡಿಸಿಕೊಂಡಿರುವ ಜಮೀನುಗಳಿಗೆ ಪರಿಹಾರ ನೀಡದಿದ್ದಲ್ಲಿ ಮುಂದಿನ ತಿಂಗಳಿನಿAದ ಹೋರಾಟ ನಡೆಸುವುದಾಗಿ ಕೋಲಾರ ಜಿಲ್ಲೆ ಮುಳಬಾಗಿಲಿನಲ್ಲಿ ನಡೆದ ರೈತ ಸಭೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್