ಬದಲಾಗದ ಕಾಂಗ್ರೆಸ್ ಮನಸ್ಥಿತಿ : ಜೆಪಿ ನಡ್ಡಾ
ನವದೆಹಲಿ, 25 ಜೂನ್ (ಹಿ.ಸ.) : ಆ್ಯಂಕರ್ : ಭಾರತೀಯ ಜನತಾ ಪಕ್ಷವು ಇಂದು “ಸಂವಿಧಾನ ಹತ್ಯಾ ದಿವಸ್”ವನ್ನು ಆಚರಿಸಿದ್ದು, ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ೫೦ ವರ್ಷ ಕಳೆದರು ಕಾಂಗ್ರೆಸ್ ಪಕ್ಷದ ಮನಸ್ಥಿತಿ ಬದಲಾಗಿಲ್ಲ, ಎ
Nadda


ನವದೆಹಲಿ, 25 ಜೂನ್ (ಹಿ.ಸ.) :

ಆ್ಯಂಕರ್ : ಭಾರತೀಯ ಜನತಾ ಪಕ್ಷವು ಇಂದು “ಸಂವಿಧಾನ ಹತ್ಯಾ ದಿವಸ್”ವನ್ನು ಆಚರಿಸಿದ್ದು, ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

೫೦ ವರ್ಷ ಕಳೆದರು ಕಾಂಗ್ರೆಸ್ ಪಕ್ಷದ ಮನಸ್ಥಿತಿ ಬದಲಾಗಿಲ್ಲ, ಎಂದಿದ್ದಾರೆ.

1975ರ ಜೂನ್ 25 ರಂದು ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ಹೇರಿದ್ದರಿಂದ ಸಂವಿಧಾನದ ಹತ್ಯೆ ನಡೆಯಿತು ಎಂದು ನಡ್ಡಾ ಆರೋಪಿಸಿದ್ದಾರೆ.

ತುರ್ತು ಪರಿಸ್ಥಿತಿಯಲ್ಲಿ ಪತ್ರಿಕಾ ಸ್ವಾತಂತ್ರ್ಯ ಹರಣ, ಪ್ರತಿ ಪಕ್ಷದ ನಾಯಕರ ಬಂಧನ, ನ್ಯಾಯಾಂಗ ಮತ್ತು ಸಂಸತ್ತಿನ ದುರ್ಬಳಕೆ ನಡೆಯಿತು ಎಂದಿರುವ ಅವರು, ಕಾಂಗ್ರೆಸ್ ಇಂದಿಗೂ ಸರ್ವಾಧಿಕಾರಿ ಮನೋಭಾವ ಹೊಂದಿದ್ದು, ಧಾರ್ಮಿಕ ಓಲೈಕೆ, ದಮನ ಮತ್ತು ಅಹಂಕಾರದ ವರ್ತಿಸುತ್ತಿದೆ ಎಂದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande