ಜೂನ್ 9ರವರೆಗೂ ಕಾಯುತ್ತೇವೆ : ಜಂಟಿ ಸಮಿತಿ
ಬಳ್ಳಾರಿ, 02 ಜೂನ್ (ಹಿ.ಸ.) : ಆ್ಯಂಕರ್ : ಬೃಹತ್ ಕೈಗಾರಿಕೆಗಳ ಸ್ಥಾಪನೆಗಾಗಿ ಕುಡತಿನಿ, ಹರಗಿನಡೋಣಿ, ಜಾನೆಕುಂಟೆ, ವೇಣಿವೀರಾಪುರ, ಕೊಳಗಲ್ಲು, ಯರ್ರಂಗಳಿ ಮತ್ತು ಸಿದ್ದಮ್ಮನಹಳ್ಳಿ ವ್ಯಾಪ್ತಿಯ ಕೃಷಿ ಭೂಮಿಗಳನ್ನು ಸ್ವಾಧೀನ ಮಾಡಿಕೊಂಡಿರುವ ಸರ್ಕಾರ ಮತ್ತು ಕೈಗಾರಿಕಾ ಕಂಪನಿಗಳು ಜಿಲ್ಲಾ ನ್ಯಾಯಾಲ
ಜೂನ್ 9ರವರೆಗೂ ಕಾಯುತ್ತೇವೆ : ಜಂಟಿ ಸಮಿತಿ


ಬಳ್ಳಾರಿ, 02 ಜೂನ್ (ಹಿ.ಸ.) :

ಆ್ಯಂಕರ್ : ಬೃಹತ್ ಕೈಗಾರಿಕೆಗಳ ಸ್ಥಾಪನೆಗಾಗಿ ಕುಡತಿನಿ, ಹರಗಿನಡೋಣಿ, ಜಾನೆಕುಂಟೆ, ವೇಣಿವೀರಾಪುರ, ಕೊಳಗಲ್ಲು, ಯರ್ರಂಗಳಿ ಮತ್ತು ಸಿದ್ದಮ್ಮನಹಳ್ಳಿ ವ್ಯಾಪ್ತಿಯ ಕೃಷಿ ಭೂಮಿಗಳನ್ನು ಸ್ವಾಧೀನ ಮಾಡಿಕೊಂಡಿರುವ ಸರ್ಕಾರ ಮತ್ತು ಕೈಗಾರಿಕಾ ಕಂಪನಿಗಳು ಜಿಲ್ಲಾ ನ್ಯಾಯಾಲಯದ ತೀರ್ಪಿನಂತೆ ಪರಿಹಾರ ಕೊಡಲು ಕರ್ನಾಟಕ ಪ್ರಾಂತ ರೈತ ಸಂಘ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್, ಭೂ ಸಂತಸ್ತ್ರ ಹೋರಾಟ ಸಮಿತಿ ಹಾಗು ಕನ್ನಡ ಪರ ಸಂಘಟನೆಗಳ ಜಂಟಿ ಸಮಿತಿ ಆಗ್ರಹಿಸಿದೆ.

ರಾಜ್ಯ ಮುಖಂಡ ಯು. ಬಸವರಾಜ್, ಜೆ. ಸತ್ಯಬಾಬು ಅವರು ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿ,

14 ವರ್ಷಗಳ ಹಿಂದೆ 3 ಬೃಹತ್ ಕೈಗಾರಿಕೆಗಳ ಸ್ಥಾಪನೆಗಾಗಿ ಕರ್ನಾಟಕ ಸರ್ಕಾರ 12,500 ಎಕರೆ ಭೂಮಿಯನ್ನು ಕೆಐಡಿಬಿ ಮೂಲಕ ಸ್ವಾಧೀನ ಮಾಡಿಕೊಂಡು, ರೈತರಿಗೆ ಕಡಿಮೆ ಬೆಲೆ ನೀಡಿ, ಕೈಗಾರಿಕೆಗಳಿಗೆ ಹಂಚಿಕೆ ಮಾಡಿತ್ತು. ಈವರೆಗೂ ಕೈಗಾರಿಕೆಗಳು ಪ್ರಾರಂಭವಾಗಿಲ್ಲ. ಅಲ್ಲದೇ, ಈ ಭೂಮಿಗಳ ಮೇಲೆ ಅವಲಂಭನೆ ಆಗಿರುವ ರೈತರಿಗೂ ನೆರವಾಗಲು ಸರ್ಕಾರ ಯಾವುದೇ ಚಿಂತನೆ ನಡೆಸಿಲ್ಲ ಎಂದು ಅವರು ಆರೋಪಿಸಿದರು.

ಈ ನಿಟ್ಟಿನಲ್ಲಿ ಜಿಲ್ಲಾ ನ್ಯಾಯಾಲಯವು ನೀಡಿರುವ ತೀರ್ಪಿನ ಪ್ರಕಾರ ಭೂ ನಷ್ಟ ಪರಿಹಾರವನ್ನು ನೀಡಲು ಸರ್ಕಾರ ಮತ್ತು ವಿವಿಧ ಕಂಪನಿಗಳ ಆಡಳಿತ ಮಂಡಲಿಯು ಭೂ ಸಂತ್ರಸ್ತ ರೈತರು ಮತ್ತು ಭೂ ಸಂತ್ರಸ್ತ ರೈತರ ಹಿತಾಸಕ್ತಿಗಾಗಿ ಹೋರಾಡುತ್ತಿರುವ ಸಂಘಟನೆಗಳ ಸಭೆಯನ್ನು ಶೀಘ್ರದಲ್ಲೇ ಏರ್ಪಡಿಸಬೇಕು. ಇದಕ್ಕಾಗಿ ಹೋರಾಟಗಾರರು ಜೂನ್ 9ರ ಸೋಮವಾರವರೆಗೂ ಕಾದು ನೋಡುತ್ತೇವೆ. ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸದಿದ್ದಲ್ಲಿ ಕುಡತಿನಿಯಲ್ಲಿ ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪವನ್ನು ಪಡೆಯಲಿದೆ ಎಂದು ಅವರು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande