ರಾಯಚೂರು, 28 ಜೂನ್ (ಹಿ.ಸ.) :
ಆ್ಯಂಕರ್ : ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕನ್ನಾಪೂರ ಹಟ್ಟಿಯ ಪಿ.ಎಮ್ಶ್ರೀ ಜವಾಹರ ನವೋದಯ ವಿದ್ಯಾಲಯದಿಂದ 2026-27ನೇ ಸಾಲಿನ 6ನೇ ತರಗತಿ ಪ್ರವೇಶಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ.
ವಿದ್ಯಾಲಯದದಲ್ಲಿ ಎನ್ಇಪಿ 2020ರ ಆದರಿತ ಶಿಕ್ಷಣ ವ್ಯವಸ್ಥೆ, ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಉಚಿತ ಊಟ ಮತ್ತು ವಸತಿ ವ್ಯವಸ್ಥೆ, ಅನುಭವಿ ಮತ್ತು ನುರಿತ ಸಿಬ್ಬಂದಿ, ಅಂತರ್ಜಾಲ, ಎಜುಸ್ಯಾಟ್ ಸೌಲಭ್ಯ, ಮಕ್ಕಳ ಸವಾರ್ಂಗೀಣ ವ್ಯಕ್ತಿತ್ವ ವಿಕಸನಕ್ಕಾಗಿ ಸಹಪಠ್ಯ ಚಟುವಟಿಕೆ, ಕ್ರೀಡೆ ಮತ್ತು ಆಟೋಟ, ಯೋಗ ತರಬೇತಿಗೆ ವಿಶೇಷ ಪ್ರೋತ್ಸಾಹ ನೀಡಲಾಗುವುದು.
ಅರ್ಹತೆ: ಅರ್ಜಿ ತುಂಬುವ ವಿದ್ಯಾರ್ಥಿಗಳು 2025-26ನೇ ಸಾಲಿನಲ್ಲಿ 5 ನೇ ತರಗತಿ ರಾಯಚೂರು ಜಿಲ್ಲೆಯಲ್ಲಿ ಓದುತ್ತಿರಬೇಕು. ಪ್ರವೇಶ ಪಡೆಯ ಬಯಸುವ ಅಭ್ಯರ್ಥಿಯು ದಿನಾಂಕ: 01-05-2014ಕ್ಕಿಂತ ಮೊದಲು ಮತ್ತು ದಿನಾಂಕ 31-07-2016 ನಂತರ ಜನಿಸಿರಬಾರದು. ಸರಕಾರದ ಮಾನ್ಯತೆ ಪಡೆದ ಯಾವುದೇ ಶಾಲೆಯಲ್ಲಿ 3, 4ನೇ ತರಗತಿ ಉತ್ತೀರ್ಣನಾಗಿದ್ದು, 5ನೇ ತರಗತಿಯಲ್ಲಿ ಓದುತ್ತಿರಬೇಕು. 2025-26ನೇ ಸಾಲಿನಲ್ಲಿ ದಿನಾಂಕ: 31-07-20025ರ ಒಳಗಾಗಿ ಜಿಲ್ಲೆಯಲ್ಲಿ 5ನೇ ತರಗತಿ ಪ್ರವೇಶ ಪಡೆದಿರಬೇಕು.
ಅರ್ಜಿ ಸಲ್ಲಿಸುವುದು: ಜವಾಹರ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ 2026ರ ಅರ್ಜಿಯನ್ನು ಆನ್ ಲೈನ್ ಮುಖಾಂತರ ಸಲ್ಲಿಸತಕ್ಕದ್ದು. ಮುಖ್ಯೋಪಾಧ್ಯಾಯರು ನೀಡಿದ ಪ್ರಮಾಣ ಪತ್ರ. ಅಭ್ಯರ್ಥಿಯ ಭಾವಚಿತ್ರ
ಅಭ್ಯರ್ಥಿಯ ಸಹಿ ಮತ್ತು ಪಾಲಕರ ಸಹಿ, ಅಭ್ಯರ್ಥಿಯ ಆಧಾರ ಸಂಖ್ಯೆ, ಪಾಲಕರ ಮೊಬೈಲ್ ಸಂಖ್ಯೆ, ವಾಸಸ್ಥಳ ಪ್ರಮಾಣ ಪತ್ರದೊಂದಿಗೆ ಆಸಕ್ತರು ವೆಬ್ಸೈಟ್ ವಿಳಾಸ ದಲ್ಲಿ ಜುಲೈ 29ರೊಳಗಾಗಿ ಸಲ್ಲಿಸಬಹುದಾಗಿದೆ. ಪ್ರವೇಶ ಪರೀಕ್ಷೆಯನ್ನು ಡಿಸೆಂಬರ್ 13ರ ಬೆಳಿಗ್ಗೆ 11.30ಗಂಟೆಗೆ ಹಮ್ಮಿಕೊಳ್ಳಲಾಗಿ ದೆ.
ಹೆಚ್ಚಿನ ಮಾಹಿತಿಗಾಗಿ ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರು ಮೊಬೈಲ್ ಸಂಖ್ಯೆ: 7204109046 ಅಥವಾ 7899009900ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಪಿ.ಎಮ್ಶ್ರೀ ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್