ಧರ್ಮಶಾಲದಲ್ಲಿ ಸಿಪಿಎ ವಲಯ-II ಸಮ್ಮೇಳನ
ನವದೆಹಲಿ, 29 ಜೂನ್ (ಹಿ.ಸ.) : ಆ್ಯಂಕರ್ : ಲೋಕಸಭೆ ಅಧ್ಯಕ್ಷ ಓಂ ಬಿರ್ಲಾ ಅವರು ಜೂನ್ 30, ಸೋಮವಾರ ಧರ್ಮಶಾಲಾದ ತಪೋವನದಲ್ಲಿ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ ಭಾರತ ಪ್ರದೇಶದ ವಲಯ II ರ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಈ ವಲಯದಲ್ಲಿ ದೆಹಲಿ, ಹರಿಯಾಣ, ಹಿಮಾಚಲ ಪ್ರದೇಶ, ಜಮ್
ಧರ್ಮಶಾಲದಲ್ಲಿ ಸಿಪಿಎ ವಲಯ-II ಸಮ್ಮೇಳನ


ನವದೆಹಲಿ, 29 ಜೂನ್ (ಹಿ.ಸ.) :

ಆ್ಯಂಕರ್ : ಲೋಕಸಭೆ ಅಧ್ಯಕ್ಷ ಓಂ ಬಿರ್ಲಾ ಅವರು ಜೂನ್ 30, ಸೋಮವಾರ ಧರ್ಮಶಾಲಾದ ತಪೋವನದಲ್ಲಿ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ ಭಾರತ ಪ್ರದೇಶದ ವಲಯ II ರ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.

ಈ ವಲಯದಲ್ಲಿ ದೆಹಲಿ, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಹಾಗೂ ಪಂಜಾಬ್ ರಾಜ್ಯಗಳು ಒಳಗೊಂಡಿವೆ.

ಸಮ್ಮೇಳನದ ಪ್ರಮುಖ ವಿಷಯ ಡಿಜಿಟಲ್ ಯುಗದಲ್ಲಿ ಉತ್ತಮ ಆಡಳಿತ, ಸಂಪನ್ಮೂಲ ನಿರ್ವಹಣೆ, ಪ್ರಜಾಪ್ರಭುತ್ವ ರಕ್ಷಣೆ ಮತ್ತು ನಾವೀನ್ಯತೆ ಅಳವಡಿಕೆ ಕುರಿತಾಗಿದೆ

ಸಮ್ಮೇಳನದಲ್ಲಿ ಹಿಮಾಚಲ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು, ರಾಜ್ಯಸಭೆ ಉಪಾಧ್ಯಕ್ಷ ಹರಿವಂಶ್, ಹಿಮಾಚಲ ವಿಧಾನಸಭೆಯ ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ, ವಿರೋಧ ಪಕ್ಷದ ನಾಯಕ ಜೈ ರಾಮ್ ಠಾಕೂರ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹರ್ಷವರ್ಧನ್ ಚೌಹಾಣ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.

ಎರಡು ದಿನಗಳ ಈ ಸಮ್ಮೇಳನದಲ್ಲಿ ರಾಜ್ಯ ಸಂಪನ್ಮೂಲ ನಿರ್ವಹಣೆಯಲ್ಲಿ ಶಾಸಕಾಂಗಗಳ ಪಾತ್ರ, 10ನೇ ವೇಳಾಪಟ್ಟಿಯಡಿ ಪಕ್ಷಾಂತರದ ಅನರ್ಹತೆ ಮತ್ತು ಶಾಸಕಾಂಗಗಳಲ್ಲಿ ಕೃತಕ ಬುದ್ಧಿಮತ್ತೆ (AI) ಬಳಕೆ ಕುರಿತು ಚರ್ಚೆಗಳು ನಡೆಯಲಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande