ತೋಟದ ಮನೆಯಲ್ಲಿ ಕಳುವಾಗಿದ್ದ ವಸ್ತುಗಳ ವಶ : ಇಬ್ಬರು ಆರೋಪಿಗಳ ಬಂಧನ
ತೋಟದ ಮನೆಯಲ್ಲಿ ಕಳುವಾಗಿದ್ದ ವಸ್ತುಗಳ ವಶ : ಇಬ್ಬರು ಆರೋಪಿಗಳ ಬಂಧನ
ಬಂಗಾರಪೇಟೆ ಪೊಲೀಸರು ಕಳುವಾಗಿದ್ದ ಟೆಂಪೋ ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.


ಕೋಲಾರ, ೨೧ ಜೂನ್ (ಹಿ.ಸ) :

ಆ್ಯಂಕರ್ : ಬಂಗಾರಪೇಟೆ ಪೊಲೀಸರು ಮನೆ ಕನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ಸುಮಾರು ರೂಪಾಯಿ ಎರಡು ಲಕ್ಷದ ನಲವತ್ತು ಸಾವಿರ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಜೂ. ೧೯ ರಂದು ತಮ್ಮೇನಹಳ್ಳಿ ಗ್ರಾಮದ ಬಾಬು ಎಂಬುವರು ತಮ್ಮ ತೋಟದ ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ಬಂಗಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಬಂಗಾರಪೇಟೆ ಪಿಐ ಆರ್.ದಯಾನಂದ್ ಮತ್ತು ತಂಡದವರು ಕೋಲಾರದ ವಾಸಿಯಾದ ಮಂಜುನಾಥ ಮತ್ತು ಹೊಸಕೋಟೆ ವಾಸಿಯಾದ ಮುಖೇಶ್ ಎಂಬುವರನ್ನು ಬಂಧಿಸಿ, ಆರೋಪಿಗಳಿಂದ ಸುಮಾರು ರೂ.೨,೪೦,೦೦೦/- ಬೆಲೆ ಬಾಳುವ ಮೋಲ್ಡಿಂಗ್ ಕಂಬಿ, ಕಬ್ಬಿಣದ ಆಂಗಲ್‌ಗಳು, ಔಷದಿ ಸಿಂಪಡಣೆ ಮಾಡುವ ಒಂದು ಪೆಟ್ರೋಲ್ ಪಂಪ್ ಮತ್ತು ಇತರೆ ಕಬ್ಬಿಣದ ಕೃಷಿ ಉಪಕರಣಗಳು ಹಾಗೂ ಕಳ್ಳತನಕ್ಕೆ ಉಪಯೋಗಿಸಿದ್ದ ಸುಮಾರು ರೂ.೧೦,೦೦,೦೦೦/- ಬೆಲೆ ಬಾಳುವ ಒಂದು ಬೊಲೆರೋ ಟೆಂಪೋ ವಾಹನವನ್ನು ವಶಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪ್ರಕರಣ ದಾಖಲಾದ ೨೪ ಗಂಟೆಯೊಳಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕಳುವಾದ ಮಾಲು ಹಾಗೂ ಆರೋಪಿಗಳನ್ನು ಪತ್ತೆ ಮಾಡಿದ ಬಂಗಾರಪೇಟೆ ಪಿಐ ಆರ್.ದಯಾನಂದ್, ಎ.ಎಸ್.ಐ ವಿಜಯ್‌ಕುಮಾರ್ ಸಿಬ್ಬಂದಿಯಾದ ಮಂಜುನಾಥ್, ಗಜೇಂದ್ರ, ವಿಜಯ್ ಕುಮಾರ್, ಸಂತೋಷ್ ಕುಮಾರ್ ರವರುಗಳ ಉತ್ತಮ ಕೆಲಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು ಅವರು ಪ್ರಶಂಶಿಸಿದ್ದಾರೆ.

ಚಿತ್ರ : ಬಂಗಾರಪೇಟೆ ಪೊಲೀಸರು ಕಳುವಾಗಿದ್ದ ಟೆಂಪೋ ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande