ಛತ್ತೀಸ್‌ಗಢದಲ್ಲಿ ಆರು ನಕ್ಸಲರ ಶರಣಾಗತಿ
ನಾರಾಯಣಪುರ, 27 ಜೂನ್ (ಹಿ.ಸ.) : ಆ್ಯಂಕರ್ : ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯ ಅತಿ ಸೂಕ್ಷ್ಮ ನಕ್ಸಲ್ ಪ್ರದೇಶಗಳಲ್ಲಿ ಮಾದ್ ಬಚಾವೋ ನಕ್ಸಲ್ ನಿರೋಧಕ ಅಭಿಯಾನ ಹಿನ್ನಲೆಯಲ್ಲಿ, ₹10 ಲಕ್ಷ ಬಹುಮಾನ ಹೊಂದಿದ್ದ ಆರು ನಕ್ಸಲರು ಶರಣಾಗಿದ್ದಾರೆ. ಐಟಿಬಿಪಿ, ಬಿಎಸ್‌ಎಫ್ ಮತ್ತು ಎಸ್‌ಟಿಎಫ್ ಜಂಟಿ ಪಡೆಗಳು ನಿರ
Surendr


ನಾರಾಯಣಪುರ, 27 ಜೂನ್ (ಹಿ.ಸ.) :

ಆ್ಯಂಕರ್ : ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯ ಅತಿ ಸೂಕ್ಷ್ಮ ನಕ್ಸಲ್ ಪ್ರದೇಶಗಳಲ್ಲಿ ಮಾದ್ ಬಚಾವೋ ನಕ್ಸಲ್ ನಿರೋಧಕ ಅಭಿಯಾನ ಹಿನ್ನಲೆಯಲ್ಲಿ, ₹10 ಲಕ್ಷ ಬಹುಮಾನ ಹೊಂದಿದ್ದ ಆರು ನಕ್ಸಲರು ಶರಣಾಗಿದ್ದಾರೆ.

ಐಟಿಬಿಪಿ, ಬಿಎಸ್‌ಎಫ್ ಮತ್ತು ಎಸ್‌ಟಿಎಫ್ ಜಂಟಿ ಪಡೆಗಳು ನಿರಂತರವಾಗಿ ಶಿಬಿರಗಳನ್ನು ಸ್ಥಾಪಿಸಿ ನಕ್ಸಲರ ಮೇಲೆ ಒತ್ತಡವನ್ನು ಹೆಚ್ಚಿಸುತ್ತಿರುವ ಪರಿಣಾಮವಾಗಿ, ನಾಲ್ವರು ಮಹಿಳೆಯರು ಮತ್ತು ಇಬ್ಬರು ಪುರುಷರು ಸೇರಿ ಒಟ್ಟು ಆರು ನಕ್ಸಲರು ಶುಕ್ರವಾರ ಶರಣಾಗಿದ್ದಾರೆ.

ಈ ಶರಣಾದ ನಕ್ಸಲರಿಗೆ ಪ್ರೋತ್ಸಾಹಧನವಾಗಿ ತಲಾ ₹50 ಸಾವಿರಗಳ ಚೆಕ್ ವಿತರಣೆ ಮಾಡಲಾಗಿದೆ. ನಕ್ಸಲ್ ನಿರ್ಮೂಲನಾ ನೀತಿ ಅಡಿಯಲ್ಲಿ ಈ ನಕ್ಸಲರು ಮನೆ, ಉದ್ಯೋಗ ಹಾಗೂ ಪುನರ್ವಸತಿ ಸೌಲಭ್ಯಗಳಿಗೂ ಅರ್ಹರಾಗಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande