ಹೇಮಾವತಿ ನದಿ ನೀರು ಹಂಚಿಕೆ ವಿರುದ್ಧ ಪ್ರತಿಭಟನೆ ರಾಜಕೀಯ ಪ್ರೇರಿತ : ಶಿವಕುಮಾರ್
ಬೆಂಗಳೂರು, 02 ಜೂನ್ (ಹಿ.ಸ.) : ಆ್ಯಂಕರ್ : ಹೇಮಾವತಿ ನದಿ‌ ನೀರು ಕೆನಾಲ್​​ ವಿರುದ್ಧದ ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದೆ. ಸರ್ಕಾರವನ್ನು ಬೆದರಿಸುಲು ಆಗುವುದಿಲ್ಲ ಎಂದು ಉಪ‌ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ವಿಧಾನ ಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕುಮಾರಸ್
Dks


ಬೆಂಗಳೂರು, 02 ಜೂನ್ (ಹಿ.ಸ.) :

ಆ್ಯಂಕರ್ : ಹೇಮಾವತಿ ನದಿ‌ ನೀರು ಕೆನಾಲ್​​ ವಿರುದ್ಧದ ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದೆ. ಸರ್ಕಾರವನ್ನು ಬೆದರಿಸುಲು ಆಗುವುದಿಲ್ಲ ಎಂದು ಉಪ‌ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ವಿಧಾನ ಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ಕಾಲದಲ್ಲಿ ಈ ಕೆನಾಲ್ ಯೋಜನೆ ಮಂಜೂರಾತಿ ಆಗಿದೆ. ಯಡಿಯೂರಪ್ಪ ಅಧಿಕಾರದಲ್ಲಿ ಯೋಜನೆಗೆ ತಡೆ ನೀಡಿದ್ದರು. ಆಗ ಯೋಜನೆ ವೆಚ್ಚ 600 ಕೋಟಿ ರೂ ಇತ್ತು.‌ ಈಗ ಯೋಜನಾ ವೆಚ್ಚ ಸುಮಾರು 900 ಕೋಟಿ ರೂ‌.ನಿಂದ ಸಾವಿರ ಕೋಟಿಗೆ ತಲುಪಿದೆ. ಈಗಾಗಲೇ 400 ಕೋಟಿ ರೂ. ಬಿಡುಗಡೆಯಾಗಿದೆ.‌ ಕೆಲಸವೂ ಆರಂಭವಾಗಿದೆ ಎಂದರು.

ಬಿಜೆಪಿಯವರಿಗೆ ಯೋಜನೆ ಪ್ರಾರಂಭವಾಗಿರುವುದಕ್ಕೆ ಅಸೂಯೆ ಉಂಟಾಗಿದೆ. ಕುಣಿಗಲ್​​ನವರಿಗೆ ಕುಡಿಯುವ ನೀರಿನ ಕೊರತೆ ಇದೆ. 2014ರಿಂದ ಇಲ್ಲಿವರೆಗೆ ಕುಣಿಗಲ್​​ಗೆ ನೀರು ಹೋಗಬೇಕಿತ್ತು. ಅದರೆ ನೀರೂ ಹೋಗಿಲ್ಲ. ಈ ಯೋಜನೆಯಿಂದ ತುಮಕೂರಿನ ಜನತೆಗೆ ಯಾವುದೇ ತೊಂದರೆ ಆಗುವುದಿಲ್ಲ.‌ ಕುಣಿಗಲ್​​ಗೆ 3 ಟಿಎಂಸಿ ಹಾಗೂ ಮಾಗಡಿಗೆ 0.6 ಟಿಎಂಸಿ ನೀರು ಹೋಗಲಿದೆ. ರಾಮನಗರಕ್ಕೆ ಈ ನೀರಿನ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಯೋಜನೆ ಕುರಿತು ತಾಂತ್ರಿಕ ತಂಡ ರಚನೆ ಮಾಡಲು ತುಮಕೂರು ಶಾಸಕರು ಮನವಿ ಮಾಡಿದ್ದರು. ಅದರಂತೆ ಸಮಿತಿ ರಚಿಸಿ, ತಾಂತ್ರಿಕ ವರದಿಯೂ ಬಂತು. ಈಗ ಅವರೇ ಕಾನೂನು ಕೈಗೆ ತೆಗೆದುಕೊಂಡರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ನೀವು ಸರ್ಕಾರವನ್ನು ಬ್ಲ್ಯಾಕ್ ಮೇಲ್ ಮಾಡಲಾಗುವುದಿಲ್ಲ. ನೀವು ಏಕೆ ಎಲ್ಲಾ ಸ್ವಾಮೀಜಿಗಳನ್ನು ಕರೆತರುತ್ತಿದ್ದಿರಿ ಸ್ವಾಮೀಜಿಗಳಿಗೂ ಇದಕ್ಕೂ ಸಂಬಂಧ ಏನು ಶಿವಕುಮಾರ್ ಪ್ರಶ್ನಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande