ನವದೆಹಲಿ, 24 ಜೂನ್ (ಹಿ.ಸ.) :
ಆ್ಯಂಕರ್ : ಮಹಾರಾಷ್ಟ್ರ ಚುನಾವಣೆಗೆ ಸಂಬಂಧಿಸಿದಂತೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮ ಪತ್ರಿಕಾ ಲೇಖನದ ಮೂಲಕ ಚುನಾವಣಾ ಆಯೋಗದ ಬಗ್ಗೆ ತೀವ್ರ ಟೀಕೆ ನಡೆಸಿದ್ದಕ್ಕೆ ಸಂಬಂಧಿಸಿದಂತೆ, ರಾಹುಲ್ ಗಾಂಧಿಗೆ ಆಯೋಗವು ಜೂನ್ 12ರಂದು ಪತ್ರ ಬರೆದು ಸಭೆಗೆ ಆಹ್ವಾನಿಸಿದೆ.
ಆಯೋಗದ ಮೂಲಗಳ ಪ್ರಕಾರ, ಈ ಪತ್ರವನ್ನು ರಾಹುಲ್ ಅವರ ನಿವಾಸಕ್ಕೆ ಕಳುಹಿಸಲಾಗಿದ್ದು, ಇ-ಮೇಲ್ ಮೂಲಕವೂ ಪ್ರತಿಯನ್ನು ರವಾನಿಸಲಾಗಿದೆ. ಲೇಖನದ ಪ್ರತಿಕ್ರಿಯೆಯಾಗಿ ಆಯೋಗವು ತನ್ನ ಕೆಲಸ ಪದ್ದತಿಗಳು, ನಿಯಮಗಳು ಹಾಗೂ ಪ್ರಕ್ರಿಯೆಗಳನ್ನೂ ಸ್ಪಷ್ಟಪಡಿಸಿದೆ.
ಚುನಾವಣೆಗಳನ್ನು ಆಯೋಗವು ಸಂಪೂರ್ಣ ವಿಕೇಂದ್ರೀಕೃತ ರೀತಿಯಲ್ಲಿ, ನಿಯಮಬದ್ಧವಾಗಿ ನಡೆಸುತ್ತದೆ. ಬೂತ್ ಮಟ್ಟದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪಕ್ಷಗಳ ಏಜೆಂಟ್ಗಳನ್ನು ನಿಯೋಜಿಸಲಾಗಿದೆ. ಅಭ್ಯರ್ಥಿಗಳು ನ್ಯಾಯಾಲಯಗಳ ಮೂಲಕ ಕೆಲವು ವಿಷಯಗಳನ್ನು ಈವರೆಗೆ ಎತ್ತಿದ್ದಾರೆ. ಆದರೆ ನಿಮಗೆ ಇನ್ನೂ ಬೇರೆ ಸಮಸ್ಯೆಗಳಿದ್ದರೆ, ಲಿಖಿತವಾಗಿ ತಿಳಿಸಬಹುದು. ಸಭೆಗೂ ಬನ್ನಿ, ಎಂದು ಆಯೋಗ ಪತ್ರದಲ್ಲಿ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa