ಅಕ್ರಮವಾಗಿ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮದ ದಾಖಲಾತಿ
ಅಕ್ರಮವಾಗಿ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮದ ದಾಖಲಾತಿ
ಕೋಲಾರದಲ್ಲಿ ಅಕ್ರಮವಾಗಿ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮ ಭೋಧನೆ ಮಾಡುತ್ತಿರುವ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕೋಲಾರ ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಮಾನವ ಹಕ್ಕುಗಳ ಸಂಘಟನೆಯಿAದ ಮನವಿ ಸಲ್ಲಿಸಲಾಯಿತು.


ಕೋಲಾರ,ಜೂ.೨೮ (ಹಿ.ಸ) ಆಂಕರ್ : ಕೋಲಾರ ಜಿಲ್ಲೆಯಲ್ಲಿ ಅನುಮತಿ ಇಲ್ಲದೆ ನಡೆಸಲಾಗುತ್ತಿರುವ ಸಿ.ಬಿ.ಎಸ್.ಇ ಮತ್ತು ಐ.ಸಿ.ಎಸ್.ಇ ಅಕ್ರಮ ದಾಖಲಾತಿಗಳನ್ನು ಮಾಡಿಕೊಳ್ಳುತ್ತಿದ್ದು, ಪೋಷಕರಿಗೆ ಶಾಲೆಗಳ ಮಾಹಿತಿ ಕೊರತೆ ಉಂಟಾಗಿರುವುದರಿಂದ ಶಾಲೆಯ ನಾಮಫಲಕಗಳಲ್ಲಿ ಕಡ್ಡಾಯವಾಗಿ ಇ.ಬಿ.ಎಸ್.ಇ ಮತ್ತು ಐ.ಸಿ.ಎಸ್.ಇ ಅನುಮತಿ ಪತ್ರಗಳನ್ನು ಹಾಕಬೇಕೆಂದು ಆದೇಶ ಹೊರಡಿಸಲು ಕರ್ನಾಟಕ ಮಾನವ ಹಕ್ಕುಗಳ ಸಮಿತಿ ವತಿಯಿಂದ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕೋಲಾರ ಜಿಲ್ಲೆಯಲ್ಲಿ ಕೆಲವು ಶಾಲೆಗಳು ಸಿ.ಬಿ.ಎಸ್.ಇ ಮತ್ತು ಐ.ಸಿ.ಎಸ್.ಇ ಅನುಮತಿ ಪಡೆಯದೆ ಅಕ್ರಮವಾಗಿ ದಾಖಲಾತಿಗಳನ್ನು ಆರಂಭಿಸಿದ್ದಾರೆ. ಈ ಶಾಲೆಗಳು ಸಿ.ಬಿ.ಎಸ್.ಇ ಮತ್ತು ಐ.ಸಿ.ಎಸ್.ಇ ಅಧಿಕೃತ ಅನುಮೋದನೆಯಿಲ್ಲದೆ ಸಿ.ಬಿ.ಎಸ್.ಇ ಮತ್ತು ಐ.ಸಿ.ಎಸ್.ಇ ಪಠ್ಯಕ್ರಮದಡಿಯಲ್ಲಿ ವಿದ್ಯಾರ್ಥಿಗಳನ್ನು ದಾಖಲಿಸುತ್ತಿರುವ ಬಗ್ಗೆ ಮಾಹಿತಿಗಳು ಲಭಿಸಿವೆ. ಇದು ಸಿ.ಬಿ.ಎಸ್.ಇ ಮತ್ತು ಐ.ಸಿ.ಎಸ್.ಇ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರನ್ನು ತಪ್ಪು ಮಾಹಿತಿಯೊಂದಿಗೆ ಪ್ರೇರೇಪಿಸಲಾಗುತ್ತಿದೆ.

ಅನುಮತಿ ಇಲ್ಲದೆ ಶಾಲೆಗಳಲ್ಲಿ ದಾಖಲಾತಿಗಳನ್ನು ನಡೆಸುತ್ತಿರುವುದು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ ರವರ ಗಮನಕ್ಕೆ ಬಂದಿದ್ದರೂ ಶಾಲೆಗಳ ವಿರುದ್ಧ ಕ್ರಮ ವಹಿಸದೆ ಪೋಷಕರು ಮತ್ತು ವಿದ್ಯಾರ್ಥಿಗಳನ್ನು ವಂಚಿಸುತ್ತಿದ್ದಾರೆ.

ಈ ರೀತಿ ನಡೆಯುವ ಆಕ್ರಮ ಚಟುವಟಿಕೆಗಳು ಸಿ.ಬಿ.ಎಸ್.ಇ ಮತ್ತು ಐ.ಸಿ.ಎಸ್.ಇ ಶೈಕ್ಷಣಿಕ ವ್ಯವಸ್ಥೆಯ ಗೌರವವನ್ನು ಹಾನಿಗೊಳಿಸುವುದಷ್ಟೇ ಅಲ್ಲದೆ, ಅಲ್ಲಿ ದಾಖಲಾಗಿರುವ ಮಕ್ಕಳ ಭವಿಷ್ಯವನ್ನೂ ಅಪಾಯಕ್ಕೀಡುಮಾಡುತ್ತದೆ.

ಈ ಹಿನ್ನಲೆಯಲ್ಲಿ ಉದಾಹರಣೆಗೆ ಕೋಲಾರ ಜಿಲ್ಲೆಯಲ್ಲಿ ಎಸ್.ಎಫ್.ಎಸ್. ಶಾಲೆ ಮಾಲೂರು, ಚೈತನ್ಯ ಟೆಕ್ನೋ ಸ್ಕೂಲ್ ಕೋಲಾರ, ಡೆಕ್ಕನ್ ಇಂಟರ್‌ನ್ಯಾಷನಲ್ ಸ್ಕೂಲ್ ಮುಳಬಾಗಿಲು ಇನ್ನು ಮುಂತಾದ ಶಾಲೆಗಳು ಅಕ್ರಮವಾಗಿ ಸಿ.ಬಿ.ಎಸ್.ಇ ಮತ್ತು ಐ.ಸಿ.ಎಸ್.ಇ ಪ್ರವೇಶಗಳನ್ನು ಮಾಡಿಕೊಳ್ಳುತ್ತಿರುವುದು ಸ್ಪಷ್ಟ ಉಲ್ಲಂಘನೆಯಾಗಿದೆ. ಶಿಕ್ಷಣ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ವಹಿಸಲು ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಬೇಕಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಿ.ಬಿ.ಎಸ್.ಇ ೨೫ ಶಾಲೆಗಳು ಮತ್ತು ಐ.ಸಿ.ಎಸ್.ಇ ೧೦ ಶಾಲೆಗಳು ಮಾತ್ರ ಅನುಮತಿ ಪಡೆದುಕೊಂಡಿರುವ ಮಾಹಿತಿ ಲಭ್ಯವಿದ್ದು, ಉಳಿದೆಲ್ಲಾ ಶಾಲೆಗಳು ಪೋಷಕರನ್ನು ವಂಚಿಸುತ್ತಿರುವುದು ಎದ್ದು ಕಾಣಿಸುತ್ತಿದೆ.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ೨೫೦ ರಿಂದ ೩೦೦ ಶಾಲೆಗಳು ಮಕ್ಕಳನ್ನು ಶಾಲೆಗೆ ದಾಖಲಿಸಿಕೊಂಡು ವಂಚಿಸುತ್ತಿದ್ದಾರೆ ಪೋಷಕರು ಕಡ್ಡಾಯವಾಗಿ ಶಾಲೆಯ ಅನುಮತಿ ಪತ್ರವನ್ನು ನೋಡಿ ಶಾಲೆಗೆ ದಾಖಲಿಸಬೇಕಾಗಿ ಪೋಷಕರಲ್ಲಿ ಕರ್ನಾಟಕ ಮಾನವ ಹಕ್ಕುಗಳ ಸಮಿತಿ ವಿನಂತಿಸಿದೆ.

ಆದ್ದರಿಂದ ಪೋಷಕರಿಗೆ ಶಾಲೆಗಳ ಮಾಹಿತಿ ಕೊರತೆ ಉಂಟಾಗಿರುವುದರಿಂದ ಶಾಲೆಯ ನಾಮಫಲಕಗಳಲ್ಲಿ ಕಡ್ಡಾಯವಾಗಿ ಸಿ.ಬಿ.ಎಸ್.ಸಿ ಮತ್ತು ಐ.ಸಿ.ಎಸ್.ಸಿ ಸೂಚನಾ ಫಲಕದಲ್ಲಿ ಅನುಮತಿ ಪತ್ರಗಳನ್ನು ಅಳವಡಿಸಲು ಆದೇಶ ಹೊರಡಿಸಬೇಕು, ಸಿ.ಬಿ.ಎಸ್.ಸಿ ಹೆಸರಿನಲ್ಲಿ ದುಪ್ಪಟ್ಟು ಹಣವನ್ನು ಪೋಷಕರಿಂದ ವಸೂಲಿ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಲು ಒತ್ತಾಯಿಸಿದ್ದಾರೆ.

ನಿಯೋಗದಲ್ಲಿ ಕರ್ನಾಟಕ ಮಾನವ ಹಕ್ಕುಗಳ ಸಮಿತಿ ಕರ್ನಾಟಕ ಮಾನವ ಹಕ್ಕುಗಳ ಸಮಿತಿಯ ರಾಜ್ಯಾಧ್ಯಕ್ಷ ಗಲ್‌ಪೇಟೆ ಕೆ.ಸಿ.ಸಂತೋಷ್, ನಗರಸಭಾ ಮಾಜಿ ಉಪಾಧ್ಯಕ್ಷ ವಿ.ಕೆ.ರಾಜೇಶ್, ಜಿಲ್ಲಾಧ್ಯಕ್ಷರಾದ ಟಮಕ ಶ್ರೀನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಮಂಜುನಾಥ ಸ್ವಾಮಿ, ಯುವ ಸಮಿತಿ ಅಧ್ಯಕ್ಷರಾದ ರಂಜಿತ್, ಕಾರ್ಮಿಕ ಸಮಿತಿ ಅಧ್ಯಕ್ಷರಾದ ನರಸಿಂಹರಾಜು, ಕೆಜಿಎಫ್ ತಾಲೂಕ ಅಧ್ಯಕ್ಷರಾದ ಕಿರಣ್, ಜಗದೀಶ್ ಮುಂತಾದವರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande