ಅತಿಯಾದ ಯೂರಿಯಾ ಬಳಕೆ ಹಾನಿಕಾರಕ
ಧಾರವಾಡ, 29 ಜೂನ್ (ಹಿ.ಸ.) : ಆ್ಯಂಕರ್ : ಯೂರಿಯಾ ಗೊಬ್ಬರವು ಬೆಳೆಗಳಿಗೆ ಅವಶ್ಯಕವಾದ ಪೋಷಕಾಂಶ ಒದಗಿಸಬಹುದಾದರೂ, ಅದರ ಅತಿಯಾದ ಬಳಕೆ ಮಣ್ಣು, ಬೆಳೆ ಹಾಗೂ ಪರಿಸರದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಧಾರವಾಡ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಎಚ್ಚರಿಸಿದ್ದಾರೆ. ಅತಿಯಾದ ಯೂರಿಯಾ ಬಳಕೆ ಮಣ್ಣಿನಲ್ಲ
ಅತಿಯಾದ ಯೂರಿಯಾ ಬಳಕೆ ಹಾನಿಕಾರಕ


ಧಾರವಾಡ, 29 ಜೂನ್ (ಹಿ.ಸ.) :

ಆ್ಯಂಕರ್ : ಯೂರಿಯಾ ಗೊಬ್ಬರವು ಬೆಳೆಗಳಿಗೆ ಅವಶ್ಯಕವಾದ ಪೋಷಕಾಂಶ ಒದಗಿಸಬಹುದಾದರೂ, ಅದರ ಅತಿಯಾದ ಬಳಕೆ ಮಣ್ಣು, ಬೆಳೆ ಹಾಗೂ ಪರಿಸರದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಧಾರವಾಡ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಎಚ್ಚರಿಸಿದ್ದಾರೆ.

ಅತಿಯಾದ ಯೂರಿಯಾ ಬಳಕೆ ಮಣ್ಣಿನಲ್ಲಿ ಅಮೋನಿಯಾ ಸ್ರವಿಸಿಸುವ ಮೂಲಕ ಪಿಎಚ್ ಮಟ್ಟ ಹೆಚ್ಚಿಸಿ, ಮಣ್ಣಿನ ರಚನೆಯನ್ನು ಹಾಳುಮಾಡುತ್ತದೆ. ಇದು ಮಣ್ಣಿನ ಸೂಕ್ಷ್ಮಜೀವಿಗಳ ನಾಶಕ್ಕೆ ಕಾರಣವಾಗಿದ್ದು, ದೀರ್ಘಾವಧಿಯಲ್ಲಿ ಫಲವತ್ತತೆ ಕಡಿಮೆಯಾಗುತ್ತದೆ.

ಬೆಳೆಗಳ ಬೆಳವಣಿಗೆಯಲ್ಲಿಯೂ ಈ ಬಳಕೆಯು ನಕಾರಾತ್ಮಕ ಪರಿಣಾಮ ಬೀರುತ್ತದೆ. ಸಸಿಗಳು ಸೊಗಸಾಗಿ ಬೆಳೆದು ಕಾಳು ಕಟ್ಟುವ ಪ್ರಕ್ರಿಯೆ ನಷ್ಟವಾಗುತ್ತವೆ. ಕೀಟ-ರೋಗದ ಅಪಾಯ ಹೆಚ್ಚಾಗುತ್ತದೆ. ಬೀಜ ಹಾಗೂ ಬೇರುಗಳಿಗೆ ಅಮೋನಿಯಾ ವಿಷಕಾರಿಯಾಗಬಹುದು.

ಇದಲ್ಲದೆ, ಯೂರಿಯಾ ಬಳಕೆಯಿಂದ ವಾತಾವರಣದಲ್ಲಿ ಅಮೋನಿಯಾ ಅನಿಲವಾಗಿ ಬಿಡುಗಡೆಗೊಂಡು ವಾಯು ಹಾಗೂ ನೀರಿನ ಮಾಲಿನ್ಯ ಉಂಟುಮಾಡುತ್ತದೆ. ಆದ್ದರಿಂದ, ಯೂರಿಯಾವನ್ನು ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಮಾತ್ರ ಬಳಸುವಂತೆ ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande