ಕಲಬುರಗಿ, 28 ಜೂನ್ (ಹಿ.ಸ.):
ಆ್ಯಂಕರ್:ಕಲಬುರಗಿ ನಗರದ ಎಂ.ಎನ್. ದೇಸಾಯಿ ಪದವಿ ಮಹಾವಿದ್ಯಾಲಯದಲ್ಲಿ 2024-25ನೇ ಸಾಲಿನ ಜುಲೈ ಮತ್ತು ಜನವರಿ ಆವೃತ್ತಿಯ ಬಿ.ಎ, ಬಿ.ಕಾಂ ಪ್ರವೇಶಾತಿ ಪಡೆದಿದ್ದಾರೆ ಸಂಪೂರ್ಣ ವಾರಾಂತ್ಯ ಸಮಲೋಚನಾ ತರಗತಿಗಳನ್ನು ನಡೆಸಲಾಯಿತು.
ನಗರದ ಎಂ ಎನ್ ದೇಸಾಯಿ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ತರಗತಿ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು ಪ್ರಾದೇಶಿಕ ಆಯುಕ್ತರಾದ ಡಾ.ಸಂಗಮೇಶ್ವರ ಹಿರೇಮಠ ನೆರವೇರಿಸಿದರು.
ಈ ವೇಳೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮನವರಿಕೆ ಮಾಡಿದರು ಹಾಗೂ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ನಿಯಮಗಳ ಉಲ್ಲಂಘನೆ ಮಾಡಕೂಡದು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಂದೀಪ್ ದೇಸಾಯಿ, ಕಾರ್ಯದರ್ಶಿಗಳಾದ ಜಗನ್ನಾಥ್ ನಾಗೂರ ಸಿಬ್ಬಂದಿಗಳಾದ ಮಂಜುನಾಥ್ ಬನ್ನೂರ್, ನಾಗರಾಜ ಪಾಟ್ನಾಕರ್, ಶ್ರೀದೇವಿ ಹಿರೇಮಠ ಗುರುಬಾಯಿ ಸಾಹುವಾಡಿ, ರಶ್ಮಿ ಪಾಟೀಲ, ಶರಣು ಪೂಜಾರಿ, ಅಮರ್ ಹಗರಾಗಿ, ರಾಧಿಕಾ ಗುತ್ತೇದಾರ್, ಸಂತೋಷ್ ಲಸ್ಕರ್, ಶಿಲ್ಪ ಚೆಟ್ಟಿ ಹಾಗೂ ವಿದ್ಯಾರ್ಥಿಗಳು ಉಪಸಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಪ್ರಿಯಾಂಕಾ ಹೊಸಮನಿ