ಬೆಂಗಳೂರು ಬಂಡಿದೇವರ ಉತ್ಸವದಲ್ಲಿ ಒಕ್ಕಲಿಗ ಸಮುದಾಯದ ಭಾಗವಹಿಸಲು ಮನವಿ
ಬೆಂಗಳೂರು ಬಂಡಿದೇವರ ಉತ್ಸವದಲ್ಲಿ ಒಕ್ಕಲಿಗ ಸಮುದಾಯದ ಭಾಗವಹಿಸಲು ಮನವಿ
ಮಾಗೇರಿ ನಾರಾಯಣಸ್ವಾಮಿ


ಕೋಲಾರ, ೨೪ ಜೂನ್ (ಹಿ.ಸ) :

ಆ್ಯಂಕರ್ : ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಾಲಾನಂದನಾಥ ಮಹಾ ಸ್ವಾಮೀಜಿಯವರ ಆಶೀರ್ವಾದ ದೊಂದಿಗೆ ಇದೇ ತಿಂಗಳ ೨೫, ೨೬ ಮತ್ತು ೨೭ ರಂದು ರಾಜ್ಯದ ಒಕ್ಕಲಿಗ ಸಮುದಾಯದ ಸ್ವಾಭಿಮಾನದ ಕುರುಹಾಗಿ ಸಜ್ಜನಿಕೆ ಸಂಭ್ರಮದಿ0ದ ಸರಳವಾಗಿ ಬೆಂಗಳೂರಿನಲ್ಲಿ ಬೆಂಗಳೂರು ಬಂಡಿದೇವರ ಉತ್ಸವ ೨೦೨೫ ರನ್ನು ಪ್ರಥಮಬಾರಿಗೆ ಆಚರಿಸುತ್ತಿದ್ದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಒಕ್ಕಲಿಗ ಸಮುದಾಯದವರು ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ಸುಗೊಳಿಸಬೇಕೆಂದು ಬಂಡಿದೇವರು ಉತ್ಸವ ಆಚರಚಣಾ ಸಮಿತಿಯ ಸದಸ್ಯ ಮಾಗೇರಿ ನಾರಾಯಣಸ್ವಾಮಿ ಪತ್ರಿಕಾ ಹೇಳಿಕೆ ಮೂಲಕ ಮನವಿ ಮಾಡಿದ್ದಾರೆ.

ನಾಳೆ ಬೆಳಗ್ಗೆ ೯ ಗಂಟೆಗೆ ಬಸವನಗುಡಿ ದೊಡ್ಡ ಬಸವನ ಗುಡಿಯಲ್ಲಿ ಪೂಜೆ ಸಲ್ಲಿಸಿ ಗಂಗೆಯನ್ನು ಚಾಮರಾಜಪೇಟೆಯ ಒಕ್ಕಲಿಗರ ಸಂಘದ ಆವರಣಕ್ಕೆ ಮೆರವಣಿಗೆ ಮೂಲಕ ಆಗಮಿಸಿ ಬಂಡಿದೇವರ ಉತ್ಸವ ಆಚರಣೆಯ ಸಾಂಪ್ರದಾಯಿಕ ಶಾಸ್ತ್ರಗಳನ್ನು ಮಾಡಲಾಗುವುದು, ಜೂನ್ ೨೬ ರಂದು ಸಂಜೆ ೭ ಗಂಟೆಗೆ ಬಿ.ಬಿ.ಎಂ.ಪಿ ಮುಂಭಾಗದಿ0ದ ವಿಧಾನಸೌಧದ ಮುಂಭಾಗದವರೆಗೆ ಅಲಂಕೃತ ೧೨ ಬಂಡಿಗಳಲ್ಲಿ ಶಾಸ್ತ್ರೋಕ್ತವಾಗಿ ಮೆರವಣಿಗೆ ನಡೆಸಿ ವಿಧಾನ ಸೌಧದ ಮುಂದಿನ ನಾಡ ಪ್ರಭು ಕೆಂಪೇಗೌಡರ ಪ್ರತಿಮೆಗೆ ಗೌರವ ಸಲ್ಲಿಸಿ ಸಾಂಕೇತಿಕವಾಗಿ ಬೆಂಗಳೂರು ಬಂಡಿದೇವರ ಉತ್ಸವ ಆಚರಿಸಲಾಗುತ್ತದೆ. ಜೂ.೨೭ ರಂದು ರಾಜ್ಯದ ಎಲ್ಲೆಡೆ ನಾಡಪ್ರಭು ಕೆಂಪೇಗೌಡರ ಜನ್ಮದಿನವನ್ನು ಸಡಗರದಿಂದ ಆಚರಿಸಿ ಸಂಭ್ರಮಿಸುವುದಾಗಿ ತಿಳಿಸಿದ್ದಾರೆ.

ಚಿತ್ರ : ಮಾಗೇರಿ ನಾರಾಯಣಸ್ವಾಮಿ

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande