ಕೋಲಾರ, ೨೨ ಜೂನ್ (ಹಿ.ಸ) :
ಆ್ಯಂಕರ್ : ಹಣವನ್ನು ಗಳಿಸುವುದು ಧರ್ಮಸಂಸ್ಥೆಗಳ ಗುರಿಯಾಗಬಾರದು. ಧರ್ಮವನ್ನು ಸಮಾಜದಲ್ಲಿ ಪಸರಿಸುವುದೇ ಧರ್ಮಸಂಸ್ಥೆಗಳ ಉದ್ದೇಶವಾಗಬೇಕು ಮತ್ತು ಗುರಿಯಾಗಬೇಕು ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ.ಎಂ.ಆರ್.ಜಯರಾಮ್ ಅಭಿಪ್ರಾಯಪಟ್ಟರು.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿ ನಡೆದ ಶ್ರೀಯೋಗಿನಾರೇಯಣ ಸಂಗೀತ ಕಲೆ ಮತ್ತು ಶಿಕ್ಷಣ ಟ್ರಸ್ಟ್ನ ನಾಲ್ಕನೇ ವಾರ್ಷಿಕೋತ್ಸವದ ಭಕ್ತಿಗಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಂತರು ತೋರಿದ ನಿಸ್ವಾರ್ಥದ ಬದುಕಿನ ಸಂದೇಶವನ್ನು ಪಾಲಿಸಬೇಕು. ಯಾವ ಧರ್ಮವನ್ನು ನಾವು ಪಾಲಿಸಬೇಕಾಗಿತ್ತೋ, ಅದನ್ನು ಪಾಲಿಸದೇ ಕೇವಲ ಸ್ವಾರ್ಥಕ್ಕೆ ಧರ್ಮವನ್ನು ಬಳಿಸಿಕೊಂಡಾಗ ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ. ಸಮಾಜದಲ್ಲಿ ಬೇಧವಿಲ್ಲದೆ ಸಾಮರಸ್ಯದಿಂದ ಕೂಡಿದ್ದರೆ ಅದೇ ಸನಾತನ ಧರ್ಮ. ಸಂತರ ಉದ್ದೇಶ ಇದೆ ಆಗಿದೆ. ಸಂತರು ನುಡಿದಿರುವ ಸತ್ಯಗಳನ್ನು ನಂಬಿದ್ದೇನೆ, ಅದರಂತೆ ನಡೆಯುತ್ತೇನೆ ಎನ್ನುವುದೇ ಸಂಗೀತವನ್ನು ಕಲಿಯುವ ಉದ್ದೇಶವಾಗಿದೆ. ನಾವು ಪುರಂದರದಾಸರಾಗಲು, ಕನಕದಾಸರಾಗಲು, ಕೈವಾರದ ತಾತಯ್ಯನವರಾಗಲು ಸಾಧ್ಯವಿಲ್ಲ, ಆದರೆ ಅವರ ತತ್ವಬೋಧನೆಗಳನ್ನು ನಂಬಿ ಅವರಲ್ಲಿ ಶರಣಾಗಬೇಕು ಎಂದರು.
ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಕಲರಾದ ವಾನರಾಶಿ ಬಾಲಕೃಷ್ಣ ಭಾಗವತರ್ ರವರು ಮಾತನಾಡಿ ಸಂಗೀತವು ಒಂದು ಪ್ರಾಚೀನವಾದ ವೈಶಿಷ್ಟಗಳಿಂದ ಕೂಡಿರುವ ಕಲೆ. ಹಲವಾರು ಸತ್ಪುರುಷ ದಾಸವರೇಣ್ಯರು ಭಗವಂತನನ್ನು ಸ್ತುತಿಸಿ ಕೊಂಡಾಡುತ್ತಾ, ಅಂತರ0ಗದಲ್ಲಿ ಮೂಡಿಬಂದ ಪದಗಳ ಸಮೂಹವನ್ನು ಕೀರ್ತನೆಗಳ ರೂಪದಲ್ಲಿ ರಚಿಸಿದ್ದಾರೆ. ಅ ಕೀರ್ತನೆಗಳನ್ನು ಭಕ್ತಿಭಾವದಿಂದ ಸಮರ್ಪಿಸುವ ವಿದ್ಯೆಯೇ ಸಂಗೀತ ಎಂದರು.
ಸಂಸ್ಥೆಯ ಮುಖ್ಯಸ್ಥೆ ಲಕ್ಷ್ಮಿ ಕೆಂಪರಾಜ್ ಮಾತನಾಡಿ ಸಂಗೀತವೆ0ಬುದು ಒಂದು ದೈವಿವಿದ್ಯೆ. ನಾನು ಕಲಿತ ವಿದ್ಯೆ ಸಮಾಜಕ್ಕೆ ತಲುಪಿಸಬೇಕು ಎಂಬ ಒಂದೇ ಒಂದು ಉದ್ದೇಶದಿಂದ ಈ ಸಂಸ್ಥೆಯನ್ನು ಹುಟ್ಟುಹಾಕಿದ್ದೇನೆ. ಗ್ರಾಮೀಣಭಾಗದಲ್ಲಿ ಸಂಗೀತ ಕಲೆಯನ್ನು ಪಸರಿಸುವ ಅಭಿಲಾಷೆಯಿಂದ ಈ ಸಂಸ್ಥೆಯನ್ನು ಆರಂಭಿಸಲಾಗಿದೆ. ಇದಕ್ಕೆ ಸಹಕಾರವನ್ನು ನೀಡುತ್ತಿರುವ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಕೈವಾರ ತಾತಯ್ಯನವರ, ತ್ಯಾಗರಾಜಸ್ವಾಮಿಗಳ, ಕನಕದಾಸರ, ಪುರಂದರದಾಸರ, ಅನ್ನಮಯ್ಯ ಹಾಗೂ ಹಲವಾರು ಕೀರ್ತನೆಕಾರರ ಕೀರ್ತನೆಗಳನ್ನು ಸಂಗೀತ ವಿದ್ವಾಂಸರುಗಳು ಸುಶ್ರಾವ್ಯವಾಗಿ ಹಾಡಿದರು. ಪಂಚರತ್ನ ಕೀರ್ತನೆಗಳ ಗೋಷ್ಠಿಗಾಯನವು ನಡೆಯಿತು. ಸಂಗೀತ ಶಾಲೆಯ ವಿದ್ಯಾರ್ಥಿಗಳು ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಭರತನಾಟ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕರಾದ ವಾನರಾಶಿ ಬಾಲಕೃಷ್ಣ ಭಾಗವತರ್, ಕೈವಾರ ಟ್ರಸ್ಟ್ನ ಉಪಾಧ್ಯಕ್ಷರಾದ ಜೆ.ವಿಭಾಕರರೆಡ್ಡಿ, ಖಜಾಂಚಿಗಳಾದ ಆರ್.ಪಿ.ಎಂ.ಸತ್ಯನಾರಾಯಣ್, ಚಿಂತಾಮಣಿ ಸಂಗೀತ ಶಾಲೆಯ ಪ್ರಾಂಶುಪಾಲೆ ಪದ್ಮಾವತಿ, ರಾಜ್ಯ ಪ್ರಶಸ್ತಿ ವಿಜೇತ ಕಲಾವಿದ ಕೈವಾರ ರಾಮನ್ನ, ಸಂಗೀತ ವಿದ್ವಾಂಸರಾದ ಕೆ.ರಾಮಕುಮಾರ್ ಬಾರಧ್ವಾಜ್ ಕೈವಾರ, ಶ್ಯಾಮಸುಂದರ್ ಶಿಡ್ಲಘಟ್ಟ, ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಆರ್.ವಿಜಯಲಕ್ಷ್ಮಿ, ಎನ್.ಕೆಂಪರಾಜ್, ಕೆ.ಎನ್.ರವಿ, ಕೆ.ಶಿಲ್ಪ, ಮುನಿವೆಂಕಟರವಣಪ್ಪ, ಎನ್.ಶಂಕರ್ ಹಾಗೂ ಸಂಗೀತ ಕಲಾವಿದರು ಭಾಗವಹಿಸಿದ್ದರು.
ಚಿತ್ರ : ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿ ನಡೆದ ಶ್ರೀಯೋಗಿನಾರೇಯಣ ಸಂಗೀತ ಕಲೆ ಮತ್ತು ಶಿಕ್ಷಣ ಟ್ರಸ್ಟ್ನ ನಾಲ್ಕನೇ ವಾರ್ಷಿಕೋತ್ಸವದ ಭಕ್ತಿಗಾನ ಸಮಾರಂಭವನ್ನು ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಉದ್ಘಾಟಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್