ಬೆಂಗಳೂರು, 28 ಜೂನ್ (ಹಿ.ಸ.):
ಆ್ಯಂಕರ್:ಪ್ರಾರ್ಥನೆ, ಪೂಜೆ ಮಾಡುವುದನ್ನು ಯಾರೂ ನಿಲ್ಲಿಸಲು ಆಗುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ನಡೆದ ಮೈಸೂರು ದಸರಾ ಉನ್ನತ ಮಟ್ಟದ ಸಮಿತಿ ಸಭೆಯ ನಂತರ ಮಾಧ್ಯಮದವರ ಜೊತೆ ಮಾತನಾಡಿ, ಕಾವೇರಿ ಆರತಿ ಕಾರ್ಯಕ್ರಮಕ್ಕೆ ಹೈಕೋರ್ಟ್ ತಡೆ ನೀಡಿದ ವಿಚಾರದ ಬಗ್ಗೆ , ಕೋರ್ಟ್ ಆದೇಶದ ಪ್ರತಿ ನಾನು ನೋಡಿಲ್ಲ. ಆದೇಶದಲ್ಲಿ ಏನಿದೆ ಎಂಬುದನ್ನು ನೋಡಿ ನಂತರ ಮಾತನಾಡುತ್ತೇನೆ ಎಂದರು.
ಪೂಜೆ ಮಾಡುವುದು, ಕೈ ಮುಗಿಯುವುದನ್ನು ಯಾರು ನಿಲ್ಲಿಸಲು ಆಗುವುದಿಲ್ಲ. ಕಾವೇರಿ ನದಿಗೆ ಬಾಗಿನ ಬಿಡುವ ಕಾರ್ಯಕ್ರಮವಿದೆ, ದಸರಾ ಕಾರ್ಯಕ್ರಮ ಮಾಡಲಾಗುತ್ತದೆ. ಅದನ್ನು ನಿಲ್ಲಿಸಲು ಸಾಧ್ಯವೇ?. ನಾವು ಕಾವೇರಿ ಆರತಿ ಕಾರ್ಯಕ್ರಮ ದೊಡ್ಡದ್ದಾಗಿ ಮಾಡಲು ತೀರ್ಮಾನಿಸಿದ್ದೆವು ಎಂದು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa