ಹಳೇಮಾಧ್ಯಮಿಕ ಶಾಲೆ ಮುಖ್ಯ ಶಿಕ್ಷಕಿ ಸರಸ್ವತಮ್ಮನವರಿಗೆ ಬೀಳ್ಕೊಡುಗೆ
ಹಳೇಮಾಧ್ಯಮಿಕ ಶಾಲೆ ಮುಖ್ಯ ಶಿಕ್ಷಕಿ ಸರಸ್ವತಮ್ಮನವರಿಗೆ ಬೀಳ್ಕೊಡುಗೆ
ಕೋಲಾರ ಹಳೇ ಮಾಧ್ಯಮಿಕ ಶಾಲೆಯ ಮುಖ್ಯ ಶಿಕ್ಷಕಿ ಕೆ.ಆರ್.ಸರಸ್ವತಮ್ಮ ವಯೋ ನಿವೃತ್ತಿಯಿಂದ ನಿವೃತ್ತರಾಗುತ್ತಿರುವುರಿಂದ ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಮತ್ತು ಭಾರತ ಸೇವಾದಳವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.


ಕೋಲಾರ, ೨೮ ಜೂನ್ (ಹಿ.ಸ) :

ಆ್ಯಂಕರ್ : ಆಂಕರ್ ಸುದೀರ್ಘ ಅವಧಿ ಸೇವೆ ಸಲ್ಲಿಸಿ ನಿವೃತ್ತರಾಗುವ ಅಧಿಕಾರಿ ಸಿಬ್ಬಂದಿಗೆ ಕುಟುಂಬದ ಸದಸ್ಯರಿಂದ ನಿರಂತರ ಪ್ರೀತಿ ಸಿಗುವಂತಾಗಬೇಕು, ಅವರಿಂದಲೇ ಅವರಿಗೆ ನೆಮ್ಮದಿಯ ಬದುಕು ಸಾಧ್ಯ ಎಂದು ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಹೇಳಿದರು.

ನಗರದ ಹಳೇ ಮಾಧ್ಯಮಿಕ ಶಾಲೆಯ ಮುಖ್ಯ ಶಿಕ್ಷಕಿ ಕೆ.ಆರ್.ಸರಸ್ವತಮ್ಮರಿಗೆ ವಯೋ ನಿವೃತ್ತಿ ಸಂದರ್ಭದಲ್ಲಿ ಶನಿವಾರ ಶಾಲೆಯಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಸರಸ್ವತಮ್ಮರನ್ನು ಅಭಿನಂದಿಸಿ ಮಾತನಾಡಿದರು.

ಸುದೀರ್ಘ ಅವಯಲ್ಲಿ ಕೆಲಸ ಮಾಡಿ ಶಾಲೆ, ವಿದ್ಯಾರ್ಥಿ ಸಮೂಹ ಹಾಗೂ ಸಹೋದ್ಯೋಗಿಗಳಿಂದ ಅಪಾರ ಪ್ರೀತಿ ಗಳಿಸಿ ನಿವೃತ್ತರಾಗುವವರಿಗೆ ಮನೆಯಲ್ಲಿ ಸಂಗಾತಿ, ಮಗ, ಮಗಳು, ಅಳಿಯ, ಸೊಸೆ, ಮೊಮ್ಮಕ್ಕಳಿಂದ ಅಪರಮಿತ ಪ್ರೀತಿ ಸಿಕ್ಕಾಗ ಅವರ ನಿವೃತ್ತ ಜೀವನ ಶಾಂತಿಯುತವಾಗಿ ಆರೋಗ್ಯಯುತವಾಗಿ ಸಾಗಲು ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸರಸ್ವತಮ್ಮನವರು ಭಾರತ ಸೇವಾದಳದ ಕಾರ್ಯ ಚಟುವಟಿಕೆಗಳನ್ನು ಬಹಳ ಆಸಕ್ತಿ ಮತ್ತು ಕಾಳಜಿಯಿಂದ ಯಾವುದೇ ಲೋಪವಾಗದಂತೆ ಎಚ್ಚರವಹಿಸಿ ನಡೆಸಿದ್ದಾರೆ, ಅವರ ೪೦ ವರ್ಷಗಳ ಸೇವೆಯಲ್ಲಿ ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದ್ದಾರೆ, ಸಹೋದ್ಯೋಗಿಗಳೊಂದಿಗೂ ಉತ್ತಮ ಬಾಂಧವ್ಯವನ್ನು ಹೊಂದಿದ್ದರು, ಅವರ ನಿವೃತ್ತ ಜೀವನ ಸುಖಮಯವಾಗಿ, ಆರೋಗ್ಯಪೂರ್ಣವಾಗಿರಲಿ ಎಂದು ಶುಭ ಕೋರಿದರು.

ದೇವರಾಯಸಮುದ್ರದಲ್ಲಿ ಜೂನ್೧೦, ೧೯೬೫ ರಲ್ಲಿ ಜನಿಸಿದ ಕೆ.ಆರ್.ಸರಸ್ವತಮ್ಮ ತಮ್ಮ ೨೦ನೇ ವಯಸ್ಸಿಗೆ ಶಿಕ್ಷಕಿಯಾಗಿ ಆಯ್ಕೆಯಾಗಿ ಶ್ರೀನಿವಾಸಪುರ, ಮುಳಬಾಗಿಲು, ಕೋಲಾರದ ವಿವಿಧ ಶಾಲೆಗಳಲ್ಲಿ ೪೦ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದರೆಂದು ಸಹೋದ್ಯೋಗಿ ಶಿಕ್ಷಕಿಯರು ಬಣ್ಣಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಶಾಲೆಗಳಿಂದ ಆಗಮಿಸಿದ್ದ ಸಹೋದ್ಯೋಗಿ ಶಿಕ್ಷಕಿಯರು, ಶಿಕ್ಷಕರು, ಶಾಲಾ ಶಿಕ್ಷಣ ಇಲಾಖೆಯ ಅಕಾರಿ ಸಿಬ್ಬಂದಿ ಸರಸ್ವತಮ್ಮರಿಗೆ ವಿವಿಧ ರೀತಿಯ ಕೊಡುಗೆಗಳನ್ನು ನೀಡಿ ಗೌರವಿಸಿ ಬೀಳ್ಕೊಟ್ಟರು.

ಹಳೇ ಮಾಧ್ಯಮಿಕ ಶಾಲೆಯ ಮಕ್ಕಳು ಹಾಗೂ ಹಳೇ ವಿದ್ಯಾರ್ಥಿಗಳು ಪ್ರೀತಿಯ ಶಿಕ್ಷಕಿ ಸರಸ್ವತಮ್ಮರಿಗೆ ವಿವಿಧ ರೀತಿಯ ಹಾಡುಗಳನ್ನು ಹಾಡಿ, ಕೊಡುಗೆಗಳನ್ನು ನೀಡಿ ಪ್ರೀತಿ ತೋರಿ ಬೀಳ್ಕೊಟ್ಟರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಬಿಆರ್‌ಪಿ ನಾಗರಾಜ್, ಸಿಆರ್‌ಪಿ ಸುರೇಶ್, ಗೋವಿಂದ್, ಕಮಲಮಹಡಿ ಶಾಲೆ ಮುಖ್ಯ ಶಿಕ್ಷಕ ರಾಮಪ್ಪö, ಕೀಲುಕೋಟೆ ಶಾಲೆ ಮುಖ್ಯ ಶಿಕ್ಷಕ ಸರೋಜಮ್ಮö, ಕಠಾರಿಪಾಳ್ಯ ಶಾಲಾ ಮುಖ್ಯ ಶಿಕ್ಷಕ ಕೋಟೇಶ್ವರ್, ಹಳೇ ಮಾಧ್ಯಮಿಕ ಶಾಲೆಯ ಎಸ್‌ಡಿಎಂಸಿ ಸದಸ್ಯರು, ಹಳೇ ವಿದ್ಯಾರ್ಥಿಗಳು. ಶಿಕ್ಷಕರಾದ ಟಿ.ಕೆ.ನಾಗರಾಜ್, ಶ್ರೀರಾಮ್, ಶ್ರೀನಿವಾಸ್ ಇತರರು ಭಾಗವಹಿಸಿದ್ದರು.

ಗಂಗಮ್ಮನಪಾಳ್ಯ ಶಾಲೆ ಮುಖ್ಯ ಶಿಕ್ಷಕ ಎಲ್.ಮುನಿಯಪ್ಪ ಕಾರ್ಯಕ್ರಮ ನಿರೂಪಿಸಿದರು.

ಚಿತ್ರ : ಕೋಲಾರ ಹಳೇ ಮಾಧ್ಯಮಿಕ ಶಾಲೆಯ ಮುಖ್ಯ ಶಿಕ್ಷಕಿ ಕೆ.ಆರ್.ಸರಸ್ವತಮ್ಮ ವಯೋ ನಿವೃತ್ತಿಯಿಂದ ನಿವೃತ್ತರಾಗುತ್ತಿರುವುರಿಂದ ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಮತ್ತು ಭಾರತ ಸೇವಾದಳವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande