ಮಣ್ಣೆತ್ತಿನ ಅಮಾವಾಸ್ಯೆಗೆ ಸಜ್ಜಾದ ಕಲಬುರಗಿ
ಕಲಬುರಗಿ, 24 ಜೂನ್ (ಹಿ.ಸ.): ಆ್ಯಂಕರ್:ಮಣ್ಣೆತ್ತಿನ ಅಮಾವಾಸ್ಯೆ ದಿನ ಮಣ್ಣಿನ ಜೋಡೆತ್ತುಗಳನ್ನು ಪೂಜಿಸುವ ಸಂಪ್ರದಾಯ ಹಿಂದಿನಿಂದಲೂ ಬಂದಿದ್ದು ಬಸವಣ್ಣನ ಹಬ್ಬವೆಂದು ಕರೆಯಲಾಗುತ್ತದೆ. ಈ ಹಿನ್ನಲೆಯಲ್ಲಿ ಮಂಗಳವಾರ ಕಲಬುರಗಿ ಪಟ್ಟಣದಲ್ಲಿ ಮಣ್ಣಿನ ಜೋಡೆತ್ತುಗಳ ಮಾರಾಟ ಜೋರಾಗಿದ್ದು, ಈ ಬಾರಿ ಪ್ಲಾಸ್ಟರ್ ಆ
ಮಣ್ಣೆತ್ತಿನ ಅಮಾವಾಸ್ಯೆಗೆ ಸಜ್ಜದ ಬಿಸಿಲೂರು


ಕಲಬುರಗಿ, 24 ಜೂನ್ (ಹಿ.ಸ.):

ಆ್ಯಂಕರ್:ಮಣ್ಣೆತ್ತಿನ ಅಮಾವಾಸ್ಯೆ ದಿನ ಮಣ್ಣಿನ ಜೋಡೆತ್ತುಗಳನ್ನು ಪೂಜಿಸುವ ಸಂಪ್ರದಾಯ ಹಿಂದಿನಿಂದಲೂ ಬಂದಿದ್ದು ಬಸವಣ್ಣನ ಹಬ್ಬವೆಂದು ಕರೆಯಲಾಗುತ್ತದೆ. ಈ ಹಿನ್ನಲೆಯಲ್ಲಿ ಮಂಗಳವಾರ ಕಲಬುರಗಿ ಪಟ್ಟಣದಲ್ಲಿ ಮಣ್ಣಿನ ಜೋಡೆತ್ತುಗಳ ಮಾರಾಟ ಜೋರಾಗಿದ್ದು, ಈ ಬಾರಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಬಣ್ಣ ಬಣ್ಣದ ಜೋಡೆತ್ತುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟು ಗಮನ ಸೆಳೆದಿವೆ.

ನಗರದ ಸೂಪರ್ ಮಾರ್ಕೆಟ್ ಸೇರಿದಂತೆ ಹಲವೆಡೆ ಮಣ್ಣೆತ್ತುಗಳು ಹಾಗೂ ಪೂಜಾ ಸಾಮಾಗ್ರಿಗಳ ಖರೀದಿಗೆ ಜನ ಮುಗಿಬಿದ್ದ ದೃಶ್ಯಗಳು ಕಂಡುಬಂದವೂ. ಜೋಡಿ ಎತ್ತುಗಳಿಗೆ 50 ರಿಂದ 150ವರೆಗೆ ದರ ನಿಗದಿ ಮಾಡಿ ಮಾರಾಟ ಮಾಡಲಾಗುತ್ತಿದೆ.. ಇತ್ತೀಚಿಗೆ ಪಿಒಪಿಯಿಂದ ತಯಾರಿಸಿದ ಎತ್ತುಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದರೂ ಆದರೆ ಮಣ್ಣಿನಿಂದ ತಯಾರಿಸಿದ ಎತ್ತುಗಳಿಗೆ ಬೇಡಿಕೆ ಹೆಚ್ಚು, ಗ್ರಾಮೀಣ ಭಾಗದಲ್ಲಿ ಮಣ್ಣೆತ್ತುಗಳನ್ನು ತಯಾರಿಸಿ ಮಣ್ಣೆತ್ತಿನ ಅಮವಾಸ್ಯೆಯನ್ನು ಸಂಭ್ರಮಿಸುವರು.

ಹಿಂದೂಸ್ತಾನ್ ಸಮಾಚಾರ್ / Samarth biral


 rajesh pande