ಅಂಚೆ ನೌಕರರ ಸ್ನೇಹಿ ಅಂಚೆ : ಅಧೀಕ್ಷಕ ರಮೇಶ ಮಡಿವಾಳರ
ಗದಗ, 24 ಜೂನ್ (ಹಿ.ಸ.) : ಆ್ಯಂಕರ್ : ಅಂಚೆ ಇಲಾಖೆಯಲ್ಲಿ ಐಟಿ 2.0 ತಂತ್ರಜ್ಞಾನ ಆರಂಭದಿಂದಾಗಿ ತ್ವರಿತ ಮತ್ತು ಉತ್ತಮ ಸೇವೆ ದೊರೆಯಲಿದೆ ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ರಮೇಶ ಮಡಿವಾಳರ ಹೇಳಿದರು. ಭಾರತೀಯ ಅಂಚೆ ಇಲಾಖೆಯ ಪ್ರಧಾನ ಅಂಚೆ ಕಚೇರಿಯಲ್ಲಿ ಸೋಮವಾರ ಐಟಿ 2.0 ಕಾರ್ಯಕ್ರಮವನ್ನು ಉದ್ಘಾಟ
ಪೋಟೋ


ಗದಗ, 24 ಜೂನ್ (ಹಿ.ಸ.) :

ಆ್ಯಂಕರ್ : ಅಂಚೆ ಇಲಾಖೆಯಲ್ಲಿ ಐಟಿ 2.0 ತಂತ್ರಜ್ಞಾನ ಆರಂಭದಿಂದಾಗಿ ತ್ವರಿತ ಮತ್ತು ಉತ್ತಮ ಸೇವೆ ದೊರೆಯಲಿದೆ ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ರಮೇಶ ಮಡಿವಾಳರ ಹೇಳಿದರು.

ಭಾರತೀಯ ಅಂಚೆ ಇಲಾಖೆಯ ಪ್ರಧಾನ ಅಂಚೆ ಕಚೇರಿಯಲ್ಲಿ ಸೋಮವಾರ ಐಟಿ 2.0 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂಚೆ ಇಲಾಖೆಯ ಕಾರ್ಯಚಟುವಟಿಕೆಗಳಿಗೆ ಅಗತ್ಯವಾದ ತಂತ್ರಾಂಶಗಳನ್ನು ನೂರಿತ ಅಂಚೆ ತಂತ್ರಜ್ಞಾನರಿಂದ ತಯಾರಿಸಿದೆ. ಇದರಿಂದಾಗಿ ಅನುಭವ ಆಧಾರದಲ್ಲಿ ಹೆಚ್ಚು ಸರಳೀಕರಣಗೊಳಿಸಿದ ತಂತ್ರಜ್ಞಾನ ಅಂಚೆ ಇಲಾಖೆಗೆ ಲಭಿಸಿದೆ‌ ಎಂದರು.

ದೇಶದಲ್ಲಿಯೇ ಕನಾ೯ಟಕ ರಾಜ್ಯದಲ್ಲಿ ಪ್ರಾಯೋಗಿಕವಾಗಿ ಐಟಿ 2.0 ಜಾರಿಗೆ ತಂದಿದೆ. ಈಗಾಗಲೇ ಅಂಚೆ ಇಲಾಖೆ ಹಲವು ದಶಕಗಳಿಂದ ಜನರ ಮನೆ ಬಾಗಿಲಿಗೆ ವಿಶ್ವಾಸಾರ್ಹ ಸೇವೆ ನೀಡುತ್ತಿದೆ. ಈ ಸಾಲಿಗೆ ಈಗ ಹೊಸ ನವೀಕರಣದೊಂದಿಗೆ ಗ್ರಾಹಕ ಮತ್ತು ಅಂಚೆ ನೌಕರರ ಸ್ನೇಹಿಯಾಗಿ ರೂಪಾಂತರಗೊಳಲಿದೆ ಎಂದರು.

ಗದಗ ಉಪ ವಿಭಾಗ ಸಹಾಯಕ ಅಂಚೆ ಅಧೀಕ್ಷಕ ಶ್ರೀಕಾಂತ ಜಾದವ ಹಾಗೂ ಉಪ ಅಂಚೆ ಪಾಲಕ ದೊಡ್ಡಪ್ಪ ಇಟಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಂಚೆ ಇಲಾಖೆ ಕಾರ್ಯನಿರ್ವಹಣೆಯಲ್ಲಿ ಸುಧಾರಣೆ, ಬೆಳವಣಿಗೆ ಮತ್ತು ವಿವಿಧ ವಲಯಗಳಲ್ಲಿ‌ ಉತ್ಕೃಷ್ಟ ಸೇವಾ

ಸಾಧನೆ ಬಗೆಗೆ ತಿಳಿಸಿದರು.

ವಿಭಾಗೀಯ ಸಹಾಯಕ‌ಅಂಚೆ ಅಧೀಕ್ಷಕ ವಿ.ಸುನೀಲಕುಮಾರ, ಡಿ.ಜಿ.ಮ್ಯಾಗೇರಿ, ಶರಣಪ್ಪ ನಾಯ್ಕರ, ವೆಂಕಟೇಶ ಆಕಳವಾಡಿ, ವೀರಣ್ಣ ಅಂಗಡಿ, ಎಸ್.ವಿ.ಹಿರೇಮಠ, ಸಿದ್ಧಲಿಂಗೇಶ ಯಂಡಿಗೇರಿ, ವೈ.ಎಸ್.ಗುಗ್ಗರಿ, ಮನೋಹರ ಕಡಿಯವರ, ಉಮೇಶ ಸಂದಿಮನಿ, ಮಹಾಂತೇಶ ಗದಗ, ರವಿ ಜಾದವ, ವಾಣಿ ಮಾಂಡ್ರೆ, ಸರೋಜ ಪಟ್ಟಶೆಟ್ಟಿ, ನೀಲಮ್ಮ ದಿಬ್ಬದಮನಿ, ವಿದ್ಯಾ ಗದಗ , ಶಿವರಾಜ ಕ್ಷತ್ರಿಯವರ, ಮತ್ತಿತರು ಪಾಲ್ಗೊಂಡಿದ್ದರು.ಪ್ರಧಾನ ಅಂಚೆ ಪಾಲಕ ಮಂಜುಳಾ ದೇಗಿನಾಳ ಅಧ್ಯಕ್ಷತೆ ವಹಿಸಿದ್ದರು.‌

ಜನಮನ ಸೆಳೆದ ವಿವಿಧ ಚಿತ್ರಾವಳಿ..

ನವ ವಧುವಿನಂತೆ ಕಂಗೊಳಿಸಿದ ಪ್ರಧಾನ ಅಂಚೆ ಇಲಾಖೆ ಎಲ್ಲಾ ಕೌಂಟರಗಳಿಗೂ ವಿವಿಧ ಹೂ ಹಾಗೂ ಚಿತ್ರಾವಳಿಗಳಲ್ಲಿ ಅಂಚೆ ಇಲಾಖೆ ವಿವಿಧ ಸೇವೆ ಬಗೆಗೆ ರಂಗೋಲಿಗಳಿಂದ ಅಲಂಕಾರಿಸಲಾಗಿತ್ತು. ಇದರಿಂದಾಗಿ ಗ್ರಾಹಕರ ಮೆಚ್ಚುಗೆ ಪಡೆಯಿತು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande