ಅರಾಭಿಕೊತ್ತನೂರಿನಲ್ಲಿ `ವಿಕ್ಕಿ ಬಾಲ್ ಕ್ರಿಕೆಟ್ ಟೂರ್ನಮೆಂಟ್'
ಅರಾಭಿಕೊತ್ತನೂರಿನಲ್ಲಿ `ವಿಕ್ಕಿ ಬಾಲ್ ಕ್ರಿಕೆಟ್ ಟೂರ್ನಮೆಂಟ್'
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಗ್ರಾಮದ ಯುವಕರ ಬಳಗದಿಂದ ಆಯೋಜಿಸಿದ್ದ `ವಿಕ್ಕಿ ಬಾಲ್ ಕ್ರಿಕೆಟ್ ಟೂರ್ನಮೆಂಟ್'ಗೆ ಡಿಸಿಪಿ ದೇವರಾಜ್ ಚಾಲನೆ ನೀಡಿದರು.


ಕೋಲಾರ, ೨೩ ಜೂನ್ (ಹಿ.ಸ) :

ಆ್ಯಂಕರ್ : ಕ್ರೀಡೆಗಳು ಗ್ರಾಮೀಣ ಪ್ರದೇಶದಲ್ಲಿ ಸೌಹಾರ್ದತೆ ಮೂಡಿಸಲು ಸಹಕಾರಿಯಾಗಿದ್ದು, ಆ.೧೫ ರಂದು ತಮ್ಮ ಸ್ವಗ್ರಾಮವಾದ ಕೋರಗೊಂಡಹಳ್ಳಿಯಲ್ಲಿ ಹಮ್ಮಿಕೊಂಡಿರುವ ಕ್ರಿಕೆಟ್ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಪ್ರಥಮ ಬಹುಮಾನವಾಗಿ ೧ ಲಕ್ಷ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ೫೦ ಸಾವಿರ ನೀಡುವುದಾಗಿ ಎಂದು ಬೆಂಗಳೂರು ಪೂರ್ವ ವಲಯ ಡಿಸಿಪಿ ದೇವರಾಜ್ ಘೋಷಿಸಿದರು.

ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಗ್ರಾಮದ ಯುವಕರ ಬಳಗದಿಂದ ಹಮ್ಮಿಕೊಂಡಿದ್ದ ಹಾಗೂ ೪೦ ತಂಡಗಳು ಪಾಲ್ಗೊಂಡಿದ್ದ `ವಿಕ್ಕಿ ಬಾಲ್ ಕ್ರಿಕೆಟ್ ಟೂರ್ನಮೆಂಟ್'ಗೆ ಚಾಲನೆ ನೀಡಿ ಮಾತನಾಡಿದರು.

ಕ್ರೀಡೆಗಳು ಗ್ರಾಮೀಣ ಪ್ರದೇಶದಲ್ಲಿ ಸೌಹಾರ್ದತೆ ಮೂಡಿಸುವುದರ ಜತೆಗೆ ಯುವಕರು ದುಶ್ಚಟಗಳಿಂದ ದೂರವಾಗಿ ಆರೋಗ್ಯವಂತರಾಗಲು ಸಹಕಾರಿಯಾಗಿದೆ ಎಂದ ಅವರು,ತಮ್ಮ ಸ್ವಗ್ರಾಮವಾದ ಕೋರಗೊಂಡಹಳ್ಳಿಯಲ್ಲೇ ನಿರ್ಮಿಸಿರುವ ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆ.೧೫ ರಂದು ನಡೆಯುವ ಪಂದ್ಯಗಲ್ಲಿ ವಿಜೇತ ತಂಡಕ್ಕೆ ೧ ಲಕ್ಷ ಪ್ರಥಮ ಬಹುಮಾನ ನೀಡುವ ಮೂಲಕ ಕ್ರೀಡೆಗಳನ್ನು ಪ್ರೋತ್ಸಾಹಿಸಲು ನಿರ್ಧರಿಸಲಾಗಿದೆ ಎಂದರು.

ಕ್ರೀಡೆಗಳಿ0ದ ಉತ್ತಮ ಆರೋಗ್ಯದ ಜತೆಗೆ ಕ್ರಿಯಾಶೀಲತೆ ನಿಮ್ಮದಾಗಲಿದ್ದು, ಆಟೋಟಗಳಿಗೆ ಆದ್ಯತೆ ನೀಡಿದರೆ ಜೀವನದಲ್ಲಿ ಶಿಸ್ತು ಕಲಿಸುವುದರ ಜತೆಗೆ ಸಮಾಜದಲ್ಲಿ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ ಯುವಜನತೆ ಕ್ರೀಡೆಗಳಿಂದ ದೂರವಾಗುತ್ತಿದ್ದಾರೆ ಎಂದು ವಿಷಾದಿಸಿದ ಅವರು, ಇದಕ್ಕೆ ಶಾಲೆ ಹಂತದಲ್ಲಿ ಮಕ್ಕಳನ್ನು ಪಠ್ಯಕ್ಕೆ ಸೀಮಿತಗೊಳಿಸುವ ಪೋಷಕರ ಮನಸ್ಥಿತಿಯೇ ಕಾರಣ ಎಂದು ತಿಳಿಸಿ, ಉತ್ತಮ ಅಂಕಗಳ ನಿರೀಕ್ಷೆಯಲ್ಲಿ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವುದನ್ನು ಮರೆಯಬಾರದು ಎಂದರು.

ಶಾರೀರಿಕ, ಮಾನಸಿಕ ಆರೋಗ್ಯದ ಜತೆಗೆ ಜೀವನದಲ್ಲಿ ಶಿಸ್ತು ಮೂಡಲು ಕ್ರೀಡೆಗಳು ಶಿಕ್ಷಣದ ಅಭಿಭಾಜ್ಯ ಭಾಗವಾಗಿದೆ ಎಂದ ಅವರು, ಕ್ರೀಡಾಸ್ಪೂರ್ತಿಯಿಂದ ಪಾಲ್ಗೊಳ್ಳಿ, ಕ್ರೀಡೆಯಲ್ಲಿ ಮಾತ್ರ ಎಲ್ಲರೂ ಭಾಗವಹಿಸಲು ಅವಕಾಶವಿದೆ, ಗೆಲುವು ಒಬ್ಬರಿಗೆ ಸಿಕ್ಕರೂ ಅದರಿಂದ ವಿಚಲಿತರಾಗದೇ ಉಳಿದವರು ಅಭ್ಯಾಸ ಮುಂದುವರೆಸಿ ಎಂದು ತಿಳಿಸಿದರು.

ಉತ್ತಮ ಪ್ರದರ್ಶನ ನೀಡುವುದು ಮುಖ್ಯ, ಆ ಮೂಲಕ ಕ್ರೀಡಾ ಮನೋಭಾವ ತೋರಬೇಕು ಎಂದ ಅವರು, ಸೋಲು-ಗೆಲುವು ಸಮನಾಗಿ ಸ್ವೀಕರಿಸಿ ಸೋತವರು ಮುಂದಿನ ಹೋರಾಟಕ್ಕೆ ಸಜ್ಜುಗೊಂಡು ಗೆಲ್ಲುವ ನಿರೀಕ್ಷೆಯೊಂದಿಗೆ ಅಭ್ಯಾಸ ಮುಂದುವರೆಸಬೇಕು ಅದು ಬಿಟ್ಟು ದ್ವೇಷ, ಅಸೂಯೆ ಬೆಳೆಸಿಕೊಳ್ಳಬಾರದು ಎಂದು ಸಲಹೆ ನೀಡಿದರು.

ಕ್ರೀಡೆಗಳ ಕುರಿತ ನಿರಾಸಕ್ತಿ ಸರಿಯಲ್ಲ ಎಂದ ಅವರು, ಇತ್ತೀಚಿನ ಬದಲಾದ ಆಹಾರ ಪದ್ದತಿಯಿಂದಾಗಿ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ದು, ಇದರಿಂದ ಮುಕ್ತರಾಗಲು ಕ್ರೀಡೆಗಳ ಅಗತ್ಯವಿದೆ. ರಾಜ್ಯ,ರಾಷ್ಟçಮಟ್ಟದಲ್ಲೂ ಉತ್ತಮ ಸಾಧನೆ ಮಾಡಿ ಹೆಸರು ಗಳಿಸಲು ಸಹಕಾರಿಯಾಗಿದ್ದು, ಕ್ರೀಡಾಸ್ಪೂರ್ತಿಯಿಂದ ಭಾಗವಹಿಸಿ ಎಂದು ಕೋರಿದರು.

ಕ್ರೀಡಾಕೂಟದಲ್ಲಿ ೪೦ ತಂಡಗಳು ಪಾಲ್ಗೊಂಡಿದ್ದು, ಫೈನಲ್ ಪಂದ್ಯ ಇದೇ ಜೂ.೨೯ ರಂದು ಅರಾಭಿಕೊತ್ತನೂರು ಗ್ರಾಮದಲ್ಲಿ ನಡೆಯಲಿದೆ ಎಂದು ಗ್ರಾಮದ ಯುವಕರ ಬಳಗದ ಸದಸ್ಯರು ತಿಳಿಸಿ ಇಂದಿನ ಪಂದ್ಯಾವಳಿಗೆ ನರಸಾಪುರದ ಹೆಚ್‌ಎಂಎನ್ ಮಂಜು ಅವರು ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಡಿಸಿಪಿ ದೇವರಾಜ್‌ರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅರಾಭಿಕೊತ್ತನೂರು ಯುವಕರ ಗಳಗದ ಸದಸ್ಯರು, ಕೋಲಾರದ ಆರ್‌ಆರ್ ಸ್ಪೋಟ್ಸ್ನ ನಾಗೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾಂಭ, ಮುನಿರಾಜು, ಮಾಜಿ ಸದಸ್ಯ ಎ.ಶ್ರೀಧರ್, ಹಾಲಿ ಸದಸ್ಯ ನಾಗರಾಜ್, ಮುಖಂಡರಾದ ಜಯರಾಮೇಗೌಡ, ಎ.ನಾರಾಯಣಪ್ಪ, ರಾಮಕೃಷ್ಣಪ್ಪ, ಎನ್. ವೆಂಕಟೇಶಪ್ಪ, ಕಿಶೋರ್ ಗೌಡ,ಶಶಾಂಕ್, ಮಧು, ಪ್ರತಾಪ್‌ಆಚಾರಿ ಸೇರಿದಂತೆ ಗ್ರಾಮದ ಮುಖಂಡರು, ಬಳಗದ ಪದಾಧಿಕಾರಿಗಳು ಹಾಗೂ ೪೦ ತಂಡಗಳ ಸದಸ್ಯರು ಹಾಜರಿದ್ದರು.

ಚಿತ್ರ : ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಗ್ರಾಮದ ಯುವಕರ ಬಳಗದಿಂದ ಆಯೋಜಿಸಿದ್ದ `ವಿಕ್ಕಿ ಬಾಲ್ ಕ್ರಿಕೆಟ್ ಟೂರ್ನಮೆಂಟ್'ಗೆ ಡಿಸಿಪಿ ದೇವರಾಜ್ ಚಾಲನೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande