ಅಬಕಾರಿ ಇಲಾಖೆ : ಐವರು ವಾಹನ ಚಾಲಕರ ಅಂತಿಮ ಆಯ್ಕೆಪಟ್ಟಿ ಪ್ರಕಟ
ರಾಯಚೂರು, 24 ಜೂನ್ (ಹಿ.ಸ.) : ಆ್ಯಂಕರ್ : ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ 05 ವಾಹನ ಚಾಲಕರ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಕರ್ನಾಟಕ ಅಬಕಾರಿ (ನೇಮಕಾತಿ) ನಿಯಮಗಳು, 1996 ಮತ್ತು ಕಾಲಕಾಲಕ್ಕೆ ಚಾಲ್ತಿಯಲ್ಲಿರುವ ನಿಯಮಗಳನುಸಾರ ಆಯ್ಕೆ ಪ್ರಕ್ರಿಯೆಗಳನ್ನು ನಡೆಸಿ ಅಂತಿಮ ಆಯ್ಕೆ ಪಟ್ಟಿಯನ್ನು 28-
ಅಬಕಾರಿ ಇಲಾಖೆ : ಐವರು ವಾಹನ ಚಾಲಕರ ಅಂತಿಮ ಆಯ್ಕೆಪಟ್ಟಿ ಪ್ರಕಟ


ರಾಯಚೂರು, 24 ಜೂನ್ (ಹಿ.ಸ.) :

ಆ್ಯಂಕರ್ : ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ 05 ವಾಹನ ಚಾಲಕರ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಕರ್ನಾಟಕ ಅಬಕಾರಿ (ನೇಮಕಾತಿ) ನಿಯಮಗಳು, 1996 ಮತ್ತು ಕಾಲಕಾಲಕ್ಕೆ ಚಾಲ್ತಿಯಲ್ಲಿರುವ ನಿಯಮಗಳನುಸಾರ ಆಯ್ಕೆ ಪ್ರಕ್ರಿಯೆಗಳನ್ನು ನಡೆಸಿ ಅಂತಿಮ ಆಯ್ಕೆ ಪಟ್ಟಿಯನ್ನು 28-03-2025ರಂದು ಪ್ರಕಟಿಸಿ, ಈ ಆಯ್ಕೆಪಟ್ಟಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಈ ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿಗೆ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಅಬಕಾರಿ ಇಲಾಖೆಯ ವಾಹನ ಚಾಲಕರ ವೃಂದದ ನೇಮಕಾತಿ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ತಿಳಿಸಿದ್ದಾರೆ.

ಹನುಮೇಶ್ ತಂದೆ ಬಸಪ್ಪ ಬರಿನಾಳ ಸಾ.ಗುಡದನಾಳ ತಾ.ಲಿಂಗಸೂರ, ರಂಗನಾಥ ತಂದೆ ಚಿದಾನಂದ, ನಗರಗುಂದ ರೋಡ್ ಡಿಗ್ರಿ ಕಾಲೇಜ್ ಹತ್ತಿರ ದೇವದುರ್ಗ, ಅರುಣ್ ಕುಮಾರ್ ತಂದೆ ಆನಂದ ಕಳ್ಳಿಮನಿ ಮೇದಾಗಲ್ಲಿ ತಾ.ಸುರಪುರ, ಖಾಜಾ ನಿಹಾರ ಭಾಷ ತಂದೆ ಮಹಮದ್ ಖಾಸಿಂ, ಸಾ.ಅಸ್ಕಿಹಾಳ ತಾ.ರಾಯಚೂರ, ಮಹಮದ್ ಇದ್ರಿಸ್ ತಂದೆ ಮೆಹಬೂಬ್ ಸಾಬ್, ಅರಕೇರಾ, ತಾ.ದೇವದುರ್ಗ ಇವರು ಅವರು ಅಂತಿಮ ಆಯ್ಕೆಪಟ್ಟಿಯಲ್ಲಿ ಇರುವ ಅಭ್ಯರ್ಥಿಗಳಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande