ಗದಗ, 28 ಜೂನ್ (ಹಿ.ಸ.) :
ಆ್ಯಂಕರ್ : ಅಪಾರ ಮಳೆ ಸುರಿಯುತ್ತಿದೆ, ನದಿಗಳು ತುಂಬಿ ಹರಿಯುತ್ತಿವೆ, ಬ್ಯಾರೇಜುಗಳು ಭರ್ತಿಯಾಗಿವೆ. ಆದರೆ ನಮ್ಮ ಮನೆಗಳಿಗೆ ನೀರು ಬರಲ್ಲವೇಕೆ? ಇದೊಂದು ಕೇವಲ ಪ್ರಶ್ನೆ ಅಲ್ಲ, ಗದಗ-ಬೆಟಗೇರಿ ಅವಳಿ ನಗರವಾಸಿಗಳ ತೀವ್ರ ಆಕ್ರೋಶವನ್ನು ಪ್ರತಿಬಿಂಬಿಸುವ ನಿಜವಾದ ಚಿತ್ರಣವಾಗಿದೆ.
ಇತ್ತೀಚೆಗೆ ಗದಗದ ಮುಳಗುಂದ ನಾಕಾ ಬಳಿ, ದಾಸರ ಓಣಿಯ ನೂರಕ್ಕೂ ಹೆಚ್ಚು ಮಹಿಳೆಯರು ಕುಡಿಯುವ ನೀರಿನ ಕೊರತೆಯನ್ನು ಒತ್ತಾಯಪೂರ್ವಕವಾಗಿ ಎತ್ತಿಹಿಡಿದು, ಖಾಲಿ ಕೊಡಗಳೊಂದಿಗೆ ರಸ್ತೆ ತಡೆ ನಡೆಸಿದ ದೃಶ್ಯ ಸಾರ್ವಜನಿಕ ಗಮನ ಸೆಳೆದಿದೆ. ಮಧ್ಯಾಹ್ನವೇಳೆಯಲ್ಲಿ ಭಾರಿ ಮಳೆ ಸುರಿಯುತ್ತಿದ್ದರೂ ಸಹ, ಮಹಿಳೆಯರು ನಡುರಸ್ತೆಯಲ್ಲಿ ಕುಳಿತು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಿಂಗಳಿಗೊಮ್ಮೆ ಮಾತ್ರ ನೀರು!
ಅವಳಿ ನಗರದ ಜನರು ತಿಂಗಳಿಗೊಮ್ಮೆ ಮಾತ್ರ ನೀರು ದೊರಕುತ್ತಿರುವುದರಿಂದ ಮನೆಯಲ್ಲಿರುವ ಮಹಿಳೆಯರು ನಿತ್ಯವೂ ಬೋರ್ ವೆಲ್ ನೀರನ್ನು ಕುಡಿಯುವ ಪರಿಸ್ಥಿತಿಗೆ ತುತ್ತಾಗಿದ್ದಾರೆ. ಈ ಬೋರ್ ವೆಲ್ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿರುವ ಕಾರಣ ಅನೇಕರು ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮಕ್ಕಳಿಗೆ ಹೊಟ್ಟೆನೋವು, ಹಲ್ಲು ಹಾಗೂ ಎಲುಬು ಸಂಬಂಧಿ ಸಮಸ್ಯೆಗಳು ಇವೆ. ಇದನ್ನೆಲ್ಲಾ ನೋಡಿದ್ರೂ ಅಧಿಕಾರಿಗಳು ಸುಮ್ಮನಿದ್ದಾರೆ. ನಾವು ಹೇಗೆ ಬದುಕಬೇಕು? ಎಂಬ ಕೂಗು ಪ್ರತಿಭಟನಾಕಾರ ಮಹಿಳೆಯರೊಂದರಿತು.
ವ್ಯವಸ್ಥಿತ ನೀರು ಪೂರೈಕೆ ಯಾಕೆ ಇಲ್ಲ?
ಕಾನೂನು ಸಚಿವ ಎಚ್ ಕೆ ಪಾಟೀಲ್ ಅವರ ತವರು ಕ್ಷೇತ್ರವಾದ ಗದಗ-ಬೆಟಗೇರಿಯಲ್ಲಿ ನದಿ, ಡ್ಯಾಂಗಳ ಸಮೃದ್ಧಿಯ ಮಧ್ಯೆಯೂ ಜನರು ಹನಿ ನೀರಿಗೆ ಪರಿತಪಿಸುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದ್ದು, ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಸ್ಪಷ್ಟ ನಿದರ್ಶನವಾಗಿದೆ. ತುಂಗಭದ್ರಾ ನದಿಯ ಹಮ್ಮಿಗಿ ಬ್ಯಾರೇಜ್ ತುಂಬಿರಲು ಸಹ, ನಗರಕ್ಕೆ ಪೂರೈಕೆ ಮಾಡುವ ವ್ಯವಸ್ಥೆ ಅಸಮರ್ಪಕವಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬರುತ್ತಿದೆ.
ಮಹಿಳೆಯರ ಕಿಡಿ
ಪ್ರತಿಭಟನೆಯ ವೇಳೆ ಮಹಿಳೆಯರು ನಗರಸಭೆ ಹಾಗೂ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗಿದರು. ನೀರು ಬೇಕು, ಬೇಕೇ ಬೇಕು!, ಸಚಿವನ ತವರು ಕ್ಷೇತ್ರವಿದು, ಇಲ್ಲಿ ಜನ ಗೋಳಾಡುತ್ತಿದ್ರೆ ಯಾರಿಗೆ ಹೇಳೋದು? ಎಂಬ ಘೋಷಣೆಗಳನ್ನು ಕೂಗಿದರು.
ಅಧಿಕಾರಿಗಳ ಸ್ಪಂದನೆ: ತಾತ್ಕಾಲಿಕ ಭರವಸೆ
ಪ್ರತಿಭಟನೆಯ ವಿವರವನ್ನು ತಿಳಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ನಗರಸಭೆ ಇಂಜಿನಿಯರ್ ಹುಣಸಿಮಠ ಅವರು ಪ್ರತಿಭಟನಾಕಾರರೊಂದಿಗೆ ಮಾತನಾಡಿ, “ಜಲವಿತರಣಾ ಪೈಪ್ ಲೈನ್ ಒಡೆದಿದ್ದು, ದುರಸ್ತಿ ಕಾರ್ಯ ನಡೆಯುತ್ತಿದೆ. ಅವಶ್ಯಕ ಕ್ರಮ ಕೈಗೊಳ್ಳಲಾಗುತ್ತಿದ್ದು ಶೀಘ್ರದಲ್ಲೇ ನೀರಿನ ಪೂರೈಕೆ ಪುನರಾರಂಭವಾಗಲಿದೆ,” ಎಂದು ಭರವಸೆ ನೀಡಿದರು.
ಆದರೆ ಮಹಿಳೆಯರು ಈ ಭರವಸೆಯ ಬಗ್ಗೆ ಅಸಂತೋಷ ವ್ಯಕ್ತಪಡಿಸುತ್ತಾ, ಪ್ರತಿ ಬಾರಿ ಇದು ನೆಪ. ಮಳೆಗಾಲ ಬಂದರೂ ಸಮಸ್ಯೆ ಇದೆ, ಬೇಸಿಗೆಯಲ್ಲಿ ಇನ್ನೂ ಹದಗೆಡುತ್ತದೆ. ಜನಪ್ರತಿನಿಧಿಗಳು ನಮ್ಮ ಪರಿಸ್ಥಿತಿಯ ಅರಿವಿಗೆ ಬರಬೇಕು ಎಂದು ಹೇಳಿದ್ದಾರೆ.
ಸಮಸ್ಯೆಗೆ ಶಾಶ್ವತ ಪರಿಹಾರ ಅವಶ್ಯಕ
ಈ ಕುರಿತು ಜನರು ಈಗ ಕೇಳುತ್ತಿರುವ ಪ್ರಶ್ನೆ – “ನಾವು ಕಾನೂನು ಸಚಿವನ ತವರು ಕ್ಷೇತ್ರದಲ್ಲಿದ್ದರೂ ಈ ಪರಿಸ್ಥಿತಿ ಎದುರಿಸಬೇಕಾದರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ನೀರಿನ ಸಮಸ್ಯೆಗಳನ್ನು ಬಗೆಹ. ಹರಿಸಬೇಕು ಎಂದು ಒತ್ತಾಯ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / Lalita MP