ಕಲಬುರಗಿ, 24 ಜೂನ್ (ಹಿ.ಸ.) :
ಆ್ಯಂಕರ್ : ಬಿ.ಆರ್.ಪಾಟೀಲ್ ಓರ್ವ ಶಕುನಿ ಇದ್ದ ಹಾಗೆ, ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಜಮೀರ್ ಹಾಗೂ ಸಿದ್ದರಾಮಯ್ಯ ಅವರಿಗೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಹರ್ಷಾನಂದ್ ಗುತ್ತೇದಾರ್ ಆರೋಪಿಸಿದರು.
ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈನಾರಿಟಿ ಇಲಾಖೆಯಲ್ಲಿ 17 ಕೋಟಿ ಅನುದಾನದ ಬಗ್ಗೆ ಬಿ.ಆರ್.ಪಾಟೀಲ್ ಅಸಮಾಧಾನ ಹೊರಹಾಕಿದ ವಿಚಾರದ ಕುರಿತು ಮಾತನಾಡಿದ ಅವರು, ಸಚಿವ ಸ್ಥಾನಕ್ಕೆ ಬಿ.ಆರ್.ಪಾಟೀಲ್ ಪ್ಲ್ಯಾನ್ ಮಾಡಿದ್ದಾರೆ. ಮೈನಾರಿಟಿ ಇಲಾಖೆಯ 17 ಕೋಟಿ ಅನುದಾನದ ಟೆಂಡರ್ ಇನ್ನೂ ಆಗಿಲ್ಲ. ಆದರೆ ಶಾಸಕ ಬಿ.ಆರ್.ಪಾಟೀಲ್ ಕಾಮಗಾರಿ ಆರಂಭವಾಗಿದೆ ಎಂದು ಸುಳ್ಳು ಹೇಳುತ್ತಾರೆ. ಬಿ.ಆರ್.ಪಾಟೀಲ್ ಅಂದ್ರೆ ಬ್ಲ್ಯಾಕ್ ಮೇಲ್ ರಾಜೀನಾಮೆ ಪಾಟೀಲ್ ಎಂದು ಕೈ ನಾಯಕರೇ ಹೇಳುತ್ತಾರೆ, ಅವರದು ಸ್ವಾರ್ಥದ ರಾಜಕೀಯ, ಜನಪರ ಕಾಳಜಿ ಇಲ್ಲ ಎಂದು ದೂರಿದರು.
ಹಿಂದೂಸ್ತಾನ್ ಸಮಾಚಾರ್ / Samarth biral