ಲಕ್ಷ್ಮೇಶ್ವರ ಪುರಸಭೆ ವತಿಯಿಂದ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ
ಗದಗ, 28 ಜೂನ್ (ಹಿ.ಸ.) ಆ್ಯಂಕರ್:- ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪುರಸಭೆಯ ಸಾರ್ವಜನಿಕರಿಗೆ ತಿಳಿಪಡಿಸುವುದೇನೆಂದರೆ, ಲಕ್ಷ್ಮೇಶ್ವರ ಪುರಸಭೆ ವ್ಯಾಪ್ತಿಯ ಹಿರೇಬಣದ ವಾರ್ಡ ನಂ : 06 ರಲ್ಲಿ ಶ್ರೀ ದೇವಾಲಯದ ಹತ್ತಿರ ಇರುವ ವೃತ್ತಕ್ಕೆ ಅಮರಶಿಲ್ಪಿ ಜಕಣಾಚಾರ್ಯ ವೃತ್ತ ಅಂತಾ ನಾಮಕರಣ ಮಾಡಲು ದಿನಾಂಕ:08-10-20
ಪೋಟೋ


ಗದಗ, 28 ಜೂನ್ (ಹಿ.ಸ.)

ಆ್ಯಂಕರ್:- ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪುರಸಭೆಯ ಸಾರ್ವಜನಿಕರಿಗೆ ತಿಳಿಪಡಿಸುವುದೇನೆಂದರೆ, ಲಕ್ಷ್ಮೇಶ್ವರ ಪುರಸಭೆ ವ್ಯಾಪ್ತಿಯ ಹಿರೇಬಣದ ವಾರ್ಡ ನಂ : 06 ರಲ್ಲಿ ಶ್ರೀ ದೇವಾಲಯದ ಹತ್ತಿರ ಇರುವ ವೃತ್ತಕ್ಕೆ ಅಮರಶಿಲ್ಪಿ ಜಕಣಾಚಾರ್ಯ ವೃತ್ತ ಅಂತಾ ನಾಮಕರಣ ಮಾಡಲು ದಿನಾಂಕ:08-10-2024 ರಂದು ಜರುಗಿದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಠರಾವು ನಂ: 350 ರಲ್ಲಿ ತೀರ್ಮಾನಿಸಿದೆ.

ಸದರಿ ವೃತ್ತಕ್ಕೆ ಅಮರಶಿಲ್ಪಿ ಜಕಣಾಚಾರ್ಯ ವೃತ್ತ ಅಂತಾ ನಾಮಕರಣ ಮಾಡಲು ಯಾರದಾದರೂ ಆಕ್ಷೇಪಣೆ ಇದ್ದಲ್ಲಿ ಈ ಪ್ರಕಟಣೆ ಪ್ರಕಟಗೊಂಡ 30 ದಿನ ಒಳಗಾಗಿ ಪುರಸಭೆಗೆ ಲಿಖಿತ ಮೂಲಕ ಆಕ್ಷೇಪಣೆ ಸಲ್ಲಿಸಲು ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ ಲಕ್ಷ್ಮೇಶ್ವರ ಪುರಸಭೆ ಕಾರ್ಯಾಲಯವನ್ನು ಸಂಪರ್ಕಿಸಬಹುದಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande