ಬೆಂಗಳೂರು, 28 ಜೂನ್ (ಹಿ.ಸ.):
ಆ್ಯಂಕರ್:ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಮೂಲ ಸಂವಿಧಾನ ಕಗ್ಗೊಲೆ ಮಾಡಿ, ದೇಶದ ಜನತೆಗೆ ದ್ರೋಹ ಬಗೆದಿರುವ ಕಾಂಗ್ರೆಸ್ ಮತ್ತೆ ಸಂವಿಧಾನ ಉಳಿಸಿ ಅಂತ ಹುಯಿಲು ಎಬ್ಬಿಸಿರುವುದು ಇದೇ ಮೊದಲೇನಲ್ಲ ಎಂದು ರಾಜ್ಯ ಬಿಜೆಪಿ ಘಟಕ ಆರೋಪಿಸಿದೆ.
ಸ್ವಾರ್ಥಕ್ಕಾಗಿ ಸಾಧನೆಗಾಗಿ ಸಂವಿಧಾನವನ್ನೇ ಅವಮಾನತ್ತಿನಲ್ಲಿಟ್ಟು, ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ದ್ರೋಹ ಬಗೆದಿದ್ದಲ್ಲದೇ, ದರ್ಪದ ದೌವಲತ್ತಿನಲ್ಲಿ1976ರಲ್ಲಿ ಸಂವಿಧಾನಕ್ಕೆ 42ನೇ ತಿದ್ದುಪಡಿ ತರುವ ಮೂಲಕ ಸಂವಿಧಾನದ ಪೀಠಿಕೆಯಲ್ಲಿ ʼಜಾತ್ಯತೀತʼ, ʼಸಮಾಜವಾದಿʼ ಪದ ಸೇರಿಸಿ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಮೂಲ ಸಂವಿಧಾನಕ್ಕೆ ಕೊಳ್ಳಿಯಿಟ್ಟಿತ್ತು.
ಸಂವಿಧಾನದ ಪೀಠಿಕೆಯಲ್ಲಿ ʼಜಾತ್ಯತೀತʼ, ʼಸಮಾಜವಾದಿʼ ಪದಗಳ ಸೇರ್ಪಡೆಗೆ ಸಂಸತ್ನಲ್ಲಿ ಸಮಗ್ರ ಚರ್ಚೆ ನಡೆಸದೆ, ಭಾರತ ಗಣರಾಜ್ಯದ ಆತ್ಮವನ್ನು ಬದಲಾಯಿಸಿ, ಸಂವಿಧಾನವನ್ನು ಅವಮಾನಿಸಿರುವುದನ್ನು ಯಾರೂ ಮರೆತಿಲ್ಲ.!
ದಶಕದಿಂದ ಅಧಿಕಾರವಿಲ್ಲದೆ ಹಸಿದಿರುವ ಕಾಂಗ್ರೆಸ್ಸಿಗರು, ಗದ್ದುಗೆ ದಾಹಕ್ಕಾಗಿ ಇಂದಿರಾ ಗಾಂಧಿ ಸಂವಿಧಾನ ಅನುಸರಿಸುತ್ತಿದ್ದಾರೆ. ಆದರೆ, ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಮೂಲ ಸಂವಿಧಾನದ ಮೇಲೆ ಅಪಾರ ಗೌರವವಿಟ್ಟುಕೊಂಡಿರುವ ಬಿಜೆಪಿ, ಬಾಬಾ ಸಾಹೇಬ್ರ ಮಾರ್ಗದಲ್ಲೇ ನಡೆಯುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa