ಕೋಲಾರ, ೨೮ ಜೂನ್ (ಹಿ.ಸ) ಆಂಕರ್ : ಕನ್ನಡ ಜಾನಪದ ಪರಿಷತ್ ರಾಜ್ಯ ಪ್ರಥಮ ಜಾನಪದ ಸಮ್ಮೇಳನ ದಶಮಾನೋತ್ಸವದಲ್ಲಿ ನಾಡೋಜ ಎಸ್.ಕೆ ಕರೀಂ ಖಾನ್ ಪ್ರಶಸ್ತಿಯನ್ನು ಕೋಲಾರದ ಸಾಧಕರಾದ ಪಿ.ನಾರಾಯಣಪ್ಪ ಅವರಿಗೆ ನೀಡಿ ಗೌರವಿಸಲಾಯಿತು.
ಪಿ.ನಾರಾಯಣಪ್ಪ ಕವಿಯಾಗಿ, ಸಂಘಟಕರಾಗಿ, ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದಾರೆ. ಸೈನಿಕರಾಗಿ ದೇಶ ಸೇವೆ ಸಲ್ಲಿಸಿದ ನಂತರ ರಾಜ್ಯಾದ್ಯಂತ ಕ್ರಿಯಾಶೀಲ ವ್ಯಕ್ತಿಯಾಗಿ ಅನೇಕ ಚುಟುಕು, ಕವಿತೆ, ಲೇಖನಗಳನ್ನು ಬರೆಯುತ್ತಾ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ ಹೆಸರುವಾಸಿಯಾಗಿದ್ದಾರೆ.
ಸಾಹಿತ್ಯದ ಆರಾಧಕರಾಗಿ ಜಿಲ್ಲಾ ಮಟ್ಟದ, ರಾಜ್ಯ ಮಟ್ಟದ ಅನೇಕ ಸಮಾರಂಭಗಳನ್ನು ಮಾಡಿ ಯಶಸ್ವಿಗೊಳಿಸಿದ್ದಾರೆ. ಕವನ ಸಂಕಲನವಾದ ಸಿಪಾಯಿ ಸಿಂಧೂರ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ರಾಜ್ಯಾದ್ಯಂತ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇದೀಗ ಇವರ ಮೂವತ್ತು ವರ್ಷಗಳ ಕಾಲದ ಸಾಹಿತ್ಯ ಸೇವೆಯನ್ನು ಗುರುತಿಸಿ ಬುಧವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಸಮ್ಮೇಳನದಲ್ಲಿ ಪಿ ನಾರಾಯಣಪ್ಪ ಅವರಿಗೆ ಎಸ್ ಕೆ ಕರೀಖಾನ್ ಪ್ರಶಸ್ತಿಯನ್ನು ಮುಖ್ಯ ಅತಿಥಿಗಳಾದ ನಿವೃತ್ತ ಐಎಎಸ್ ಜಿಲ್ಲಾಧಿಕಾರಿ ಪಿ ಸೋಮಶೇಖರ್ ಹಾಗೂ ರಾಜ್ಯಾಧ್ಯಕ್ಷ ಬಾಲಾಜಿ ಇನ್ನೀತರ ಗಣ್ಯರು ನೀಡಿ ಅಭಿನಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್