ಶಿಕ್ಷಕ ದೇವೇಂದ್ರಗೌಡ ಪಾಟೀಲ್ ನಿಧನ
ಕೊಪ್ಪಳ, 22 ಜೂನ್ (ಹಿ.ಸ.) : ಆ್ಯಂಕರ್ : ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದ ಶಿಕ್ಷಕ ದೇವೇಂದ್ರಗೌಡ ಪಾಟೀಲ್ (52) ಅವರು ಭಾನುವಾರ ನಿಧನರಾದರು. ಮೃತರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್ ಹಲಗೇರಿ ಇವರ ಸಹೋದರ. ಶಿಕ್ಷಕ ದೇವೇಂದ್ರ
ಶಿಕ್ಷಕ ದೇವೇಂದ್ರಗೌಡ ಪಾಟೀಲ್ ನಿಧನ


ಕೊಪ್ಪಳ, 22 ಜೂನ್ (ಹಿ.ಸ.) :

ಆ್ಯಂಕರ್ : ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದ ಶಿಕ್ಷಕ ದೇವೇಂದ್ರಗೌಡ ಪಾಟೀಲ್ (52) ಅವರು ಭಾನುವಾರ ನಿಧನರಾದರು. ಮೃತರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್ ಹಲಗೇರಿ ಇವರ ಸಹೋದರ. ಶಿಕ್ಷಕ ದೇವೇಂದ್ರಗೌಡ ಅವರು ತಾಲೂಕಿನ ಹಣವಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿದ್ದರು.

ಮೃತರಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆಯು ಸ್ವಗ್ರಾಮ ಹಲಗೇರಿಯ ರುದ್ರಭೂಮಿಯಲ್ಲಿ ಸೋಮವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande