ನವದೆಹಲಿ, 25 ಜೂನ್ (ಹಿ.ಸ.) :
ಆ್ಯಂಕರ್ : 1975ರ ತುರ್ತು ಪರಿಸ್ಥಿತಿಯ 50ನೇ ವರ್ಷದ ಅಂಗವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಎಕ್ಸ್ ಹ್ಯಾಂಡಲ್ನಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ತುರ್ತು ಪರಿಸ್ಥಿತಿಯನ್ನು ಕಾಂಗ್ರೆಸ್ನ ಅಧಿಕಾರ ಹಸಿವಿನ ಅನ್ಯಾಯದ ಅವಧಿ ಎಂದು ಹೇಳಿದ್ದಾರೆ.
ಸಂವಿಧಾನ ಹತ್ಯಾ ದಿನ ಎಂದು ಮೋದಿ ಸರ್ಕಾರ ಈ ದಿನವನ್ನು ಆಚರಿಸುತ್ತಿದ್ದು, ಪ್ರಜಾಪ್ರಭುತ್ವದ ವಿರುದ್ಧ ನಡೆದ ದಮನವನ್ನು ಯುವ ಪೀಳಿಗೆಗೆ ಪರಿಚಯಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಶಾ ತಿಳಿಸಿದ್ದಾರೆ.
ಅಧಿಕಾರ ಸರ್ವಾಧಿಕಾರಿಯಾಗುವಾಗ ಜನರು ಅದನ್ನು ಉರುಳಿಸಬಲ್ಲ ಶಕ್ತಿ ಹೊಂದಿದ್ದಾರೆ. ತುರ್ತು ಪರಿಸ್ಥಿತಿ ರಾಷ್ಟ್ರೀಯ ಅಗತ್ಯವಲ್ಲ, ಅದು ಕಾಂಗ್ರೆಸ್ ಹಾಗೂ ಒಬ್ಬ ವ್ಯಕ್ತಿಯ ಪ್ರಜಾಪ್ರಭುತ್ವ ವಿರೋಧಿ ಮನಸ್ಥಿತಿಯ ಪ್ರತಿಫಲ.
ಅವರು ತುರ್ತು ಪರಿಸ್ಥಿತಿಯಲ್ಲಿ ಮಾಧ್ಯಮಗಳ ಮೇಲೆ ಎಸಗಿದ ದಬ್ಬಾಳಿಕೆ, ನ್ಯಾಯಾಂಗದ ನಿಷ್ಕ್ರಿಯತೆ ಮತ್ತು ಜನಪ್ರತಿನಿಧಿಗಳ ಬಂಧನಗಳನ್ನು ಉಲ್ಲೇಖಿಸಿ, ದೇಶವಾಸಿಗಳು ‘ಸಿಂಹಾಸನ ಖಾಲಿ ಮಾಡಿ’ ಎಂದು ಘೋಷಿಸಿ, ಸರ್ವಾಧಿಕಾರಿ ಕಾಂಗ್ರೆಸ್ ಅನ್ನು ಬೇರು ಸಹಿತ ಕಿತ್ತುಹಾಕಿದರು, ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa