ಗದಗ, 24 ಜೂನ್ (ಹಿ.ಸ.) :
ಆ್ಯಂಕರ್ : ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿಯ ಅವರ ಹೇಳಿಕೆಗೆ ರಾಜ್ಯ ಸಚಿವ ಎಚ್.ಕೆ. ಪಾಟೀಲ ಗದಗದಲ್ಲಿ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಎರಡು ವರ್ಷ ಮಲಗಿದ್ದರಾ? ಎಂಬ ಎಚ್.ಡಿಕೆ ಅವರ ಪ್ರಶ್ನೆಗೆ ತಿರುಗೇಟು ನೀಡಿದ ಪಾಟೀಲ, ನನ್ನ ಪತ್ರದ ಉದ್ದೇಶ ಸ್ಪಷ್ಟ, ಕಾರಣಗಳೊಂದಿಗೆ ಬರೆದಿದ್ದೇನೆ. ಅದು ಕಸದ ಬುಟ್ಟಿಗೆ ಹೋಗುತ್ತಾ, ಕ್ರಮದ ತೊಟ್ಟಿಗೆ ಹೋಗುತ್ತಾ ಎನ್ನುವುದನ್ನು ಸಿಎಂ ನಿರ್ಧರಿಸುತ್ತಾರೆ, ಎಂದು ಹೇಳಿದರು.
ಗದಗ ನಗರದಲ್ಲಿ⁸ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು, ಪೌರಾಣಿಕ ಪಾತ್ರಗಳಾದ ಕುಂಬಕರ್ಣ, ರಾವಣ ಇತ್ಯಾದಿಗಳ ಹೆಸರುಗಳನ್ನು ಬಳಸಿಕೊಂಡು ಮಾತನಾಡುವ ಪದ್ಧತಿಯನ್ನು ತೀವ್ರವಾಗಿ ಟೀಕಿಸಿದ ಪಾಟೀಲ, ಇಂತಹ ಮಾತುಗಳನ್ನು ಬಿಟ್ಟು, ಅಕ್ರಮ ಗಣಿ ಸಂಪತ್ತು ಕನ್ನಡಿಗರಿಗೆ ವಾಪಸ್ ತರಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಪೂಜೆ ಮಾಡ್ತಿದ್ರಾ ಅಂತ ಕೇಳೋವರು, ಸ್ವತಃ ಕುಮಾರಸ್ವಾಮಿ ಸಿಎಂ ಇದ್ದಾಗ ಅವರ ಕೈಯಲ್ಲೇ ಗಣಿ ಅಕ್ರಮ ವರದಿ ಇತ್ತು. ಆಗ ಆ ವರದಿಗಳನ್ನು ಅಭಿಷೇಕ ಮಾಡುತ್ತಾ ಕುಳಿತಿದ್ರಾ? ಎಂದು ಪಾಟೀಲ ತೀಕ್ಷ್ಣವಾಗಿ ಪ್ರಶ್ನಿಸಿದರು.
ಒಂದೂವರೆ ಲಕ್ಷ ಕೋಟಿ ರೂಪಾಯಿಗಳಷ್ಟು ಅಕ್ರಮ ಸಂಪತ್ತನ್ನು ಮರಳಿ ರಾಜ್ಯಕ್ಕೆ ತರುವ ಗಂಭೀರ ಉದ್ದೇಶವೇ ತನ್ನ ಪತ್ರದ ಮೂಲವೊಂದಾದರೂ, ಕುಮಾರಸ್ವಾಮಿ ಅವರು ಈ ನಿಟ್ಟಿನಲ್ಲಿ ಸಹಕರಿಸಬೇಕು ಎಂಬ ಸೂಚನೆ ನೀಡಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿರುವ ಅಕ್ರಮ ಗಣಿ ಲೂಟಿ ಪ್ರಕರಣದಿಂದ ರಾಜ್ಯದ ಜನರಿಗೆ ನಷ್ಟವಾಗಿರುವುದನ್ನು ಉಲ್ಲೇಖಿಸಿ, ಅದು ಮರಳಿ ಕನ್ನಡಿಗರಿಗೆ ಧಕ್ಕಬೇಕಾಗಿದೆ ಎಂಬುದು ಎಚ್.ಕೆ. ಪಾಟೀಲ ಅವರ ಮನವಿ ಆಗ್ರಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Lalita MP