ತುರ್ತುಪರಿಸ್ಥಿತಿ ವೇಳೆ ಸಂವಿಧಾನದ ಬದಲಾವಣೆ ದೇಶಕ್ಕೆ ಕಪ್ಪು ಚುಕ್ಕೆ
ಬೆಂಗಳೂರು, 29 ಜೂನ್ (ಹಿ.ಸ.) : ಆ್ಯಂಕರ್ : ತುರ್ತು ಪರಿಸ್ಥಿತಿಯನ್ನು ದೇಶದಲ್ಲಿ ಹೇರಿದ ನಂತರ, ಸಂವಿಧಾನದ 42 ನೇ ತಿದ್ದುಪಡಿಯನ್ನು ಜಾರಿ ಮಾಡಲಾಯಿತು ಹಾಗೂ ಸಂವಿಧಾನದ 32 ನಿಬಂಧನೆಗಳನ್ನು ಬದಲಾಯಿಸಲಾಯಿತು. ಸಂವಿಧಾನದಲ್ಲಿ ಶೇ. 50% ರಷ್ಟು ಬದಲಾವಣೆಗಳನ್ನು ತರಲಾಯಿತು. ಇಂದು, ಕೆಲವರು ಸಾರ್ವಜನಿಕವಾಗಿ
ತುರ್ತುಪರಿಸ್ಥಿತಿ ವೇಳೆ ಸಂವಿಧಾನದ ಬದಲಾವಣೆ ದೇಶಕ್ಕೆ ಕಪ್ಪು ಚುಕ್ಕೆ


ಬೆಂಗಳೂರು, 29 ಜೂನ್ (ಹಿ.ಸ.) :

ಆ್ಯಂಕರ್ : ತುರ್ತು ಪರಿಸ್ಥಿತಿಯನ್ನು ದೇಶದಲ್ಲಿ ಹೇರಿದ ನಂತರ, ಸಂವಿಧಾನದ 42 ನೇ ತಿದ್ದುಪಡಿಯನ್ನು ಜಾರಿ ಮಾಡಲಾಯಿತು ಹಾಗೂ ಸಂವಿಧಾನದ 32 ನಿಬಂಧನೆಗಳನ್ನು ಬದಲಾಯಿಸಲಾಯಿತು. ಸಂವಿಧಾನದಲ್ಲಿ ಶೇ. 50% ರಷ್ಟು ಬದಲಾವಣೆಗಳನ್ನು ತರಲಾಯಿತು. ಇಂದು, ಕೆಲವರು ಸಾರ್ವಜನಿಕವಾಗಿ ಸಂವಿಧಾನವನ್ನು ಕೈಯಲ್ಲಿ ಹಿಡಿದು ಪ್ರದರ್ಶಿಸುತ್ತಿದ್ದಾರೆ. ಆದರೆ, ದೇಶಕ್ಕೆ‌ ತಂದ ಕಪ್ಪುಚುಕ್ಕೆಯ ಬಗ್ಗೆ ಎಂದಿಗೂ ಕನಿಷ್ಠ ವಿಷಾದ ಅಥವಾ ಪಶ್ಚಾತ್ತಾಪವನ್ನು ವ್ಯಕ್ತಪಡಿಸದೇ ಇರುವುದು ದುರಂತ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande