ಬಾಗಲಕೋಟೆ, 23 ಜೂನ್ (ಹಿ.ಸ.) :
ಆ್ಯಂಕರ್ : ಜಿಲ್ಲಾ ಪೊಲೀಸ್ ಪ್ರಗತಿ ಪರಿಶೀಲನಾ ಸಭೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯ ನಿಮಿತ್ತ ಬಾಗಲಕೋಟೆ ಜಿಲ್ಲಾ ಪ್ರವಾಸ ಕೈಗೊಂಡಿರುವ ಗೃಹ ಸಚಿವ ಜಿ.ಪರಮೇಶ್ವರ ವಿಶ್ವವಿಖ್ಯಾತ ಪಾರಂಪರಿಕ ತಾಣವಾದ ಬಾದಾಮಿ ಏಕಶಿಲಾ ಗುಹಾಲಯಗಳಿಗೆ ಇಂದು ಬೆಳಗ್ಗೆ ಭೇಟಿ ನೀಡಿದರು.
ಬಾದಾಮಿ ಚಾಲುಕ್ಯರ ಅದ್ಭುತವಾದ ಶಿಲ್ಪಕಲೆಯು ವಿಶ್ವದಲ್ಲೇ ಕಲಾ ಶ್ರೀಮಂತಿಕೆಯನ್ನು ಹೊಂದಿರುವ ಪ್ರಮುಖ ತಾಣವಾಗಿದೆ ಎಂದು ಪರಮೇಶ್ವರ ಹೇಳಿದ್ದಾರೆ.
ಈ ವೇಳೆ ಬಾದಾಮಿಯ ನಾಲ್ಕು ಪ್ರತ್ಯೇಕ ಗುಹಾಲಯಗಳು ತನ್ನದೇ ಆದ ವಿಶಿಷ್ಟ ಮತ್ತು ಆಕರ್ಷಣೀಯ ಕೆತ್ತನೆಗಳಿಂದ ಜನಪ್ರಿಯವಾಗಿದೆ. ಮೊದಲು ಮೂರು ಗುಹಾಲಯಗಳಲ್ಲಿ ಶಿವ ಮತ್ತು ವಿಷ್ಣುವಿನ ವಿವಿಧ ರೂಪಗಳನ್ನು ಹೊಂದಿರುವ ಅವತಾರಗಳ ಕೆತ್ತನೆಗಳಿವೆ. ಕೊನೆಯ ಗುಹಾಲಯದಲ್ಲಿ ಜೈನ ತೀರ್ಥಂಕರರಿಗೆ ಸಮರ್ಪಿತವಾಗಿದೆ ಎಂಬುದು ಸೇರಿದಂತೆ ಇಲ್ಲಿನ ಮಹತ್ವಪೂರ್ಣವಾದ ಇತಿಹಾಸವನ್ನು ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಸಚಿವರಿಗೆ ವಿವರಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa