ಹಿಂದೂಸ್ಥಾನ ಸಮಾಚಾರ್ ವತಿಯಿಂದ ತುರ್ತು ಪರಿಸ್ಥಿತಿಯ 50ನೇ ವಾರ್ಷಿಕೋತ್ಸವ
ನವದೆಹಲಿ, 24 ಜೂನ್ (ಹಿ.ಸ.) : ಆ್ಯಂಕರ್ : ಹಿಂದೂಸ್ಥಾನ ಸಮಾಚಾರ್'' ಬಹುಭಾಷಾ ಸುದ್ದಿ ಸಂಸ್ಥೆ ತುರ್ತು ಪರಿಸ್ಥಿತಿಯ 50 ನೇ ವಾರ್ಷಿಕೋತ್ಸವದಂದು ದೆಹಲಿಯ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಪ್ರಧಾನ ಕಾರ್ಯ
HS


ನವದೆಹಲಿ, 24 ಜೂನ್ (ಹಿ.ಸ.) :

ಆ್ಯಂಕರ್ : ಹಿಂದೂಸ್ಥಾನ ಸಮಾಚಾರ್' ಬಹುಭಾಷಾ ಸುದ್ದಿ ಸಂಸ್ಥೆ ತುರ್ತು ಪರಿಸ್ಥಿತಿಯ 50 ನೇ ವಾರ್ಷಿಕೋತ್ಸವದಂದು ದೆಹಲಿಯ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

'ಸಂವಿಧಾನ ಹತ್ಯೆ ದಿವಸ್' ಕಾರ್ಯಕ್ರಮದಲ್ಲಿ, ತುರ್ತು ಪರಿಸ್ಥಿತಿಯ ಕರಾಳ ಅಧ್ಯಾಯದ ನೆನಪು, ಪಾಠ ಮತ್ತು ಸಂದೇಶವನ್ನು ಕೇಂದ್ರೀಕರಿಸಿ ಸಂವಾದ ಮತ್ತು ಚರ್ಚೆ ನಡೆಯಲಿದೆ.

ಕಾರ್ಯಕ್ರಮದಲ್ಲಿ, ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಅಧ್ಯಕ್ಷ , ಹಿಂದೂಸ್ತಾನ್ ಸಮಾಚಾರ ಸಮೂಹ ಸಂಪಾದಕ ಪದ್ಮಭೂಷಣ್ ರಾಮ್ ಬಹದ್ದೂರ್ ರೈ ಮತ್ತು ರಾಷ್ಟ್ರೀಯ ಸ್ವಾಭಿಮಾನ್ ಆಂದೋಲನದ ಸ್ಥಾಪಕ ಅಧ್ಯಕ್ಷ ಕೆ.ಎನ್. ಗೋವಿಂದಾಚಾರ್ಯ ಅವರಂತಹ ಪ್ರಮುಖ ಚಿಂತಕರು ಮತ್ತು ತುರ್ತು ಪರಿಸ್ಥಿತಿಯ ಸಾಕ್ಷಿಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

ಕಾರ್ಯಕ್ರಮದಲ್ಲಿ, ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಆಶ್ರಯದಲ್ಲಿ ತುರ್ತು ಪರಿಸ್ಥಿತಿಯನ್ನು ಆಧರಿಸಿದ ಪ್ರದರ್ಶನ ಮತ್ತು ಕಿರುಚಿತ್ರವನ್ನು ಪ್ರದರ್ಶಿಸಲಾಗುವುದು.

ಇದು ಯುವಕರಿಗೆ ಆ ಕಾಲದ ರಾಜಕೀಯ ಮತ್ತು ಸಾಮಾಜಿಕ ವಾಸ್ತವವನ್ನು ಎದುರಿಸಲು ಅವಕಾಶ ನೀಡುತ್ತದೆ. ಇದರೊಂದಿಗೆ, ಹಿಂದೂಸ್ತಾನ್ ಸಮಾಚಾರ್‌ನ ಪಾಕ್ಷಿಕ ನಿಯತಕಾಲಿಕೆ 'ಯುಗ್ವರ್ತ' ಮತ್ತು ತುರ್ತು ಪರಿಸ್ಥಿತಿಯನ್ನು ಆಧರಿಸಿದ ಮಾಸಿಕ ನಿಯತಕಾಲಿಕೆ 'ನವೋಥಾನ್' ವಿಶೇಷ ಸಂಚಿಕೆಗಳನ್ನು ಬಿಡುಗಡೆ ಮಾಡಲಾಗುತ್ತದೆ.

ಈ ಕುರಿತು ಮಾತನಾಡಿರುವ ಹಿಂದೂಸ್ತಾನ್ ಸಮಾಚಾರ ಮುಖ್ಯಸಂಪಾದಕ ರಾಜೇಶ್ ತಿವಾರಿ , ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಮಹತ್ವದ ಕುರಿತು ಕಾರ್ಯಕ್ರಮದಲ್ಲಿ ಚರ್ಚಿಸಲಾಗುವುದು. ಇದರೊಂದಿಗೆ, ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಂವಿಧಾನವನ್ನು ಬದಿಗಿಟ್ಟ ಘಟನೆಗಳು ಮತ್ತು ಅದರ ನಂತರ ನಡೆದ ಸಾಂವಿಧಾನಿಕ ಪುನಃಸ್ಥಾಪನೆಯ ಕುರಿತು ಅಭಿಪ್ರಾಯಗಳನ್ನು ಸಹ ಪ್ರಸ್ತುತಪಡಿಸಲಾಗುವುದು. ಸಂಸ್ಥೆಗಳ ಶಿಕ್ಷಣ ತಜ್ಞರು, ಸಂಶೋಧಕರು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಬುದ್ಧಿಜೀವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದೂಸ್ತಾನ್ ಸಮಾಚಾರ ಸುದ್ದಿ ಸಂಸ್ಥೆ ಅಧ್ಯಕ್ಷ ಅರವಿಂದ್ ಭಾಲಚಂದ್ರ ಮರ್ಡಿಕರ್ ವಹಿಸಲಿದ್ದಾರೆ. ಐಜಿಎನ್‌ಸಿಎ ಸದಸ್ಯ ಕಾರ್ಯದರ್ಶಿ ಡಾ. ಸಚ್ಚಿದಾನಂದ ಜೋಶಿ ಸ್ವಾಗತಿಸಲಿದ್ದಾರೆ. ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದ ನಿರ್ದೇಶಕ ಆಕಾಶ್ ಪಾಟೀಲ್ ಧನ್ಯವಾದ ಸಮರ್ಪಿಸಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande