ಹುಬ್ಬಳ್ಳಿ, 22 ಜೂನ್ (ಹಿ.ಸ.) :
ಆ್ಯಂಕರ್ : ಮಳೆಗಾಲದಲ್ಲಿ ನೆಗಡಿ, ಜ್ವರ, ಕೆಮ್ಮು ಮುಂತಾದ ಸಾಮಾನ್ಯ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಅತ್ಯವಶ್ಯಕ. ನುಗ್ಗೆಕಾಯಿ ಸೂಪ್ ಇದಕ್ಕೆ ಒಳ್ಳೆಯ ಪರಿಹಾರ.
ಪದಾರ್ಥಗಳು: ನುಗ್ಗೆಕಾಯಿ (4-5), ಈರುಳ್ಳಿ, ಟೊಮ್ಯಾಟೊ, ಕೋಸುಗಡ್ಡೆ, ಬೆಳ್ಳುಳ್ಳಿ, ಶುಂಠಿ, ಉಪ್ಪು, ಅರಿಶಿನ ಪುಡಿ, ಜೀರಿಗೆ, ತುಪ್ಪ, ಕರಿಬೇವು.
ವಿಧಾನ: ಎಲ್ಲಾ ತರಕಾರಿಗಳನ್ನು ತೊಳೆದು ಕತ್ತರಿಸಿ, ಕುಕ್ಕರ್ನಲ್ಲಿ ನೀರು, ಮಸಾಲೆ ಸೇರಿಸಿ ಬೇಯಿಸಿ. ನಂತರ ನುಗ್ಗೆಕಾಯಿ ಒಳಭಾಗವನ್ನು ಚಮಚದಿಂದ ಕರಗಿ ಮಿಶ್ರಣಕ್ಕೆ ಸೇರಿಸಿ. ತುಪ್ಪದಲ್ಲಿ ಜೀರಿಗೆ-ಕರಿಬೇವು ಒಗ್ಗರಣೆ ಹಾಕಿ ಸೇರಿಸಿ.
ಲಾಭ: ನುಗ್ಗೆಕಾಯಿ ವಿಟಮಿನ್ ಸಿ, ಆಯರನ್, ಕ್ಯಾಲ್ಸಿಯಂ ಯುಕ್ತವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಮಳೆಗಾಲದ ತಂಪಿಗೆ ಉತ್ತಮ ಆರೋಗ್ಯಕ್ಕೆ ಈ ಸೂಪ್ ಅತ್ಯುತ್ತಮ ಆಯ್ಕೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa