ಗದಗ, 24 ಜೂನ್ (ಹಿ.ಸ.) :
ಆ್ಯಂಕರ್ : ಈ ವರ್ಷ ಜೂನ್ 25 ಕ್ಕೆ ತುರ್ತು ಪರಿಸ್ತಿತಿ ಘೋಷಣೆಯಾಗಿ 50 ವರ್ಷಗಳು ಈ ಕರಾಳ ಕಾಲಕಂಡದಲ್ಲಿ ನೆನಪಿಡುವ ದಿನವಾಗಿದ್ದು, ಇದರ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಯುವ ಮೋರ್ಚಾ ವತಿಯಿಂದ ಜಿಲ್ಲೆಯ ಮಂಡಲ ಮಟ್ಟದಿಂದ ಆಯ್ಕೆಯಾದ ಯುವಕ ಮತ್ತು ಯುವತಿಯರಿಗೆ ಅಂದಿನ ಕರಾಳ ದಿನಗಳು, ಮಾರಣಾಂತೀಕ ಹಲ್ಲೆ, ಹೋರಾಟ ಮತ್ತು ಸಂವಿಧಾನ ದುರ್ಬಳಕೆಯಾದ ಸಂಗತಿಗಳು ಹಾಗು ಮುಂತಾದ ಮಾಹಿತಿಯನ್ನು ನೀಡಲು ಗದಗ ನಗರದ ರಾಜೀವಗಾಂಧಿ ನಗರದಲ್ಲಿರುವ ಡಾ|| ಬಿ.ಎಫ್.ದಂಡಿನ ಕಾನೂನು ಕಾಲೇಜ್ನ ಆಡಿಟೊರಿಯಂ ನಲ್ಲಿ ದಿ, 26/06/2025 ರ ಗುರುವಾರ ಬೆಳಿಗ್ಗೆ 10:30 ಗಂಟೆಗೆ ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಶಾಸಕರು, ಮಾಜಿ ಸಚಿವರಾದ ಸಿ.ಸಿ.ಪಾಟೀಲ, ಬಿಜೆಪಿ ಗದಗ ಜಿಲ್ಲಾಧ್ಯಕ್ಷರಾದ ತೋಟಪ್ಪ(ರಾಜು) ಕುರುಡಗಿ, ಶಾಸಕರಾದ ಡಾ|| ಚಂದ್ರು ಲಮಾಣಿ, ಮಾಜಿ ಸಚಿವರಾದ ಕಳಕಪ್ಪ ಬಂಡಿ, ವಿಧಾನ ಪರಿಷತ್ ಸದಸ್ಯರಾದ ಎಸ್.ವ್ಹಿ.ಸಂಕನೂರ, ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂದೀಪ್ ರವಿ, ಶ್ರೇಯಸ್ ನಕಾಡೆ, ಅಮರೇಶ ರೈತನಗರ, ಭಾರ್ಗವಿ ದ್ರಾವಿಡ್, ಅಡವಿಸ್ವಾಮಿ, ರವಿ ದಂಡಿನ ಹಾಗು ಇನ್ನೂ ಹಲವಾರು ಪ್ರಮುಖರುಗಳು ಭಾಗವಹಿಸುವರು ಎಂದು ಬಿಜೆಪಿ ಗದಗ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಸಂತೋಷ ಅಕ್ಕಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷರಾದ ತೋಟಪ್ಪ(ರಾಜು) ಕುರುಡಗಿ, ಪಕ್ಷದ ಪ್ರಮುಖರಾದ ಎಂ.ಎಸ್.ಕರೀಗೌಡ್ರ, ರಾಘವೇಂದ್ರ ಯಳವತ್ತಿ, ಗದಗ ನಗರ ಯುವ ಮೋರ್ಚಾ ಅಧ್ಯಕ್ಷ ನವೀನ ಕೊಟೆಕಲ್, ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ನೆರೆಗಲ್, ವಿರೇಶಪ್ರಭು ಗದಗಿನ, ಮುಂಡರಗಿ ಯುವ ಮೋರ್ಚಾ ಅಧ್ಯಕ್ಷ ಶಿವಕುಮಾರ ಕುರಿ, ಜಿಲ್ಲಾ ತಂಡದ ನವೀನ ಕುರ್ತಕೋಟಿ, ನಗರದ ಶಶಿಧರಗೌಡ ಕಳ್ಳಿ, ವಿನಾಯಕ ಹೊರಕೇರಿ, ಪ್ರವೀಣ ಹಡಪದ, ರಜತ್ ಬಿಮ್ಕರ, ಸಾಗರ ಪಾಪನಾಳ, ಕಾರ್ತಿಕ ಶಿಗ್ಲಿಮಠ, ಆನಂದ ಗಡಗೇರಿ ಹಾಗು ಇನ್ನೂ ಹಲವಾರು ಪ್ರಮುಖರುಗಳು ಭಾಗಿಯಾಗಿದ್ದರು.
ಹಿಂದೂಸ್ತಾನ್ ಸಮಾಚಾರ್ / Lalita MP