ನವದೆಹಲಿ, 25 ಜೂನ್ (ಹಿ.ಸ.) :
ಆ್ಯಂಕರ್ : 1975ರಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯ 50ನೇ ವರ್ಷದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನ ಹತ್ಯೆ ದಿವಸ್ ದಿನದಂದು, ಆ ಅವಧಿಯ ವಿರುದ್ಧ ಹೋರಾಟ ನಡೆಸಿದ ಎಲ್ಲರಿಗೂ ಗೌರವ ಸಲ್ಲಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಸಂದೇಶ ಹಂಚಿಕೊಂಡಿರುವ ಅವರು ಈ ಹೋರಾಟವನ್ನು ಭಾರತದ ಪ್ರಜಾಪ್ರಭುತ್ವವನ್ನು ರಕ್ಷಿಸಲು ನಡೆದ ಜನಚಳವಳಿ ಎಂದು ವರ್ಣಿಸಿದ್ದಾರೆ. ನಮ್ಮ ಸಂವಿಧಾನದ ತತ್ವಗಳನ್ನು ಬಲಪಡಿಸಿ, ಬಡವರು ಮತ್ತು ವಂಚಿತರ ಕನಸುಗಳನ್ನು ನೆರವೇರಿಸುವತ್ತ ನಾವು ಕೈಜೋಡಿಸೋಣ, ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.
: ತುರ್ತು ಪರಿಸ್ಥಿತಿಯ ವಿರುದ್ಧ ಎದ್ದು ನಿಂತ ಜನರು ವಿಭಿನ್ನ ಸಿದ್ಧಾಂತಗಳಿಂದ ಬಂದಿದ್ದರೂ, ಪ್ರಜಾಪ್ರಭುತ್ವವನ್ನು ಉಳಿಸಲು ಒಂದಾಗಿ ಹೋರಾಡಿದರು. ಅವರ ಹೋರಾಟವೇ ಹೊಸ ಚುನಾವಣೆಗಳಿಗೆ ನಾಂದಿಯಾಯಿತು ಮತ್ತು ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸಿತು. ಆದರೆ ಕಾಂಗ್ರೆಸ್ ಶೋಚನೀಯ ಸೋಲು ಕಂಡಿತು. ಎಂದಿದ್ದಾರೆ.
ತುರ್ತು ಪರಿಸ್ಥಿತಿಯ ಸಮಯದ ವೈಯಕ್ತಿಕ ಅನುಭವವನ್ನು ಹಂಚಿಕೊಂಡಿರುವ ಪ್ರಧಾನಿ, ಆ ಸಮಯದಲ್ಲಿ ನಾನು ಆರ್ಎಸ್ಎಸ್ನ ಯುವ ಪ್ರಚಾರಕನಾಗಿದ್ದೆ. ಆ ಚಳವಳಿಯಿಂದ ನಾನು ಬಹುಮಟ್ಟಿಗೆ ಕಲಿತೆ, ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa