ಸರ್ಕಾರದ ವಿರುದ್ಧ ತಿರುಗಿ ಬಿದ್ದ ಶಾಸಕ ಅಲ್ಲಮಪ್ರಭು
ಕಲಬುರಗಿ, 25 ಜೂನ್ (ಹಿ.ಸ) : ಆ್ಯಂಕರ್ : ನಮಗೆ ಹೇಳದೆ ಅಧಿಕಾರಿಗಳು‌ ಅಭಿವೃದ್ಧಿ ಕೆಲಸ ಆರಂಭ ಮಾಡುತ್ತಾರೆ ಎಂದು ಕಲಬುರಗಿಯಲ್ಲಿ ಕಾಂಗ್ರೆಸ್ ಪಕ್ಷದ ಮತ್ತೊಬ್ಬ ಶಾಸಕ ಅಸಮಾಧಾನ ಹೊರಹಾಕಿರುವ ಘಟನೆ ನಡೆದಿ ದೆ. ಕಲಬುರಗಿ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು, ಲ್ಯಾಂಡ್ ಆರ್ಮ
ಸರ್ಕಾರದ ವಿರುದ್ಧ ತೀರುಗಿಬಿದ್ರಾ ಶಾಸಕ ಅಲ್ಲಮಪ್ರಭು


ಕಲಬುರಗಿ, 25 ಜೂನ್ (ಹಿ.ಸ) :

ಆ್ಯಂಕರ್ : ನಮಗೆ ಹೇಳದೆ ಅಧಿಕಾರಿಗಳು‌ ಅಭಿವೃದ್ಧಿ ಕೆಲಸ ಆರಂಭ ಮಾಡುತ್ತಾರೆ ಎಂದು ಕಲಬುರಗಿಯಲ್ಲಿ ಕಾಂಗ್ರೆಸ್ ಪಕ್ಷದ ಮತ್ತೊಬ್ಬ ಶಾಸಕ ಅಸಮಾಧಾನ ಹೊರಹಾಕಿರುವ ಘಟನೆ ನಡೆದಿ ದೆ.

ಕಲಬುರಗಿ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು, ಲ್ಯಾಂಡ್ ಆರ್ಮಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಯೋಜನೆ ಗೊತ್ತಿರುತ್ತೆ ಆದರೆ ನಮಗೆ ಕೇಳದೆ ಕಾಮಗಾರಿ ಪ್ರಾರಂಭ ಮಾಡುತ್ತಾರೆ. ಪೂಜೆ ಮಾಡದೆ ಕಾಮಗಾರಿ ಆರಂಭ ಮಾಡುತ್ತಾರೆ ಎನ್ನುವ ಮೂಲಕ ಶಾಸಕ ಬಿ.ಆರ್. ಪಾಟೀಲ್ ಜೊತೆ ಧ್ವನಿಗೂಡಿಸಿದ್ದಾರೆ.

ಮೊನ್ನೆ ಅಷ್ಟೆ ಅಲ್ಪಸಂಖ್ಯಾತ ಇಲಾಖೆಯಿಂದ ಸ್ಕೂಲ್ ಕಟ್ಟಡಕ್ಕಾಗಿ 17 ಕೋಟಿ ನನಗೆ ಗೊತ್ತಿಲ್ಲದೆ ಬಂದಿದೆ ಎಂದು ಶಾಸಕ ಬಿ. ಆರ್. ಪಾಟೀಲ್ ಅಸಮಾಧಾನ ಹೊರಹಾಕಿದ್ದರು.‌ ಅದಕ್ಕೆ ಧ್ಚನಿಗೂಡಿಸಿ ಅಧಿಕಾರಿಗಳ ವರ್ತನೆ ಬಗ್ಗೆ ಅಲ್ಲಮಪ್ರಭು ಪಾಟೀಲ್ ಕಿಡಿಕಾರಿದ್ದಾರೆ. ‌

ಮಧ್ಯಮಗಳು ಮರು ಪ್ರಶ್ನಿಸಿದ ಬಳಿಕ ಶಾಂತವಾದ ಪಾಟೀಲ್, ನಮ್ಮವರೆ ಇದ್ದಾರೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಗಮನಕ್ಕೆ ತರುತ್ತೇವೆ, ಸರಿಪಡಿಸುತ್ತಾರೆ ಎಂದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಪ್ರಿಯಾಂಕಾ ಹೊಸಮನಿ


 rajesh pande