ಬಸ್ ಅಪಘಾತ : ಮತ್ತೊಂದು ಶವ ಪತ್ತೆ, 8 ಜನರು ಇನ್ನೂ ಕಾಣೆ
ರುದ್ರಪ್ರಯಾಗ, 27 ಜೂನ್ (ಹಿ.ಸ.) : ಆ್ಯಂಕರ್ : ಉತ್ತರಾಖಂಡದ ಬದ್ರಿನಾಥ್ ಹೆದ್ದಾರಿಯ ಘೋಲ್ತಿರ್ ಬಳಿ ನಡೆದ ಭೀಕರ ಬಸ್ ಅಪಘಾತದ ನಂತರ ಕಾಣೆಯಾದ 9 ಮಂದಿ ಪ್ರಯಾಣಿಕರಲ್ಲಿ ಒಬ್ಬರ ಶವ ರತುಡಾ ಬಳಿ ಅಲಕನಂದಾ ನದಿಯಲ್ಲಿ ಪತ್ತೆಯಾಗಿದೆ. ಮೃತರನ್ನು ಸಂಜಯ್ ಸೋನಿ (55), ರಾಜಸ್ಥಾನದ ಉದಯಪುರ ನಿವಾಸಿ ಎಂದು ಗುರು
Search


ರುದ್ರಪ್ರಯಾಗ, 27 ಜೂನ್ (ಹಿ.ಸ.) :

ಆ್ಯಂಕರ್ : ಉತ್ತರಾಖಂಡದ ಬದ್ರಿನಾಥ್ ಹೆದ್ದಾರಿಯ ಘೋಲ್ತಿರ್ ಬಳಿ ನಡೆದ ಭೀಕರ ಬಸ್ ಅಪಘಾತದ ನಂತರ ಕಾಣೆಯಾದ 9 ಮಂದಿ ಪ್ರಯಾಣಿಕರಲ್ಲಿ ಒಬ್ಬರ ಶವ ರತುಡಾ ಬಳಿ ಅಲಕನಂದಾ ನದಿಯಲ್ಲಿ ಪತ್ತೆಯಾಗಿದೆ.

ಮೃತರನ್ನು ಸಂಜಯ್ ಸೋನಿ (55), ರಾಜಸ್ಥಾನದ ಉದಯಪುರ ನಿವಾಸಿ ಎಂದು ಗುರುತಿಸಲಾಗಿದೆ. ಶವವನ್ನು ರುದ್ರಪ್ರಯಾಗ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದ್ದು, ನಂತರ ಕುಟುಂಬದವರಿಗೆ ಹಸ್ತಾಂತರಿಸಲಾಗುತ್ತದೆ.

ಜಿಲ್ಲಾ ಪೊಲೀಸ್, ಅಗ್ನಿಶಾಮಕ ದಳ, ಎಸ್‌ಡಿಆರ್‌ಎಫ್, ಡಿಡಿಆರ್‌ಎಫ್ ಮತ್ತು ಜಲ ಪೊಲೀಸ್ ಪಡೆಗಳು ದೋಣಿಗಳು ಹಾಗೂ ಸೋನಾರ್ ತಂತ್ರಜ್ಞಾನದಿಂದ ಸಹಿತ ಎರಡನೇ ದಿನವೂ ಶೋಧ ಕಾರ್ಯಚರಣೆ ಮುಂದುವರೆಸಿವೆ. 8 ಮಂದಿ ಇನ್ನೂ ಕಾಣೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande