ಇಸ್ರೇಲಿ ವಾಯುದಾಳಿಯಲ್ಲಿ ಹೆಜ್ಬೊಲ್ಲಾ ನಾಯಕನ ಮಾಜಿ ಅಂಗರಕ್ಷಕ ಸಾವು
ಟೆಹ್ರಾನ್, 22 ಜೂನ್ (ಹಿ.ಸ.) : ಆ್ಯಂಕರ್ : ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಲೆಬನಾನಿನ ಹೆಜ್ಬೊಲ್ಲಾ ಸಂಘಟನೆಯ ಹಿರಿಯ ಸದಸ್ಯ ಅಬು ಅಲಿ ಖಲೀಲ್ ಹಾಗೂ ಇರಾಕಿನ ಶಸ್ತ್ರಬದ್ಧ ಗುಂಪು ಕತೈಬ್ ಸಯ್ಯದ್ ಅಲ್-ಶುಹಾದಾ ದ ಭದ್ರತಾ ಮುಖ್ಯಸ್ಥರು ಮೃತಪಟ್ಟಿದ್ದಾರೆ. ಅಬು ಅ
ಇಸ್ರೇಲಿ ವಾಯುದಾಳಿಯಲ್ಲಿ ಹೆಜ್ಬೊಲ್ಲಾ ನಾಯಕನ ಮಾಜಿ ಅಂಗರಕ್ಷಕ ಸಾವು


ಟೆಹ್ರಾನ್, 22 ಜೂನ್ (ಹಿ.ಸ.) :

ಆ್ಯಂಕರ್ : ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಲೆಬನಾನಿನ ಹೆಜ್ಬೊಲ್ಲಾ ಸಂಘಟನೆಯ ಹಿರಿಯ ಸದಸ್ಯ ಅಬು ಅಲಿ ಖಲೀಲ್ ಹಾಗೂ ಇರಾಕಿನ ಶಸ್ತ್ರಬದ್ಧ ಗುಂಪು ಕತೈಬ್ ಸಯ್ಯದ್ ಅಲ್-ಶುಹಾದಾ ದ ಭದ್ರತಾ ಮುಖ್ಯಸ್ಥರು ಮೃತಪಟ್ಟಿದ್ದಾರೆ.

ಅಬು ಅಲಿ ಖಲೀಲ್ ಹಿಂದೆ ಹೆಜ್ಬೊಲ್ಲಾ ನಾಯಕ ಹಸನ್ ನಸ್ರಲ್ಲಾ ಅವರ ಅಂಗರಕ್ಷಕರಾಗಿದ್ದು, ಅವರು ಈ ಸಂದರ್ಭದಲ್ಲಿ ಇರಾಕ್‌ನಲ್ಲಿ ಧಾರ್ಮಿಕ ಯಾತ್ರೆಯಲ್ಲಿದ್ದರು. ಅಲ್ಲಿಂದ ಅವರು ಟೆಹ್ರಾನ್‌ ತಲುಪಿದ ನಂತರ ದಾಳಿಗೆ ಬಲಿಯಾದರು. ಖಲೀಲ್ ಅವರ ಮಗನೂ ಈ ದಾಳಿಯಲ್ಲಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಈ ಸಾವನ್ನು ದೃಢಪಡಿಸುತ್ತಾ ಕತೈಬ್ ಗುಂಪು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಬೈರುತ್‌ನ ದಕ್ಷಿಣ ಭಾಗದ ದಹೀಹ್ ಪ್ರದೇಶದಲ್ಲಿ ಶೋಕಾಚರಣೆ ನಡೆದಿದೆ.

ಇದಕ್ಕೂ ಮುನ್ನ, ಇಸ್ರೇಲ್ ಬೈರುತ್ ಮೇಲೂ ದಾಳಿ ನಡೆಸಿದ್ದು, ಹಸನ್ ನಸ್ರಲ್ಲಾ ಅವರ ಸಾವಿನ ಬಗ್ಗೆ ಅನುಮಾನಗಳು ಮೂಡಿವೆ. ಇತ್ತೀಚಿನ ದಿನಗಳಲ್ಲಿ ಇರಾನ್-ಇಸ್ರೇಲ್ ನಡುವಿನ ವಿವಾದ ಗಂಭೀರ ರೂಪ ಪಡೆದುಕೊಂಡಿದ್ದು, ಪರಮಾಣು ಶಸ್ತ್ರಾಸ್ತ್ರ ಸಂಕುಲನದ ಕುರಿತು ಇಬ್ಬರೂ ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande