ಶಿವಮೊಗ್ಗ, 22 ಜೂನ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ದಿ ನಿಗಮವು 2025–26ನೇ ಸಾಲಿನ ಸಾಲ ಯೋಜನೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
ಉಪಲಭ್ಯ ಯೋಜನೆಗಳು: ಸ್ವಯಂ ಉದ್ಯೋಗ ನೇರ ಸಾಲ,ಆಹಾರ ವಾಹಿನಿ/ವಾಹಿನಿ ಯೋಜನೆ (ಬ್ಯಾಂಕ್ ಸಹಯೋಗದಲ್ಲಿ), ವಾಸತಿ ಜಲಶಕ್ತಿ ಯೋಜನೆ,ಶೈಕ್ಷಣಿಕ ಸಾಲ.
ಅರ್ಜಿ ಅರ್ಹತೆ:
ಸಾಮಾನ್ಯ ವರ್ಗದ ಆರ್ಯ ವೈಶ್ಯ ಸಮುದಾಯದವರು, ಜಾತಿ-ಆದಾಯ ಪ್ರಮಾಣ ಪತ್ರ (ನಮೂನೆ-ಜಿ), ಕರ್ನಾಟಕ ರಾಜ್ಯದ ಖಾಯಂ ನಿವಾಸಿ, ಆಧಾರ್ ಜೋಡಣೆ ಅಗತ್ಯ.
2019–22ರ ಅವಧಿಯಲ್ಲಿ ಸಾಲ ಪಡೆದವರು ಮರುಪಾವತಿ ಪೂರ್ಣಗೊಳಿಸಿದ್ದರೆ ಪುನಃ ಅರ್ಜಿ ಸಲ್ಲಿಸಲು ಅವಕಾಶವಿದೆ.
ವಿವರಗಳಿಗೆ ಸಂಪರ್ಕ:
ಸಹಾಯವಾಣಿ: 94484 51111
ವೆಬ್ಸೈಟ್: kacdc.karnataka.gov.in
ಕಚೇರಿ: ಭಾಗ್ಯ ನಿಲಯ, ಗಾಂಧಿನಗರ, ಶಿವಮೊಗ್ಗ – 577201
ಹಿಂದೂಸ್ತಾನ್ ಸಮಾಚಾರ್ / Rakesh Mahadevappa