ಹೊಸಪೇಟೆ, 28 ಜೂನ್ (ಹಿ.ಸ.) :
ಆ್ಯಂಕರ್ : ಸಂಕ್ಲಾಪುರ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಜೂ.29 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ದುರಸ್ತಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಕಾರ್ಯ ಮತ್ತು ಪಾಲನಾ ನಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ನಗರದ 11 ಕೆವಿ ಫೀಡರ್ಗಳಾದ ಎಂ.ಪಿ ಪ್ರಕಾಶ, ಬಸವನದುರ್ಗ (ಎನ್ಜೆವೈ) ವ್ಯಾಪ್ತಿಗೆ ಒಳಪಡುವ ಎಂ.ಪಿ ಪ್ರಕಾಶ ನಗರ, ಅನಂತಶಯನಗುಡಿ, ಕೊಂಡನಾಯಕನಹಳ್ಳಿ, ಕಾರಿಗನೂರು, ಮಾರುತಿ ನಗರ, ಸಾಯಿ ಕಾಲೋನಿ, ಸಂಕ್ಲಾಪುರ ಏರಿಯಾ, ನಾಗೇನಹಳ್ಳಿ, ಬಸವನದುರ್ಗ, ಹೊಸೂರು, ಇಪ್ಪಿತೇರಿ ಮಾಗಣಿ, ನರಸಾಪುರ, 118 ಡಣಾಪುರ ಮತ್ತು 88 ಮುದ್ಲಾಪುರ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವಿದ್ಯುತ್ ವ್ಯತಯ ಉಂಟಾಗಲಿದ್ದು, ಸಾರ್ವಜನಿಕರು ಹಾಗೂ ಗ್ರಾಹಕರು ಸಹಕರಿಸಬೇಕೆಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್